ಇಂದಿರಾಗಾಂಧಿ ಕುರಿತು ಅವಹೇಳನಕಾರಿ ಹೇಳಿಕೆ ; ಬಂಧನ
Team Udayavani, Mar 31, 2019, 6:00 AM IST
ಹಳಿಯಾಳ: ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಮಾಜಿ ಪ್ರಧಾನಿ
ದಿ| ಇಂದಿರಾಗಾಂಧಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ
ಹಾಗೂ ಆ ಹೇಳಿಕೆಯನ್ನು ಲೈಕ್ ಮಾಡಿದ್ದ ಇಬ್ಬರು ಯುವಕರನ್ನು
ಹಳಿಯಾಳ ಪೊಲೀಸರು ಬಂಧಿಸಿದ್ದಾರೆ.ಪಟ್ಟಣದ ರಹವಾಸಿ ಸಂತೋಷ
ರಗಟೆ ಎಂಬಾತ ತನ್ನ ಫೇಸ್ಬುಕ್ ಖಾತೆಯಲ್ಲಿ ಇಂದಿರಾಗಾಂ ಧಿ
ಕುರಿತು ಅವಹೇಳನಕಾರಿ ಹೇಳಿಕೆ ಬರೆದು ಪೋಸ್ಟ್ ಮಾಡಿದ್ದ. ಇದಕ್ಕೆ
ನಿಖೀಲ್ ಫಡ್ನಿಸ್ ಎಂಬಾತ ಲೈಕ್ ಮಾಡಿದ್ದ. ಇವರಿಬ್ಬರನ್ನೂ
ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.