ಗಮನಸೆಳೆದ “ಮಾನಿಷಾದ’ಬಯಲಾಟ


Team Udayavani, Apr 6, 2019, 12:15 PM IST

yak-1

ಬದಿಯಡ್ಕ : ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಶ್ರೀ ವಿಷ್ಣುಮೂರ್ತಿ ನಗರ ಬೇಳ ಒತ್ತೆಕೋಲ ಮಹೋತ್ಸವದ ಅಂಗವಾಗಿ ಯಕ್ಷಮಿತ್ರರು ಬೇಳ ಪ್ರಾಯೋಜಕತ್ವದಲ್ಲಿ ಸನಾತನ ಯಕ್ಷಾಲಯ ಮಂಗಳೂರು, ಯಕ್ಷಗುರು ರಾಕೇಶ್‌ ರೈ ಅಡ್ಕ ಇವರ ಶಿಷ್ಯ ವೃಂದದವರಿಂದ ಮಾನಿಷಾದ ಯಕ್ಷಗಾನ ಬಯಲಾಟ ನಡೆಯಿತು.

ಯಕ್ಷದ್ರುವ ಪಟ್ಲ ಸತೀಶ್‌ ಶೆಟ್ಟಿ ಹಾಗೂ ಗಿರೀಶ್‌ ರೈ ಕಕ್ಕೆಪದವು ಅವರ ಗಾನ ಮಾಧುರ್ಯ ಪ್ರೇಕ್ಷಕರ ಸಂಭ್ರಮದ ಕೈ ಚಪ್ಪಾಳೆಯ ಸುರಿಮಳೆ ಸುರಿಸಿತು. ಪುಟ್ಟ ಬಾಲ ಪ್ರತಿಭೆಗಳಿಂದ ಹಿಡಿದು ಅನುಭವೀ ಕಲಾವಿದರ ಮನಮೋಹಕ ಅಭಿವ್ಯಕ್ತಿ ಹಾಗೂ ನಾಟ್ಯದ ವೈವಿಧ್ಯತೆ ಗಮನ ಸೆಳೆದರೆ ಪ್ರತಿಭಾ ಸಂಪನ್ನೆ ಅನನ್ಯ ರೈಯ ಸೆ„ರಿಣಿ ತನ್ನ ನಾಟ್ಯ, ಮಾತಿನ ಮೋಡಿ, ಪ್ರೇಮ- ಪ್ರಣಯದ ಭಾವಾಭಿವ್ಯಕ್ತಿಯಿಂದ ಜನಮಾನಸದಲ್ಲಿ ಅಚ್ಚಳಿಯದೆ ನಿಲ್ಲುವಂತಾಯಿತು. ರೂಕ್ಷನಾಗಿ ಹೆಸರಾಂತ ಯಕ್ಷಕಲಾವಿದೆ ವಸುಂಧರಾ ಹರೀಶ್‌ ಅಮೋಘ ಪ್ರದರ್ಶನ ನೀಡಿದರು.

ಮಾನಿಷಾದ ಪ್ರಸಂಗದ ಪ್ರಧಾನ ಆಕರ್ಷಣೆಗಳಲ್ಲಿ ಒಂದಾದ ಬೇಟೆಗಾರರ ಕುಣಿತವು ನೋಡುಗರನ್ನು ಮೈಮರೆಯುವಂತೆ ಮಾಡಿತು.. ಮಾತ್ರವಲ್ಲದೆ ಮಹಾಬಲ ಭಟ್‌ ಭಾಗಮಂಡಲ ಅವರ ಅಗಸನ ಪಾತ್ರವು ಯಕ್ಷಾಭಿಮಾನಿಗಳು ನಗೆಗಡಲಲ್ಲಿ ತೇಲಾಡಿಸಿತು. ಮಾನಿಷಾದದ ಕೇಂದ್ರ ಬಿಂದುವಾದ ರಾಮ ಮತ್ತು ಸೀತೆಯ ಪಾತ್ರಗಳಿಗೆ ಜೀವ ತುಂಬಿದವರು ಕಲಾಸಂಪನ್ನೆ ವೃಂದಾ ಕೊನ್ನಾರ್‌ ಹಾಗೂ ಗಡಿನಾಡಿನ ನಾಟ್ಯ ವಿಶಾರದೆ ಮಹಿಮಾ ಎಸ್‌ ರಾವ್‌. ಅತಿಗಳಿಲ್ಲದೆ ಮಿತಿಯಲ್ಲಿ ಪಾತ್ರ ಪೋಷಣೆ ಮಾಡುವ ನೈಪುಣ್ಯತೆ ಈ ಕಲಾವಿದರಲ್ಲಿದೆ.

ಹಿಮ್ಮೇಳದಲ್ಲಿ ಚೆಂಡೆ ಮುರಾರಿ ಕಡಂಬಳಿತ್ತಾಯ ಹಾಗೂ ಸುಬ್ರಹ್ಮಣ್ಯ ಚಿತ್ರಾಪುರ, ಮದ್ದಳೆ ಗಣೇಶ್‌ ನೆಕ್ಕರೆಮೂಲೆ, ಚಕ್ರತಾಳದಲ್ಲಿ ಅಭಿಜಿತ್‌ ಬಂಟ್ವಾಳ ಸಹಕರಿಸಿದರು. ವಿಕ್ಷಿಪ್ತನಾಗಿ ದಿನೇಶ್‌ ಬಂಗೇರ, ದಕ್ಷನ ಪಾತ್ರದಲ್ಲಿ ಮುರಳಿ ನಾವಡ ಮಧೂರು, ಸಪ್ತ ಋಷಿಗಳು ದಿನೇಶ್‌, ವಿಶ್ವನಾಥ, ಶ್ರೀಶ ನಾವಡ, ಪುಂಗವನಾಗಿ ಕುಸುಮಾಕರ, ಬೇಟೆಗಾರರಾಗಿ ಹಿಮಜಾ, ಕಾರ್ತಿಕ್‌, ಧನಿಶ್‌, ಕಿಶನ್‌, ಶ್ರೀಶ, ಕಿಶನ್‌ ಅಗ್ಗಿತ್ತಾಯ, ಹುಲಿ ಕೃಷ್ಣ ಪ್ರಕಾಶ್‌, ವಾಲ್ಮೀಕಿ ದೀಪಕ್‌ ಶೆಟ್ಟಿ, ಬ್ರಹ್ಮ ಅನನ್ಯ ಐತಾಳ್‌, ಭದ್ರ ಕಾರ್ತಿಕ್‌ ಸಮರ್ಥವಾಗಿ ಪಾತ್ರ ನಿರ್ವಹಿಸಿದರೆ ಲಕ್ಷ್ಮಣನಾಗಿ ಮೈತ್ರಿ ಭಟ್‌ ಮವ್ವಾರು ಹಾಗೂ ಶತ್ರುಘ್ನನ ಪಾತ್ರದಲ್ಲಿ ಪ್ರವೀಣ್‌ ರೈ ಬೇಳ ಗಮನಸೆಳೆದರು. ಲವಣಾಸುರ ಸುಬ್ರಹ್ಮಣ್ಯ ಭಟ್‌ ಬದಿಯಡ್ಕ, ಬಲಗಳಾಗಿ ಬಾಲಚಂದ್ರ, ಮಿಥುನ್‌, ಕಿಷನ್‌, ಕಾರ್ತಿಕ್‌ ಹಾಗೂ ಧನಿಶ್‌ ಹಾಗೂ ಲವ ಕುಶರಾಗಿ ಚಮನ್‌ ಮತ್ತು ಭವಿಷ್‌ ಪಾತ್ರ ನಿರ್ವಹಿಸಿದರು.

ಉತƒಷ್ಟ ಗುಣಮಟ್ಟದ ವೇಷ ಭೂಷಣ, ಹಿತವರಿತ ನಾಟ್ಯ, ಮಾತುಗಾರಿಕೆ, ಸಮರ್ಥ ಗುರುವಿನ ಸೂಕ್ತ ಮಾರ್ಗದರ್ಶನದಲ್ಲಿ ಮೂಡಿಬಂದಾಗ ಒಟ್ಟು ಕತೆಯನ್ನು ಅತ್ಯಾಕರ್ಷಕವಾಗಿ ಬಿಂಬಿಸುವಲ್ಲಿ ಯಶಸ್ವಿಯಾಯಿತು. ಆದುದರಿಂದಲೇ ಒಂದು ಅತ್ಯುತ್ತಮ, ಅಚ್ಚುಕಟ್ಟಾದ ಆಪ್ತ ಪ್ರದರ್ಶನವಾಗಿ ಮಾನಿಷಾದ ಮೂಡಿಬಂತು.

ಟಾಪ್ ನ್ಯೂಸ್

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

3-dandeli

Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

3-dandeli

Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.