ಬೆಳ್ವೆ: ನಿಲ್ಲಿಸಿದ್ದ ಕಾರಿಗೆ ಢಿಕ್ಕಿ; ಜಖಂ
Team Udayavani, May 12, 2019, 11:33 AM IST
ಸಿದ್ದಾಪುರ: ಬೈಂದೂರು – ವಿರಾಜಪೇಟೆ ರಾಜ್ಯ ಹೆದ್ದಾರಿಯ ಬೆಳ್ವೆಯಲ್ಲಿ ಮೇ 11ರಂದು ಚಾಲಕನ ಹತೋಟಿ ತಪ್ಪಿದ ಕಾರು ರಸ್ತೆ ಬದಿಯ ಮರದ ಸಮೀಪ ನಿಲ್ಲಿಸಿದ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಪರಿ ಣಾಮ ಎರಡೂ ಕಾರುಗಳು ಜಖಂ ಗೊಂಡಿದು, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಬೆಳ್ವೆಯ ಉದ್ಯಮಿಯೊಬ್ಬರು ಮಧ್ಯಾಹ್ನ ಮನೆ ಎದುರಿನ ಮರದ ಬುಡದಲ್ಲಿ ಕಾರು ನಿಲ್ಲಿಸಿ ಮನೆಗೆ ಹೋಗಿದ್ದರು. ಹೆಬ್ರಿಯಲ್ಲಿ ಗೃಹ ಪ್ರವೇಶ ಮುಗಿಸಿ ಸಾೖಬರಕಟ್ಟೆ ಅಚಾÉಡಿ ಕಡೆಗೆ ಹೋಗುತ್ತಿದ್ದವರ ಕಾರು ಮಧ್ಯಾಹ್ನ 3.40ರ ಸುಮಾರಿಗೆ ಮರಕ್ಕೆ ಢಿಕ್ಕಿ ಹೊಡೆದು, ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ.