ಬಿಜೆಪಿ ಜಾತಿವಾದ ಪಕ್ಷವಲ್ಲ
Team Udayavani, Apr 5, 2019, 6:10 AM IST
ಬಾಗಲಕೋಟೆ: ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಒಂದೇ ಒಂದು ಟಿಕೆಟ್ ಕೂಡ ಹಿಂದುಳಿದವರಿಗೆ ಕೊಟ್ಟಿಲ್ಲ ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, “ನಮ್ಮದು ಜಾತಿವಾದದ ಪಕ್ಷವಲ್ಲ’ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,ಬಿಜೆಪಿ ಕೋಮವಾದ, ಜಾತಿವಾದ ಪಕ್ಷ ಅಲ್ಲ. ದೇಶಭಕ್ತಿ ಹೊಂದಿರುವ ನಮ್ಮ ಪಕ್ಷಕ್ಕೆ ಜನರು ಮತ ಕೊಡುತ್ತಾರೆ. ಬಿಜೆಪಿಯಲ್ಲಿ ಎಲ್ಲರೂ ರಾಷ್ಟ್ರ ಭಕ್ತರು. ಜಾತಿ ನೋಡಿ ಟಿಕೆಟ್ ಕೊಡಲ್ಲ. ವಿಧಾನಸಭೆ ಚುನಾವಣೆ ಬಳಿಕ ರಾಹು, ಕೇತು, ಶನಿ ಬಗ್ಗೆ ಸಿದ್ದರಾಮಯ್ಯ ಹೇಳಿದ್ದರು. ಅದು ಯಾರು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.