ಚುನಾವಣೆ ಪ್ರಚಾರ ಧ್ವಜ, ಬ್ಯಾನರ್‌ ಬಳಕೆಗೆ ನಿಯಮಾವಳಿ


Team Udayavani, Apr 8, 2019, 6:30 AM IST

sajit

ಕಾಸರಗೋಡು: ಲೋಕಸಭೆ ಚುನಾವಣೆ ಪ್ರಚಾರ ಸಂಬಂಧ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಧ್ವಜ, ಬ್ಯಾನರ್‌ ಇತ್ಯಾದಿ ಬಳಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣೆ ಆಯೋಗದ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ ಬಾಬು ತಿಳಿಸಿದ್ದಾರೆ.

ಚುನಾವಣೆ ಸಂಬಂಧ ಸ್ಥಾಪಿಸುವ ಧ್ವಜ, ತೋರಣ, ಬ್ಯಾನರ್‌ ಇತ್ಯಾದಿ ಪ್ರಚಾರ ಸಾಮಗ್ರಿಗಳು ಇತರರಿಗೆ ತೊಂದರೆಯುಂಟುಮಾಡುವಂತಿರಬಾರದು. ಜಿಲ್ಲಾ ಚುನಾವಣೆ ಅಧಿಕರಿ/ಸಹಾಯಕ ಚುನಾವಣೆ ಅಧಿಕಾರಿ ಪಾಸ್‌ ಮಂಜೂರು ಮಾಡಿರುವ ವಾಹನಗಳಿಗೆ ಮಾತ್ರ ಚುನಾವಣೆ ಪ್ರಚಾರ ನಡೆಸಲು ಅನುಮತಿಯಿರುವುದು. ಸ್ಪಾಟ್‌ ಲೈಟ್‌ಗಳು, ಫೋಕಸ್‌/ಸರ್ಚ್‌ ಲೈಟ್‌ಗಳು, ಸೈರನ್‌ಗಳು ಇತ್ಯಾದಿ ಪ್ರಚಾರ ವಾಹನಗಳಲ್ಲಿ ಇರಿಸುವುದು, ಬಳಸುವುದು ಕೂಡದು.

ಚುನಾವಣೆ ಪ್ರಚಾರಕ್ಕೆ ಧ್ವನಿವರ್ಧಕ ಬಳಕೆ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆ ವರೆಗೆ ಮಾತ್ರ ಬಳಸಬೇಕು. ಕರ್ತವ್ಯ ಹೊಂದಿರುವ ಸಿಬಂದಿಯ ಅರಿವಿಗೆ ಬಾರದೆ, ಒಪ್ಪಿಗೆ ಪಡೆಯದೆ ಧ್ವಜ ಸ್ಥಾಪನೆ, ಧ್ವನಿವರ್ಧಕ ಬಳಕೆ ಸಲ್ಲದು. ಇದಕ್ಕಾಗಿ ಈ ಕೆಳಗೆ ತಿಳಿಸಲಾದ ನಿಬಂಧನೆಗಳಿಗೆ ಅನ್ವಯವಾಗಿ ಬಳಸಬೇಕು.

ಚುನಾವಣೆ ಪ್ರಚಾರಕ್ಕೆ ತ್ರಿಚಕ್ರ/ನಾಲ್ಕು ಚಕ್ರ/ಇ-ರಿûಾ/ದ್ವಿಚಕ್ರ ವಾಹನಗಳಲ್ಲಿ ಗರಿಷ್ಠ 181/2 ಅಡಿ ಅಗಲವಿರುವ ಒಂದು ಧ್ವಜಮಾತ್ರ ಬಳಸಬಹುದಾಗಿದೆ. ಇಂಥಾ ವಾಹನಗಳಿಗೆ ನಿಗದಿತ ಅಗಲದ ಒಂದು ಯಾ ಎರಡು ಸ್ಪೀಕರ್‌ ಮೋಟಾರು ವಾಹನ ಇಲಾಖೆ ತಿಳಿಸುವ ರೀತಿ ಸ್ಥಾಪಿಸಬೇಕು. ಬ್ಯಾನರ್‌ ಗಳು ಯಾವುದೇ ಕಾರಣಕ್ಕೂ ವಾಹನಗಳಲ್ಲಿ ಬಳಸಕೂಡದು.

ಇತರ ಪಕ್ಷಗಳೊಂದಿಗೆ ಸಖ್ಯಹೊಂದಿರುವ/ಸೀಟು ಕುರಿತು ಮಾತುಕತೆ ನಡೆಸಿ ಸ್ಪರ್ಧೆಯಲ್ಲಿರುವ ಪಕ್ಷಗಳ ಅಭ್ಯರ್ಥಿಗಳ ಪ್ರಚಾರ ವಾಹನಗಳಲ್ಲಿ ಸಖ್ಯದಲ್ಲಿರುವ ಪಕ್ಷಗಳ ಒಂದೇ ಧ್ವಜ ಇರಿಸಬಹುದಾಗಿದೆ. ಧ್ವಜ ಸ್ಥಾಪಿಸಲು ಬಳಸುವ ದಂಡಕ್ಕೆ 3 ಅಡಿಗಿಂತ ಅಧಿಕ ಉದ್ದವಿರಬಾರದು. ರೋಡ್‌ ಶೋದಲ್ಲಿ ಭಾಗವಹಿಸುವ ವೇಳೆ ಕೈಗಳಲ್ಲಿ ಹಿಡಿಯುವ ಧ್ವಜ 6×4 ಅಡಿಗಿಂತ ದೊಡ್ಡದಾಗಿರಬಾರದು.

ಅಭ್ಯರ್ಥಿಯ ಚುನಾವಣೆ ಪ್ರಚಾರ ಸಂಬಂಧ ಸಾಲಾಗಿ ಸಂಚರಿಸುವ ವಾಹನಗಳ ಸಂಖ್ಯೆ 10ಕ್ಕಿಂತ ಹೆಚ್ಚಾಗಿರಬಾರದು. ಹತ್ತಕ್ಕಿಂತ ಅಧಿಕ ವಾಹನಗಳಿದ್ದಲ್ಲಿ ಹತ್ತು ವಾಹನಗಳ ನಡುವೆ ಇತರ ವಾಹನಗಳಿಗೆ ತೆರಳಲು 100 ಮೀಟರ್‌ ಎಡೆ ದಾರಿಗಳನ್ನು ಒದಗಿಸುವ ಸ್ವಯಂ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.