ಬಾಗಲಕೋಟೆಯಲ್ಲಿಂದು ಪ್ರಧಾನಿ ಮೋದಿ ಪ್ರಚಾರ
Team Udayavani, Apr 18, 2019, 3:00 AM IST
ಬಾಗಲಕೋಟೆ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏ.18ರಂದು ಮಧ್ಯಾಹ್ನ 2 ಗಂಟೆಗೆ ಬಾಗಲಕೋಟೆಗೆ ಆಗಮಿಸಲಿದ್ದು, ವಿಜಯಪುರ ಹಾಗೂ ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಬಾಗಲಕೋಟೆಯಲ್ಲಿ 16 ವಿಧಾನಸಭೆ ಕ್ಷೇತ್ರ (ಅವಳಿ ಜಿಲ್ಲೆ ಹಾಗೂ ಗದಗ ಜಿಲ್ಲೆಯ ನರಗುಂದ ಕ್ಷೇತ್ರ) ವ್ಯಾಪ್ತಿಯ ಸುಮಾರು 2 ಲಕ್ಷ ಜನ ಕಾರ್ಯಕರ್ತರು ಭಾಗವಹಿಸಲಿರುವ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ. ಬಿಸಿಲು ಹೆಚ್ಚಿರುವುದರಿಂದ 75 ಸಾವಿರ ಜನರು ಕುಳಿತುಕೊಳ್ಳಲು ಪೆಂಡಾಲ್ ವ್ಯವಸ್ಥೆ (ಕುರ್ಚಿ ಸಮೇತ) ಮಾಡಲಾಗಿದೆ.
ಅಲ್ಲದೇ 1.75 ಲಕ್ಷ ಜನರು ನಿಂತು ಭಾಷಣ ವೀಕ್ಷಿಸಬಹುದು. ಎಸ್ಪಿಜಿ ಕಮಾಂಡೋ ಪಡೆಯವರ ನಿರ್ದೇಶನ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸೂಚನೆ ಮೇರೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.