ಮೀನು ಕ್ಷಾಮ: ಸಮುದ್ರದಿಂದ ದೂರ ಸರಿಯುತ್ತಿರುವ ಸಾಂಪ್ರದಾಯಿಕ ಬೆಸ್ತರು


Team Udayavani, Dec 1, 2019, 5:16 AM IST

29-KBL-1

ಕುಂಬಳೆ: ಒಂದು ಕಾಲದಲ್ಲಿ ಕುಂಬಳೆ ಮತ್ತು ಮೊಗ್ರಾಲ್‌ ನಿವಾಸಿಗಳ ಉಪಜೀವನ ಮಾರ್ಗವಾಗಿದ್ದ ಸಾಂಪ್ರದಾಯಿಕ ಮೀನುಗಾರಿಕೆ ಇಂದು ಪ್ರಕೃತಿಯ ಮುನಿಸಿನಿಂದ ಬೆಸ್ತರಿಂದ ದೂರವಾಗುತ್ತಿದೆ.

ಮತ್ಸ್ಯ ಸಂಪತ್ತಿನ ಕ್ಷಾಮ, ,ಸಮುದ್ರ ಕೊರೆತ ಮುಂತಾದ ಅಕಾಲಿಕ ವಾತಾವರಣದಿಂದ ಹೆಚ್ಚಿನ ಬೆಸ್ತರು ಇಲ್ಲಿನ ಈ ಕಾಯಕದಿಂದ ದೂರ ಸಾಗಿರುವರು.
ಪ್ರಕೃತ ಈ ಪ್ರದೇಶದಲ್ಲಿ ಅಲ್ಪ ಸ್ವಲ್ಪ ಮೀನು ದೊರಕುತ್ತಿದ್ದು ಇದರಿಂದ ಬೆಸ್ತರ ಆದಾಯಕ್ಕೆ ಕುತ್ತಾಗಿದ್ದು ಬೆಸ್ತರ ಜೀವನ ದುಸ್ತರವಾಗಿದೆ.

ಆರಿಕ್ಕಾಡಿ ಕಡವತ್‌,ಕೊಯಿಪ್ಪಾಡಿ,ಪೆರ್ವಾಡು ಮೊಗ್ರಾಲ್‌ ಕರಾವಳಿಯಲ್ಲಿ ಸುಮಾರು 500ರಷ್ಟು ಬೆಸ್ತ ಕುಂಟುಂಬ ತಮ್ಮ ಕುಲಕಸಬು ನಷ್ಟವಾಗುತ್ತಿರುವ ಕಾರಣ ಸಂಕಷ್ಟಕ್ಕೊಳಗಾಗಿರುವರು.

ಚವಿಟ್ಟು ವಲ ಸಂಪ್ರದಾಯ :ಇಲ್ಲಿ ಬೆಸ್ತರತಂಡ ಕಡಲಕಿನಾರೆಯಲ್ಲಿ ಬಲೆಯನ್ನು ಮೆಟ್ಟಿನಿಂತು ವೃತ್ತಾಕಾರದಲ್ಲಿ ಸಮುದ್ರಕ್ಕೆ ಬಲೆ ಎಸೆದು ಮೀನು ಹಿಡಿಯುವುದು ಹಿಂದಿನ ಕಾಲದಿಂದಲೂ ನಡೆದುಬರುತ್ತಿದೆ.ಅಲ್ಲದೆ ದೋಣಿಯ ಮೂಲಕ ಆರಿಕ್ಕಾಡಿ ಕುಂಬಳೆ ಕೊಯಿಪ್ಪಾಡಿ ಮೊದಲಾದೆಡೆಗಳಲ್ಲಿ ಮೀನುಗಾರಿಕೆ ನಡೆಸುವರು.ಈ ಬೆಸ್ತರು ಇಂದು ತಮ್ಮ ಕುಲಕಸುಬಿಲ್ಲದೆ ಇತರ ಉದ್ಯೋಗಕ್ಕಾಗಿ ಆಲೆಯುವಂತಾಗಿದೆ.
ತಮ್ಮ ದೋಣಿಗಳನ್ನು ಸಮುದ್ರ ತೀರದಲ್ಲಿ ಕಟ್ಟಿ ಹಾಕಲಾಗಿದೆ.ಮೀನಿನ ಕ್ಷಾಮ ತಲೆದೋರಿದ ಕಾರಣ ಬೆಸ್ತರ ಕುಟುಂಬ ಉಪವಾಸ ಬೀಳುವಂತಾಗಿದೆ.ಸಾಂಪ್ರದಾಯಿಕ ಮೀನುಗಾರಿಕೆಗೆ ಸುಮಾರು 75 ವರ್ಷಗಳ ಇತಿಹಾಸವಿರುವ ಈ ಪ್ರದೇಶದಲ್ಲಿ ಹಿಂದಿನ ಕಾಲದಲ್ಲಿ ಮೀನುಹಿಡಿಯಲು 6 ತಂಡಗಳಾಗಿದ್ದ ಬೆಸ್ತರ ತಂಡ ಇದೀಗ ಕೆವಲ 2 ತಂಡಗಳಿಗೆ ಸೀಮಿತಗೊಂಡಿದೆ.

ಮುಂದಿನ ದಿನಗಳಲ್ಲಿ ಈ ತಂಡಗಳು ಉದ್ಯೋಗವಿಲ್ಲದೆ ಈ ಕಾಯಕದಿಂದ ದೂರವಾಗುವ ಕಾಲ ದೂರವಿಲ್ಲ.ವರ್ಷದಿಂದ ವರ್ಷಕ್ಕೆ ಸಮುದ್ರದಿಂದ ದೊರಕುವ ಮೀನುಗಳ ಸಂಖ್ಯೆ ಕುಂಠಿತವಾಗುತ್ತಿದೆ ಎಂದು ಸರಕಾರದ ಅಂಕಿ ಅಂಶ ಸಾರುವುದು.ಯಂತ್ರಬೋಟ್‌ಗಳಿಂದ ಆಳ ಸಮುದ್ರಮೀನುಗಾರಿಕೆಯಲ್ಲಿ ಮರಿ ಮೀನುಗಳನ್ನೂ ಹಿಡಿಯುವ ಕಾರಣ, ಮೀನುಗಾರಿಕೆ,ನಿಧಿತ ಬಲೆಯ ಉಪ ಯೋಗ,ಇನ್ನಿತರ ಕಾರಣದಿಂದ ಕಳೆದ 2012 ರಿಂದ ಮೀನುಗಳ ಕ್ಷಾಮ ತಲೆದೋರಿರುವುದಾಗಿ ಮೀನುಗಾರಿಕೆ ಇಲಾಖೆಯ ತಜ್ಞರ ಅಭಿಪ್ರಾಯವಾಗಿದೆ.
ರಾಜ್ಯದ 590 ಕಿ.ಮೀ.ಉದ್ದ ದ ಸಮುದ್ರ ಕರಾವಳಿಯಲ್ಲಿ 222 ಮತ್ಸ್ಯ ಗ್ರಾಮಗಳಲ್ಲಿ ತಮ್ಮ ಜೀವದ ಹಂಗು ತೊರೆದು ದುಡಿಯುತ್ತಿರುವ ಸುಮಾರು 10 ಲಕ್ಷದಷ್ಟು ಬೆಸ್ತರ ಜಟಿಲವಾದ ಸಮಸ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿಲ್ಲವೆಂಬ ಆರೋಪ ಕಡಲ ಮಕ್ಕಳದು.ಇದೇ ರೀತಿ ಮುಂದುವರಿದಲ್ಲಿ ಕುಂಬಳೆ ಆರಿಕ್ಕಾಡಿ ಸಹಿತ ಕಾಸರಗೋಡು ಜಿಲ್ಲೆಯ ವಿವಿದೆಡೆಗಳ ಬೆಸ್ತರ ಕುಟುಂಬ ಮುಂದೆ ಕೆಲಸವಿಲ್ಲದೆ ಅಲೆದಾಡುವುದಕ್ಕೆ ಮುನ್ನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸರಕಾರ, ಜನಪ್ರತಿನಿಧಿಗಳು ಮತ್ತು ಇಲಾಖೆ ಮುಂದಾಗಬೇಕಾಗಿದೆ.

ಮೀನಿನ ಲಭ್ಯತೆ ಕುಂಠಿತ
ಕೆಲವೊಂದು ಕಾರಣಗಳಿಂದ ಎಲ್ಲಾ ಕಡೆಗಳಲ್ಲೂ ಸಮುದ್ರದಿಂದ ದೊರಕುವ ಮೀನಿನ ಲಭ್ಯತೆ ಕುಂಠಿತವಾಗುತ್ತಿದೆ.ಬೆಸ್ತರಿಗೆ ಸರಕಾರದಿಂದ ಇಲಾಖೆಯ ಮೂಲಕ ಹಲವಾರು ಯೋಜನೆಗಳನ್ನು ನೀಡಲಾಗುವುದು.ಜೂನ್‌ ಜುಲೈ ತಂಗಳಲ್ಲಿ ಉಚಿತ ರೇಶನ್‌, ಬೆಸ್ತರ ಮಕ್ಕಳಿಗೆ ಪದವಿ ತನಕ ಉಚಿತ ಶಿಕ್ಷಣ,ಸಂಬಾದ್ಯ ಆಶ್ವಾಸ ಪದ್ಧತಿ ಯೋಜನೆ,ಸಮುದ್ರ ಕಿನಾರೆಯಲ್ಲಿ 50 ಮೀ.ನೊಳಗೆ ಮನೆ ಕಟ್ಟಿದವರಿಗೆ ಬೇರೆಡೆ 3 ಸೆಂಟ್ಸ್‌ ಸ್ಥಳ ಮತ್ತು ಹೊಸ ಮನೆ ಮತ್ತು ಕೆಲವು ಸಂದರ್ಭಗಳಲ್ಲಿ ತುರ್ತು ಪರಿಹಾರವನ್ನು ನೀಡಲಾಗುವುದು.
-ಜಿ. ಜೊಮೋನ್‌
ಎಸ್‌.ಐ.ಫಿಶರೀಸ್‌ ಮತ್ಸ್ಯ ಭವನ ಕುಂಬಳೆ

ಸವಲತ್ತು ಏನೇನೂ ಸಾಲದು
ಇದೇ ರೀತಿಯ ಮೀನು ಕ್ಷಾಮ ಉಂಟಾದಲ್ಲಿ ನಾವು ಇನ್ನಷ್ಟು ದರಿದ್ರರಾಗಿಬಾಳ ಬೇಕಾಗುವುದು.ಸರಕಾರದಿಂದ ನಮಗೆ ಸಿಗುವ ಸವಲತ್ತು ಏನೇನೂ ಸಾಲದು.ನಮ್ಮತ್ತ ಸರಕಾರ ಚುನಾಯಿತ ಪ್ರತಿನಿಧಿಗಳು ಮತ್ತು ಇಲಾಖೆ ಗಮನ ಹರಿಸಿ ನಮ್ಮನ್ನು ಕಾಪಾಡಬೇಕಿದೆ.
 -ಅಬ್ದುಲ್‌ ರಹೀಂ
ಬೆಸ್ತ ಕುಂಬಳೆ ಕೊಯಿಪ್ಪಾಡಿ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.