ವೈದ್ಯ ಕಾಲೇಜಿಗೆ ಮಂತ್ರಿ ಪದವಿ ತ್ಯಾಗ ಮಾಡಿದ್ದ ರಾಂಪೂರೆ


Team Udayavani, Mar 29, 2019, 7:24 AM IST

11-serew

ಕಲಬುರಗಿ: ಪ್ರತಿಷ್ಠಿತ ಹೈದ್ರಾಬಾದ್‌-ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ) ಸಂಸ್ಥಾಪಕ ಮಹಾದೇವಪ್ಪ ರಾಂಪೂರೆ ಒಬ್ಬರೇ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಸಲ ಗೆಲುವು ಸಾಧಿಸಿದ್ದಲ್ಲದೇ, ಎಚ್‌ಕೆಇ ಸಂಸ್ಥೆಗೆ ವೈದ್ಯಕೀಯ ಕಾಲೇಜು ಮಂಜೂರಿಗೆ ಆಗ್ರಹಿಸಿ ತಮಗೆ ಒಲಿದು ಬಂದಿದ್ದ ಸಚಿವ ಸ್ಥಾನವನ್ನೇ ತ್ಯಾಗ ಮಾಡಿದ್ದರು. ಮಹಾದೇವಪ್ಪ ಯಶ್ವಂತರಾವ ರಾಂಪೂರೆ, 1957, 1962 ಹಾಗೂ 1967ರಲ್ಲಿ ಭಾರತೀಯ ಕಾಂಗ್ರೆಸ್‌ ಪಕ್ಷದಿಂದ ಕಲಬುರಗಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 1957ರಲ್ಲಿ ಕಲಬುರಗಿ-ಬೀದರ್‌ ಲೋಕಸಭಾ ಕ್ಷೇತ್ರ ಒಳಗೊಂಡು ದ್ವಿಸದಸ್ಯತ್ವ ಇದ್ದಾಗ ಮೊದಲ ಬಾರಿಗೆ ಆಯ್ಕೆಯಾಗಿದ್ದರೆ, ಬೀದರ್‌ದಿಂದ ಶಂಕರದೇವ
ಎನ್ನುವರು ಆಯ್ಕೆಯಾಗಿದ್ದರು. ರಾಂಪೂರೆ ಅವರು ಪ್ರಥಮ ಸಲ 1,39,041, ಎರಡನೇ ಸಲ 92,399 ಹಾಗೂ ಮೂರನೇ ಸಲ 1,36,188 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ರಾಂಪೂರೆ ನಂತರ ಉಳಿದಂತೆ ನಾಲ್ವರು ಎರಡೆರಡು ಸಲ ಗೆದ್ದಿದ್ದಾರೆ.

ರಾಂಪೂರೆ ಅವರು ಎರಡನೇ  ಸಲ 1962ರಲ್ಲಿ ಸಂಸತ್‌ ಸದಸ್ಯರಾಗಿ ಆಯ್ಕೆಯಾಗಿದ್ದಾಗ ಜವಾಹರಲಾಲ ನೆಹರೂ ಸಂಪುಟದಲ್ಲಿ ಶಿಕ್ಷಣ ಇಲ್ಲವೇ ಆರೋಗ್ಯ ಮಂತ್ರಿಗಳಾಗುವಂತೆ ಆಹ್ವಾನ ಬಂದಿತ್ತು. ಆದರೆ, ರಾಂಪೂರೆ ಅವರು ತಮ್ಮ ಎಚ್‌
ಕೆಇ ಸಂಸ್ಥೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡುವುದರ ಜತೆಗೆ, ವೈದ್ಯಕೀಯ ಕಾಲೇಜು ಮಂಜೂರಾತಿಗೆ ಇರುವ 50 ಲಕ್ಷ ರೂ.ಶುಲ್ಕಕ್ಕೆವಿನಾಯಿತಿ ನೀಡುವುದಾದರೆ ಮಾತ್ರ ತಮಗೆ ಮಂತ್ರಿ ಪದವಿ ನೀಡಿದಂತೆ ಎಂದು ನಯವಾಗಿ ಆಹ್ವಾನ ತಿರಸ್ಕರಿಸಿದ್ದರಂತೆ. ನಂತರ, 1963ರಲ್ಲಿ ಕಲಬುರಗಿ ಎಚ್‌ಕೆಇ ಶಿಕ್ಷಣ ಸಂಸ್ಥೆಗೆ ವೈದ್ಯಕೀಯ ಕಾಲೇಜು ಮಂಜೂರಾಯಿತು. ಇದರ, ಜತೆಗೆ ಬೆಳಗಾವಿ ಕೆಎಲ್‌ಇ ಹಾಗೂ ದಾವಣಗೆರೆ ಬಾಪೂಜಿ ಶಿಕ್ಷಣ ಸಂಸ್ಥೆಗೂ ವೈದ್ಯಕೀಯ ಕಾಲೇಜುಗಳು ಮಂಜೂರಾದವು. ಒಂದು ವೇಳೆ, ರಾಂಪೂರೆ ಅವರು ಕೇಂದ್ರದಲ್ಲಿ ಮಂತ್ರಿಯಾಗಿದ್ದರೆ ಕಲಬುರಗಿಗೆ ವೈದ್ಯಕೀಯ ಕಾಲೇಜು ಮಂಜೂರಾಗುತ್ತಿತ್ತೋ ಇಲ್ಲವೋ ಗೊತ್ತಿರಲಿಲ್ಲ. ಆದರೆ, ಸಚಿವ ಸ್ಥಾನದ ತ್ಯಾಗದಿಂದ ವೈದ್ಯಕೀಯ ಕಾಲೇಜು ಬಂತು.

ಎರಡು ಸಲ ಆಯ್ಕೆಯಾದವರು: ರಾಂಪೂರೆ ಅವರು ಮೂರು ಸಲ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದನ್ನು ಬಿಟ್ಟರೆ, ನಾಲ್ವರು ಮಾತ್ರ ಎರಡು ಸಲ ಚುನಾಯಿತರಾಗಿದ್ದಾರೆ. ಸಿದ್ರಾಮರೆಡ್ಡಿಯವರು 1974 ಹಾಗೂ 1977ರಲ್ಲಿ, ಡಾ|
ಬಿ.ಜಿ.ಜವಳಿಯವರು 1989 ಹಾಗೂ 1991ರಲ್ಲಿ, ಇಕ್ಬಾಲ್‌ ಅಹ್ಮದ ಸರಡಗಿಯವರು 1999 ಹಾಗೂ 2004ರಲ್ಲಿ ಆಯ್ಕೆಯಾಗಿದ್ದರೆ, ಹಾಲಿ ಸಂಸದ ಡಾ|ಮಲ್ಲಿಕಾರ್ಜುನ ಖರ್ಗೆ 2009 ಹಾಗೂ 2014ರಲ್ಲಿ ಆಯ್ಕೆಯಾಗಿ ಈಗ ಮೂರನೇ ಗೆಲುವಿನ ಅಗ್ನಿ
ಪರೀಕ್ಷೆಗೆ ಮುಂದಾಗಿದ್ದಾರೆ.

ಮೂವರು ಮಂತ್ರಿ: ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸತ್‌ ಸದಸ್ಯರಲ್ಲಿ ಮೂವರು ಕೇಂದ್ರದಲ್ಲಿ ಮಂತ್ರಿಗಳಾಗಿದ್ದಾರೆ. 1980ರಲ್ಲಿ ನಡೆದ ಚುನಾವಣೆಯಲ್ಲಿ ಧರ್ಮಸಿಂಗ್‌ ಅವರು ಕಲಬುರಗಿ ಲೋಕಸಭಾ ಸದಸ್ಯರಾಗಿ ಚುನಾಯಿತರಾದರೂ ಸಂಸತ್‌ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿಲ್ಲ. ಏಕೆಂದರೆ, ಅಟಲ್‌ ಬಿಹಾರಿ ವಾಜಪೇಯಿ ಎದುರು ಪರಾಭವಗೊಂಡ ಕೇರಳದ ಸಿ.ಎಂ.ಸ್ಟೀಫನ್‌ ಅವರಿಗಾಗಿ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ಸೂಚನೆ ಮೇರೆಗೆ ಕಲಬುರಗಿ ಕ್ಷೇತ್ರ ಬಿಟ್ಟು ಕೊಡಬೇಕಾಯಿತು.
ಹೀಗಾಗಿ, ಧರ್ಮಸಿಂಗ್‌ ಸಂಸತ್ತು ಪ್ರವೇಶಿಸುವ ಮುಂಚೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಸಿ.ಎಂ.ಸ್ಟೀಫನ್‌ 1,50,665 ಮತಗಳನ್ನು ಪಡೆದು ಚುನಾಯಿತರಾದರಲ್ಲದೇ ಕೇಂದ್ರದಲ್ಲಿ ಸಂಪರ್ಕ
ಖಾತೆ ಮಂತ್ರಿಯಾದರು.

ವೀರೇಂದ್ರ ಪಾಟೀಲ ಅವರು 1984ರ ಡಿಸೆಂಬರ್‌ ತಿಂಗಳಲ್ಲಿ ನಡೆದ ಲೋಕಸಭಾ
ಚುನಾವಣೆಯಲ್ಲಿ ಚುನಾಯಿತರಾಗಿ ರಾಜೀವ್‌ ಗಾಂಧಿ ಸಂಪುಟದಲ್ಲಿ ಕೇಂದ್ರದ ಕಾರ್ಮಿಕ ಮತ್ತು ಪೆಟ್ರೋಲಿಯಂ ಖಾತೆ ಮಂತ್ರಿಗಳಾದರು. 2009ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಥಮ ಬಾರಿಗೆ ಸಂಸತ್‌ ಸದಸ್ಯರಾಗಿ
ಚುನಾಯಿತರಾಗಿ ಡಾ| ಮನಮೋಹನ್‌ಸಿಂಗ್‌ ಸಂಪುಟದಲ್ಲಿ ಮೊದಲು ಕಾರ್ಮಿಕ ಖಾತೆ ನಂತರ ರೈಲ್ವೆ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

11 ತಿಂಗಳಾದರೂ ನಡೆಯಲಿಲ್ಲ ಉಪಚುನಾವಣೆ

1980ರಲ್ಲಿ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾದ ಸಿ.ಎಂ.ಸ್ಟೀಫನ್‌ ಸಂಸತ್‌ ಸದಸ್ಯತ್ವದ ಅವಧಿ ಇನ್ನೂ ಒಂದು ವರ್ಷ ಇರುವಾಗಲೇ ಕೊನೆಯುಸಿರೆಳೆದರು. 11 ತಿಂಗಳ ಕಾಲ ಕಲಬುರಗಿ ಸಂಸತ್‌ ಸ್ಥಾನ ಖಾಲಿ ಇದ್ದರೂ ಉಪಚುನಾವಣೆಯೇ ನಡೆಯಲಿಲ್ಲ. ಸಿ.ಎಂ.ಸ್ಟೀಫನ್‌ 1984ರ ಜ.16ರಂದು ಮೃತಪಟ್ಟರು. ಮುಂದೆ 11 ತಿಂಗಳ ಬಳಿಕ 1984ರ ಡಿಸೆಂಬರ್‌ ತಿಂಗಳಲ್ಲಿ ಸಾರ್ವತ್ರಿಕ ಲೋಕಸಭಾ
ಚುನಾವಣೆ ನಡೆಯಿತು. ಒಂದೇ ಅವಧಿಯಲ್ಲಿ ಎರಡು ಸಲ ಉಪಚುನಾವಣೆ ನಡೆಸಬಾರದು ಎಂಬ ನಿಯಮವಿಲ್ಲವಾದರೂ ಚುನಾವಣೆ ನಡೆಯಲಿಲ್ಲ.

ಪ್ರಥಮ ಸಂಸದ ಸ್ವಾಮಿ ರಮಾನಂದ ತೀರ್ಥರು
ರಾಜ್ಯಗಳ ಪುನರ್‌ ವಿಂಗಡಣೆ ಮುಂಚೆ 1952ರಲ್ಲಿ ನಡೆದ ದೇಶದ ಚುನಾವಣೆಯಲ್ಲಿ ಹೈ-ಕ ವಿಮೋಚನಾ ಚಳವಳಿ ನೇತಾರ, ಸ್ವಾತಂತ್ರ್ಯ ಹೋರಾಟಗಾರ ಸ್ವಾಮಿ ರಮಾನಂದ ತೀರ್ಥರು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಪ್ರಥಮ ಸಂಸತ್‌ ಸದಸ್ಯರಾಗಿ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದಿಂದ ಸ್ವಾತಂತ್ರ್ಯ ಹೋರಾಟಗಾರ ಕಲಬುರಗಿಯ ಜಗನ್ನಾಥ ಚಂಡ್ರಕಿ ಚುನಾಯಿತರಾಗಿದ್ದರು.

ಹಣಮಂದರಾವ ಭೈರಾಮಡಗಿ

ಟಾಪ್ ನ್ಯೂಸ್

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.