ಕನಸುಗಳನ್ನು ಹೆಣೆಯುತ್ತ ಗುರಿಯತ್ತ ಸಾಗಿ: ಡಾ| ರಾಜೇಶ್‌

ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಕಲೋತ್ಸವ ಉದ್ಘಾಟನೆ

Team Udayavani, Sep 28, 2019, 5:05 AM IST

27KSDE8

ಕಾಸರಗೋಡು: ಇಚ್ಛಿಸಿದುದನ್ನು ಗಳಿಸುವ ಸಾಮರ್ಥ್ಯ ಇಂದು ಮನುಷ್ಯ ನಿಗಿದೆ. ಆದರೆ ಸಂತೋಷಕ್ಕಾಗಿ ಎಲ್ಲೆಲ್ಲೋ ಅಲೆದಾಡುತ್ತಾನೆ. ನಮ್ಮೊಳಗಿನ ಸಂತೋಷವನ್ನು ಮುಚ್ಚಿಟ್ಟು ಫೇಸ್‌ಬುಕ್‌, ಟ್ವಿಟ್ಟರ್‌ ವಾಟ್ಸಪ್‌ಗ್ಳಲ್ಲಿ ಅದನ್ನರಸುತ್ತಾ ಕಾಲ ಕಳೆಯುವುದು ಮೂರ್ಖತನ ಎಂದು ಕಣ್ಣೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ನ ನಿರ್ದೇಶಕರೂ, ಸಾಹಿತಿಯೂ ಆದ ಡಾ| ರಾಜೇಶ್‌ ಬೆಜ್ಜಂಗಳ ಅಭಿಪ್ರಾಯಪಟ್ಟರು.

ಕಾಸರಗೋಡು ಚಿನ್ಮಯ ವಿದ್ಯಾಲಯದ ಕಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿ ಗಳು ಶಿಕ್ಷಣದ ಜತೆಗೆ ಶಿಸ್ತುಬದ್ಧ ಜೀವನದ ತರಬೇತಿಯನ್ನು ಹೊಂದುತ್ತಿರುವುದು ಅದೃಷ್ಟಕರ. ಇಲ್ಲಿನ ಪರಿಸರ, ಪರಿಕರ, ನಿಯಮ ಗಳು ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕನನ್ನಾಗಿ ರೂಪಿಸುವಲ್ಲಿ ಪ್ರೇರಕವಾಗು ತ್ತಿವೆ. ಕಲಿತು ಉದ್ಯೋಗಗಳಿಸಿದ ಬಳಿಕ ಶಾಲಾ ಚಟುವಟಿಕೆಗಳಂಥ ಆಹ್ಲಾದಕರ ಉತ್ಸವಗಳಲ್ಲಿ ಪಾಲ್ಗೊಳ್ಳುವ ಅವಕಾಶವಿರಲಾರದು. ಆ ದಿನಗಳಲ್ಲಿ ಶಾಲಾ ಜೀವನವನ್ನು ಮೆಲುಕು ಹಾಕುವುದರಲ್ಲೇ ನಾವು ತೃಪ್ತಿ ಪಡಬೇಕಾ ಗುವುದು. ವಿದ್ಯಾರ್ಥಿ ದೆಸೆಯಲ್ಲಿ ಇಂಥ ಕಲೋತ್ಸವಗಳಲ್ಲಿ ಪಾಲ್ಗೊಳ್ಳುವುದು, ಅನೇಕ ಕೌಶಲಗಳನ್ನು ಅರಿಯುವುದು ಅತೀ ಅಗತ್ಯ.

ಪ್ರಕೃತಿಯನ್ನು ಆರಾಧಿಸಿ
ಆಂಗ್ಲ ಕವಿ ವರ್ಡ್ಸ್‌ವರ್ತ್‌ ಹೇಳಿದಂತೆ ಬೆಳಗ್ಗಿನ ಸೂರ್ಯ ಕಿರಣ, ತಂಪಾದ ಗಾಳಿ, ಅರಳಿದ ಹಳದಿ ಹೂವುಗಳು ನೀಡುವ ಸಂತೋಷ ಅದ್ಭುತವಾದುದು. ಪ್ರಕೃತಿಯನ್ನು ಆಸ್ವಾದಿಸುವ ಮನಸ್ಸನ್ನು ಬೆಳೆಸಬೇಕು. ನಮ್ಮ ಸುತ್ತಲೇ ಸಂತೋಷ ಸಿಗುವುದಾದರೆ ಮತ್ತೇಕೆ ಅದನ್ನು ಅರಸುತ್ತ ಸಮಯವನ್ನು ಪೋಲು ಮಾಡುವುದು? ಕವಿ ಕೀಟ್ಸ್‌ ಹೇಳಿದ್ದಾರೆ, ಸೌಂದರ್ಯವೇ ಸತ್ಯ. ಸತ್ಯವೇ ಸೌಂದರ್ಯ. ಬೆಳಕು ಹಾಗೂ ಕತ್ತಲೆಯ ನಡುವಿನ ಈ ಹೊತ್ತನ್ನು ಸುಂದರಗೊಳಿಸಲು ಎಷ್ಟೆಷ್ಟೋ ಚಟುವಟಿಕೆಗಳು ನಮ್ಮ ಮುಂದಿವೆ. ಸುಂದರ ಕನಸನ್ನು ಹೆಣೆಯುತ್ತಾ ಒಂದೊಂದನ್ನೂ ನನಸಾಗಿಸಲು ಶ್ರಮಿಸಬೇಕು. ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ನೆನಪಿನ ಬುತ್ತಿಯನ್ನು ಕಟ್ಟಿಕೊಳ್ಳಿ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಿದ್ಯಾಲಯದ ಪ್ರಾಂಶುಪಾಲ ಬಿ. ಪುಷ್ಪರಾಜ್‌ ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ಶಾಲಾ ವಿದ್ಯಾರ್ಥಿ ನಾಯಕಿ ಆಯಿಷ ಹುದ ಸ್ವಾಗತಿಸಿದರು. ಆಯಿಷಾ ಅಫಾ° ವಂದಿಸಿದರು.

ಶಿಸ್ತು ಬದ್ಧರಾಗಿರಿ
ಡಾ| ಅಬ್ದುಲ್‌ ಕಲಾಂ ಹೇಳಿದಂತೆ “ನಾವು ಸೂರ್ಯನಂತೆ ಪ್ರಕಾಶಿಸಬೇಕು. ಅದಕ್ಕಾಗಿ ಸೂರ್ಯನಂತೆ ಉರಿಯಬೇಕು’. ಕಠಿನ ಪರಿಶ್ರಮ, ಪ್ರಾರ್ಥನೆ, ಗುರು ಹಿರಿಯರಲ್ಲಿ ಭಕ್ತಿ, ಸಮಯ ಪಾಲನೆಯಿಂದ ಮಾತ್ರವೇ ನಿಶ್ಚಿತ ಗುರಿಯತ್ತ ಸಾಗುತ್ತಾ ಶಿಸ್ತುಬದ್ಧ ವ್ಯಕ್ತಿಯಾಗಿ ಮಾರ್ಪಡುವುದು ಸಾಧ್ಯ ಎಂದು ಡಾ| ರಾಜೇಶ್‌ ಹೇಳಿದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.