ಪ್ರಕಾಶ್ ಅಂಬೇಡ್ಕರ್-ಓವೈಸಿ ಜೊತೆ ಹೊಸ ಪಕ್ಷ: ಮುನವಳ್ಳಿ
Team Udayavani, Mar 8, 2019, 12:30 AM IST
ಬೆಳಗಾವಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಕಾಶ್ ಅಂಬೇಡ್ಕರ್ ಹಾಗೂ ಆಸಾದುದ್ದೀನ ಓವೈಸಿ ನೇತೃತ್ವದಲ್ಲಿ ಕರ್ನಾಟಕದ ಎಲ್ಲಾ 28 ಸ್ಥಾನಗಳಿಗೆ ಸ್ಪರ್ಧೆ ಮಾಡುತ್ತೇವೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಇಬ್ಬರು ನಾಯಕರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಹೊಸ ಪಕ್ಷ ಹುಟ್ಟು ಹಾಕಲಾಗುತ್ತಿದೆ. ಬರುವ ಮಾ.9ರಂದು ಈ ಸಂಬಂಧ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದ ಬಳಿಕ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಿ, ಹೊಸ ಪಕ್ಷದ ಹೆಸರನ್ನು ಘೋಷಣೆ ಮಾಡುತ್ತೇವೆ.
ಕಾರ್ಯಕ್ರಮದ ದಿನಾಂಕ ವನ್ನು ಸಮಾವೇಶದಲ್ಲಿ ಅಂತಿ ಮಗೊಳಿಸಲಾಗುವುದು. ನಂತರ ಎಲ್ಲ ಕಡೆ ನಮ್ಮ ನೂತನ ಪಕ್ಷದ ಕಾರ್ಯಕ್ರಮ, ಪ್ರಚಾರ ಆರಂಭವಾಗಲಿವೆ. ನಾವು ಸ್ಥಾಪನೆ ಮಾಡಲಿರುವ ನೂತನ ಪಕ್ಷ ಸದ್ಯಕ್ಕೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿ ಕೆಲಸ ಮಾಡಲಿದೆ. ಬೇರೆ ಪಕ್ಷದವರು ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾದರೆ ಅದನ್ನು ಪರಿಶೀಲಿಸುತ್ತೇವೆ. ಆದರೆ, ನಾವು ಸ್ಪರ್ಧೆ ಮಾಡುವುದಂತೂ ನಿಶ್ಚಿತ ಎಂದರು.