ಮಳೆ ಪ್ರಮಾಣ ತಗ್ಗಲು ನಾವೇ ಕಾರಣ: ಅಂತರ್ಜಲ ಹೆಚ್ಚಿಸಲು ಬೆಂಬಲಿಸೋಣ


Team Udayavani, Apr 28, 2017, 3:43 PM IST

28-mng-5.jpg

ಮಹಾನಗರ: ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದಲೇ ಪ್ರಸ್ತುತ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಅದಕ್ಕೆ ನಾವೇ ಕಾರಣರಾಗುತ್ತಿದ್ದೇವೆ.

ಇದು ಸುಳ್ಳಲ್ಲ ; ಅನುಭವ ಸತ್ಯ. ಈ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಸಾಗರ ಭೂ ವಿಜ್ಞಾನ ವಿಭಾಗದ ಅಧ್ಯಕ್ಷ ಡಾ | ಬಿ.ಆರ್‌. ಮಂಜುನಾಥ್‌ ಪತ್ರಿಕೆ ಜತೆ ಮಾತನಾಡುತ್ತಾ, ಹಿಂದಿನ ಅಂಕಿ ಅಂಶಗಳನ್ನು ನೋಡಿದಾಗ 20 ವರ್ಷಗಳಿಗೊಮ್ಮೆ ಮಳೆಯ ಪ್ರಮಾಣದಲ್ಲಿ ಏರುಪೇರಾಗಿದೆ. ಹೀಗಾಗಿ 2025-27ರ ವರೆಗೆ ಇಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದರು.

ಬೆಂಕಿಯ ಹೊಗೆ
ಕಸ ಕಡ್ಡಿಗಳಿಗೆ ಬೆಂಕಿ ಹಚ್ಚುತ್ತೇವೆ. ಅದು ಉಂಟು ಮಾಡುತ್ತಿರುವ ಪರಿಣಾಮ ಗೊತ್ತಿದೆಯೇ ? ಮಳೆಯ ಪ್ರಮಾಣ ಕಡಿಮೆಯಾಗಲು ಮುಖ್ಯ ಕಾರಣ ವಾಯುಮಾಲಿನ್ಯ. ಸಾಮಾನ್ಯವಾಗಿ ಮಂಗಳೂರಿನಂತಹ ನಗರಗಳಲ್ಲಿ ಅಥವಾ ಒಟ್ಟು ದ.ಕ.ಜಿಲ್ಲೆಯಲ್ಲಿ ಕಸ ಕಡ್ಡಿಗಳಿಗೆ ಬೆಂಕಿ ಹಾಕುತ್ತೇವೆ. ಇದರಿಂದ ನಮಗೆ ಆ ಕ್ಷಣಕ್ಕೆ ಶುಚಿಯಾಗಿ ಕಂಡರೂ ಇದು ನೇರವಾಗಿ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಇದರ ಹೊಗೆಯ ಕಣಗಳು ಪರಿಸರವನ್ನು ಸೇರಿ ಮೋಡವನ್ನು ಬೆಳೆಯಲು ಬಿಡವು. ಇಂತಹ ಕಣಗಳಿಂದ ಮೋಡದ ಸಾಂದ್ರತೆ ಕಡಿಮೆಯಾಗಿ ಕರಗದೇ ಬೇರ್ಪಡುತ್ತವೆ. ಇದನ್ನು ಟೂಮಿ ಎಫೆಕ್ಟ್ ಎಂದು ಕರೆಯಲಾಗುತ್ತದೆ. ಜತೆಗೆ ವಾಹನಗಳ ಹೊಗೆಯಿಂದಲೂ ಈ ಪರಿಣಾಮ ಸ್ಪಷ್ಟ. ಅದರಲ್ಲೂ ಡೀಸೆಲ್‌ನ ಹೊಗೆ ಪರಿಸರಕ್ಕೆ ಹೆಚ್ಚು ಮಾರಕ. ಹೀಗಾಗಿ ಸಂಬಂಧಪಟ್ಟ ಆಡಳಿತ ವ್ಯವಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಿ ಸ್ಮೋಕ್‌ ಎಮಿಶನ್‌ ಟೆಸ್ಟ್‌ ಗಳನ್ನು ಸಮರ್ಪಕವಾಗಿ ಮಾಡಿಸಿ, ಹೆಚ್ಚು ಹೊಗೆ ಬೀರುವ ವಾಹನಗಳನ್ನು ರಸ್ತೆಗಳಿಗೆ ಇಳಿಯದಂತೆ ಕ್ರಮ ಕೈಗೊಳ್ಳಬೇಕು. ಇದರ ಪರಿಣಾಮ ಎಷ್ಟಿದೆ ಎಂದರೆ ಹಿಮಾಲಯದ ಮೇಲೂ ಪರಿಣಾಮ ಬೀರುವಂತಿದೆ.

ಅಣೆಕಟ್ಟುಗಳನ್ನು ಬೆಂಬಲಿಸಿ
ಅಣೆಕಟ್ಟುಗಳನ್ನು ನಿರ್ಮಿಸುತ್ತಾರೆ ಎಂಬ ಪ್ರಸ್ತಾವಗಳು ಬಂದಾಗ ಜನರು ಸಾರಾಸಗಟಾಗಿ ಇಂತಹ ಯೋಜನೆ ಗಳನ್ನು ವಿರೋಧಿಸುತ್ತಾರೆ. ಆದರೆ ಈ ಬಗ್ಗೆ ಕೊಂಚ ಆಲೋಚಿಸಿದರೆ ಅದರಿಂದ ಹೆಚ್ಚು ಲಾಭ. ನದಿಪಾತ್ರದ ಜನ ಅಣೆಕಟ್ಟು ವಿರೋಧಿಗಳಾಗಿರುತ್ತಾರೆ. ಆದರೆ ಇದರಿಂದ ನದಿಪಾತ್ರದ ಜನರಿಗೇ ಹೆಚ್ಚು ಲಾಭ. ನದಿಯಲ್ಲಿ ವರ್ಷವಿಡೀ ನೀರು ತುಂಬಿದ್ದರೆ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಸಮೃದ್ಧವಾಗಿರುತ್ತದೆ. ಹೀಗಾಗಿ ಇಂತಹ ಯೋಜನೆಗಳಿಗೆ ಕೊಂಚ ಬೆಂಬಲ ಸೂಚಿಸಿದರೆ ಉತ್ತಮ ಎನ್ನುತ್ತಾರೆ ಅವರು. ನಮ್ಮ ಕರಾವಳಿ ಭಾಗಗಳಲ್ಲಿ ಮಳೆಕೊಯ್ಲು ವಿಧಾನಗಳನ್ನು ಅಳವಡಿಸುವುದಾದರೆ ಆಗಸ್ಟ್‌ ಕೊನೆಯ ಭಾಗದಲ್ಲಿ ಅಳವಡಿಸಿದರೆ ಉತ್ತಮ. ಅಂದರೆ ಜೂನ್‌-ಜುಲೈ ತಿಂಗಳಿನಲ್ಲಿ ಈ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಮಳೆ ನೀರು ಕೊಯ್ಲಿನಿಂದ ಹೆಚ್ಚು ಪರಿಣಾಮ ಇರದು. 

ದೇಶದಲ್ಲಿ ಶೇ. 85 ಮಳೆ
ದೇಶದಲ್ಲಿ 1871ರಿಂದ 2016ರ ವರೆಗೆ ಬಿದ್ದ ಮಳೆಯನ್ನು ಆಧರಿಸಿ ಇಲ್ಲಿ ಶೇ. 85 ಮಳೆಯಾಗುತ್ತದೆ ಎನ್ನಲಾಗುತ್ತಿದೆ. ಅದು ಶೇ. 10 ಕಡಿಮೆಯಾದರೂ ಬರಗಾಲದ ಸ್ಥಿತಿ. ಜತೆಗೆ ಶೇ. 95 ಮಳೆಯಾದರೆ ಅತಿವೃಷ್ಟಿ.   ಜಿಲ್ಲೆಗೂ ಇದೇ ಸ್ಥಿತಿ ಉಂಟಾಗುತ್ತದೆ. 
ಜಿಲ್ಲೆಯಲ್ಲಿ 1979, 87, 2002, 04, 09, 14-15, 17ರಲ್ಲಿ ಬರಗಾಲ ಸ್ಥಿತಿ ಉಂಟಾಗಿತ್ತು. ಅದೇ ರೀತಿ 1975, 83, 88, 94, 2010ರಲ್ಲಿ ಹೆಚ್ಚಿನ ಮಳೆಯಾಗಿತ್ತು. ಹೀಗಾಗಿ ನಾವು ಒಂದು ವರ್ಷ ಮಳೆಯಾಗಿಲ್ಲ ಎಂದು ದೊಡ್ಡ ತಲೆಬಿಸಿ ಮಾಡುವುದು ಸರಿಯಲ್ಲ. 2009ರಲ್ಲಿ ಕಡಿಮೆ ಮಳೆಯಾದರೆ 10ರಲ್ಲಿ ಧಾರಾಕಾರ ಮಳೆಯಾಗಿತ್ತು. ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿ ಯಲ್ಲಿ ಬಿಸಿಗಾಳಿ ಬೀಸಿ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. ಇದು ಇಡೀ ಪ್ರಪಂಚದ ಮೇಲೆ ಪ್ರಭಾವ ಬೀರುತ್ತಿದ್ದು, ಇದನ್ನು ಎಲಿ°ನೊ ಎಂದು ಕರೆಯಲಾಗುತ್ತದೆ. ಜತೆಗೆ ಹೆಚ್ಚು ಮಳೆ ಬರುವುದನ್ನು ಲಾನಿನಾ ಎಂದು ಕರೆಯಲಾಗುತ್ತದೆ. ಇದರಿಂದಲೂ ಜಿಲ್ಲೆಯ ಮಳೆಯ ಪ್ರಮಾಣ ಹೆಚ್ಚು ಕಡಿಮೆಯಾಗುತ್ತದೆ. 

ತಾಪಮಾನ ಏರಿಕೆ
ನಾವು ಸಮುದ್ರದ ಬದಿಯಲ್ಲಿ ರುವುದರಿಂದ ಸಮುದ್ರದ ತಾಪಮಾನ ಏರಿಕೆಯಿಂದಲೂ ಮಳೆ ಕಡಿಮೆಯಾಗುತ್ತದೆ. ದಕ್ಷಿಣ ಅಮೆರಿಕದಲ್ಲಿ ಉಷ್ಣಾಂಶ ಜಾಸ್ತಿಯಾದರೆ ಇಂತಹ ಸಮಸ್ಯೆ ಉಂಟಾಗುತ್ತದೆ. ಇದು ಕಾಳಿಚ್ಚು ಹೆಚ್ಚಲು ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಕಾಳಿಚ್ಚು ಆರಿಸಲಾಗದಷ್ಟು ಪರಿಣಾಮ ಕಾರಿಯಾಗಿರುತ್ತದೆ. ಪಶ್ಚಿಮ ಏಷ್ಯಾದಲ್ಲಿ ಮರಳುಗಾಡಿನಲ್ಲಿ ಧೂಳಿನ ಪ್ರಮಾಣ ಹೆಚ್ಚಿದ್ದಾಗ ಅವುಗಳು ಸೂರ್ಯನ ಶಾಖವನ್ನು ಹೀರಿ ಉಷ್ಣಾಂಶ ಜಾಸ್ತಿಯಾಗುತ್ತದೆ. ಇದರಿಂದ ಮಾನ್ಸೂನ್‌ ಮಾರುತಗಳು ವೇಗವಾಗಿ ಚಲಿಸಿ ಮಳೆಯೇ ಬರುವುದಿಲ್ಲ. ಹಿಂದೆ ಜಿಲ್ಲೆಯೂ ಸಹಿತ ವಿವಿಧೆಡೆಗಳಲ್ಲಿ ಜೂನ್‌-ಜುಲೈನಲ್ಲಿ ಬಿಸಿಲೇ ಕಾಣದಂತೆ ಜೋರಾಗಿ ಮಳೆ ಬರುತ್ತಿತ್ತು. ಬಂದರೂ ಒಮ್ಮೆಲೇ ಬಂದು ಮಾಯವಾಗುತ್ತದೆ. ಇದರಿಂದ ಭೂಮಿಗೂ  ಲಾಭವಿಲ್ಲ. 

ಇಂತಹ ಹಲವಾರು ವೈಜ್ಞಾನಿಕ ಕಾರಣಗಳಿಂದ ಮಳೆಯ ಪ್ರಮಾಣ ದಲ್ಲಿ ವ್ಯತ್ಯಯ ಉಂಟಾಗಿ ನೀರಿನ ಸಮಸ್ಯೆ ಎದುರಾಗುತ್ತದೆ. ಮಳೆಯ ಪ್ರಮಾಣ ಹೆಚ್ಚಿಸಲು ಜನರ ಸಹಕಾ ರವೂ ಅತಿ ಅಗತ್ಯ. ಜತೆಗೆ ಅಂತರ್ಜಲ ಮಟ್ಟ ಸುಧಾರಣೆಗೆ ನಾವು ಬೆಂಬಲ ನೀಡಿದಾಗ ನೀರಿನ ದೊಡ್ಡ ಮಟ್ಟದ ತೊಂದರೆ ನಿವಾರಿಸಬಹುದು. ಈ ಕುರಿತು ಪ್ರತಿಯೊಬ್ಬರೂ ಯೋಚಿಸುವುದು  ಅಗತ್ಯ ಎನ್ನುತ್ತಾರೆ ಅವರು.

ಹೀಗೂ ಉಳಿಸಿ
ಟಾಯ್ಲೆಟ್‌ನಲ್ಲಿ ಹೆಚ್ಚಾಗಿ ಫ್ಲಶ್‌ ಲೀಕ್‌ ಆಗುತ್ತದೆ. ಇದನ್ನು ನಾವು ಅಷ್ಟಾಗಿ ಗಮನಿಸೋದಿಲ್ಲ. ಆದರೆ ಒಂದೊಂದು ಹನಿ ನೀರು ವೇಸ್ಟ್‌ ಆಗುವ ಮೂಲಕ ಹೆಚ್ಚು ನೀರು ನಮಗೆ ತಿಳಿಯದೆ ಪೋಲಾಗುತ್ತದೆ. ಆ ಕಡೆಗೆ ನೀವು ಗಮನ ಹರಿಸುವುದು ಅಗತ್ಯ.
 

ಕಿರಣ್‌ ಸರಪಾಡಿ  

ಟಾಪ್ ನ್ಯೂಸ್

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.