ಹಿಂದೂ ಐಕ್ಯ ವೇದಿಕೆ ರಾಜ್ಯಾಧ್ಯಕ್ಷೆಯಾಗಿ ಕೆ.ಪಿ. ಶಶಿಕಲಾ ಟೀಚರ್ ಪುನರಾಯ್ಕೆ
Team Udayavani, May 22, 2019, 6:20 AM IST
ಕಾಸರಗೋಡು: ಹಿಂದೂ ಐಕ್ಯ ವೇದಿಕೆಯ ಕೇರಳ ರಾಜ್ಯ ಅಧ್ಯಕ್ಷೆಯಾಗಿ ಕೆ.ಪಿ.ಶಶಿಕಲಾ ಟೀಚರ್ ಪಟ್ಟಾಂಬಿ ಅವರನ್ನು ಪುನರಾಯ್ಕೆ ಮಾಡಲಾಗಿದೆ. ಆರನ್ಮುಳದಲ್ಲಿ ನಡೆದ ಹಿಂದೂ ಐಕ್ಯ ವೇದಿಕೆಯ ರಾಜ್ಯ ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಸಮ್ಮೇಳನವನ್ನು ವಾಳೂರು ತೀರ್ಥ ಸದಾಶ್ರಯಂ ಕಾರ್ಯದರ್ಶಿ ಸ್ವಾಮಿ ಗರುಡ ಧ್ವಜಾನಂದ ದೀಪಬೆಳಗಿಸಿ ಉದ್ಘಾಟಿಸಿದರು. ಹಿಂದೂ ಐಕ್ಯ ವೇದಿಕೆಯ ರಾಜ್ಯಾಧ್ಯಕ್ಷೆ ಕೆ.ಪಿ.ಶಶಿಕಲಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಜಾಗರಣಾ ಮಂಚ್ನ ದಕ್ಷಿಣ ಭಾರತ್ ಕಾರ್ಯದರ್ಶಿ ಜಗದೀಶ್ ಕಾರಂತ್ ಮುಖ್ಯ ಭಾಷಣ ಮಾಡಿದರು. ಡಾ|ಭಾರ್ಗವ ರಾಮ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ವಿ.ಬಾಬು, ರಾಜ್ಯ ಕಾರ್ಯದರ್ಶಿ ಎಂ.ವಿ.ಮಧುಸೂದನನ್ ಮಾತನಾಡಿದರು.
ಇತರ ಪದಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಆರಿಸಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಬ್ರಹ್ಮಚಾರಿ ಭಾರ್ಗವ ರಾಮ್, ಕಾರ್ಯಾಧ್ಯಕ್ಷರಾಗಿ ಕೆ.ವಿ.ಶಿವನ್, ಉಪಾಧ್ಯಕ್ಷರಾಗಿ ಎನ್.ಕೆ.ನೀಲಕಂಠನ್ ಮಾಸ್ತರ್, ಎಂ.ಪಿ.ಅಪ್ಪು , ಪಿ.ಆರ್.ಶಿವರಾಜನ್, ಪಿ.ಎಸ್.ಪ್ರಸಾದ್, ನ್ಯಾಯವಾದಿ ಪಿ.ಪದ್ಮನಾಭನ್, ನ್ಯಾಯವಾದಿ ಕೆ.ಹರಿದಾಸ್, ಕೆ.ಸುಂದರನ್, ನ್ಯಾಯವಾದಿ ಆರ್.ಎನ್.ಬಿನೀಶ್ಬಾಬು, ನಿಶಾ ಸೋಮನ್, ವಿ.ಎನ್.ಅನಿಲ್ಕುಮಾರ್, ಎಸ್.ಸುಧೀರ್, ಅಕ್ಕೀರ ಮಣಿಕಾಳಿದಾಸ್ ಭಟ್ಟತಿರಿ, ಸಂಘಟನಾ ಕಾರ್ಯದರ್ಶಿಯಾಗಿ ಸಿ.ಬಾಬು, ಸಹ ಸಂಘಟನಾ ಕಾರ್ಯದರ್ಶಿಯಾಗಿ ವಿ.ಸುಶಿಕುಮಾರ್, ಮುಖ್ಯ ಕಾರ್ಯದರ್ಶಿಗಳಾಗಿ ಇ.ಎಸ್.ಬಿಜು, ಆರ್.ವಿ.ಬಾಬು, ಕಾರ್ಯದರ್ಶಿಗಳಾಗಿ ಕಿಳಿಮಾನೂರ್ ಸುರೇಶ್, ಕೆ.ಪ್ರಭಾಕರನ್, ತೆಕ್ಕಡಂ ಸುದರ್ಶನನ್, ಪುತ್ತೂರು ತುಳಸಿ, ಕೋಶಾಧಿಕಾರಿಯಾಗಿ ಕೆ.ಅರವಿಂದಾಕ್ಷನ್, ಜೊತೆ ಕೋಶಾಧಿಕಾರಿಯಾಗಿ ಪಿ.ಜೋತೀಂದ್ರಕುಮಾರ್ ಆಯ್ಕೆ ಮಾಡಲಾಯಿತು.