ಹೊಸಬರ ಪ್ರಮೋಶನ್ ಕನ್ ಫ್ಯೂಶನ್!


Team Udayavani, Jan 29, 2021, 3:37 PM IST

ಹೊಸಬರ ಪ್ರಮೋಶನ್ ಕನ್ ಫ್ಯೂಶನ್!

ಇದೇ ಫೆಬ್ರವರಿ ಮೊದಲ ವಾರದಿಂದ ಮೇ ಎರಡನೇ ವಾರದವರೆಗೆ ಕನ್ನಡದಲ್ಲಿ ಬಿಡುಗಡೆಯಾಗಲಿರುವ ಬಹುತೇಕ ಸ್ಟಾರ್‌ ನಟರ, ಬಿಗ್‌ ಬಜೆಟ್‌ ಸಿನಿಮಾಗಳ ರಿಲೀಸ್‌ ಡೇಟ್‌ ಅಧಿಕೃತವಾಗಿ ಅನೌನ್ಸ್‌ ಆಗಿದೆ. ಎರಡು-ಮೂರು ವಾರಗಳ ಅಂತರದಲ್ಲಿ ಒಂದರ ಹಿಂದೊಂದು ಸ್ಟಾರ್‌ ನಟರ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಕನಿಷ್ಟ ಅಂದ್ರೂ ಏಳು-ಎಂಟು ಬಿಗ್‌ ಬಜೆಟ್‌ ಸಿನಿಮಾಗಳು ತೆರೆಗೆ ಬರೋದು ಪಕ್ಕಾ ಆಗಿದೆ. ಆದರೆ ಈಗ ಗೊಂದಲ ಇರುವುದು ಹೊಸಬರ ಸಿನಿಮಾಗಳ ಬಿಡುಗಡೆಯ ಬಗ್ಗೆ.

ಇಲ್ಲಿಯವರೆಗೆ ಸ್ಟಾರ್ ಸಿನಿಮಾಗಳು ಬರಲಿ, ಬಿಗ್‌ ಬಜೆಟ್‌ ಸಿನಿಮಾಗಳು ರಿಲೀಸ್‌ ಆಗಲಿ ಆಮೇಲೆ ನೋಡೋಣ, ಅಂಥ ಕಾಯುತ್ತಿದ್ದ ಹೊಸಬರ ಸಿನಿಮಾಗಳು, ಈಗ ಇಷ್ಟೊಂದು ಸ್ಟಾರ್ ಸಿನಿಮಾಗಳ ನಡುವೆ ನಾವು ಯಾವಾಗ ಬರೋದು ಎಂಬ ಚಿಂತೆಯಲ್ಲಿದ್ದಾರೆ.  ಹೌದು, ಒಂದಷ್ಟು ಸ್ಟಾರ್ ಸಿನಿಮಾಗಳು ರಿಲೀಸ್‌ ಆದ್ರೆ ಆಡಿಯನ್ಸ್‌ ಮೊದಲಿನಂತೆ ಥಿಯೇಟರ್‌ಗೆ ಬರುತ್ತಾರೆ ಎಂಬ ಲೆಕ್ಕಾಚಾರದಲ್ಲಿದ್ದ ಹೊಸ ಸಿನಿಮಾಗಳ ನಿರ್ಮಾಪಕರು, ಈಗ ಸ್ಟಾರ್ ಸಿನಿಮಾಗಳ ಮಧ್ಯೆ ಬರಬೇಕಾ? ಬೇಡವಾ? ನಮಗೆ ಥಿಯೇಟರ್‌ಗಳು ಸಿಗುತ್ತವಾ? ಇಲ್ಲವಾ? ಅನ್ನೋ ಮತ್ತೂಂದು ಯೋಚನೆಯಲ್ಲಿದ್ದಾರೆ.

ಇದನ್ನೂ ಓದಿ:ಇಂದು ರಾಮಾರ್ಜುನ ತೆರೆಗೆ: ಇಂಟರ್‌ನೆಟ್‌ ಕೆಟ್ಟೋಯ್ತು, ಸಿನ್ಮಾ ಸ್ಟಾರ್‌ ಬದಲಾಯ್ತು!

ಯಾವ ಸ್ಟಾರ್‌ ಸಿನಿಮಾಗಳ ಮುಂದೆ – ಹಿಂದೆ ಬಿಡುಗಡೆ ಯಾದರೆ, ಏನೇನು ಲಾಭ, ಏನೇನು ನಷ್ಟ ಎಂಬ ಲೆಕ್ಕಾಚಾರದಲ್ಲಿ ಕೆಲ ಹೊಸ ಸಿನಿಮಾಗಳ ನಿರ್ಮಾಪಕರಿದ್ದರೆ, ಇನ್ನು ಕೆಲ ನಿರ್ಮಾಪಕರು “ಇಷ್ಟು ದಿನಗಳಿಂದ ಕಾದು ಕಾದು ಸಾಕಾಗಿದೆ, ಆಗಿದ್ದಾಗಲಿ ಸ್ಟಾರ್ ಸಿನಿಮಾಗಳ ಮಧ್ಯದಲ್ಲೇ ನಮ್ಮ ಸಿನಿಮಾಗಳನ್ನೂ ರಿಲೀಸ್‌ ಮಾಡಿ ಒಂದು ಕೈ ನೋಡೋಣ’ ಎಂಬ ಹುಂಬು ಧೈರ್ಯದಲ್ಲಿದ್ದಾರೆ. ಮತ್ತೆ ಕೆಲವರು “ಏನೋ ಸಿನಿಮಾ ಮಾಡಿದ್ದೇವೆ.  ಹೇಗೋ ರಿಲೀಸ್‌ ಮಾಡಿ ಕೈ ತೊಳೆದುಕೊಂಡರೆ ಸಾಕು’ ಎಂಬ ಮನಸ್ಥಿತಿಯಲ್ಲಿದ್ದಾರೆ. ಆದರೆ ಮುಂದಿನ ಮೂರು ತಿಂಗಳು ತೆರೆಕಾಣಲಿರುವ ಸ್ಟಾರ್ ಸಿನಿಮಾಗಳ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿ ಎರಡು ವಾರ ಕಳೆದರೂ, ಹೊಸಬರು ಮಾತ್ರ ತಮ್ಮ ಸಿನಿಮಾಗಳ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ಸುಮಾರು 80ಕ್ಕೂ ಹೆಚ್ಚು ಹೊಸಬರ ಸಿನಿಮಾಗಳಿಗೆ ತಮ್ಮ ಬಿಡುಗಡೆಯ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಕನ್ನಡ ಚಿತ್ರರಂಗದಲ್ಲಿ ಇವತ್ತಿನ ಸಿನಿಮಾಗಳ ಕ್ಯೂ ನೋಡಿದ್ರೆ, ಒಂದು ಸಿನಿಮಾವಕ್ಕೆ ಕನಿಷ್ಟ ಪ್ರಚಾರ ಕೊಡಬೇಕು, ಪ್ರೇಕ್ಷಕರಿಗೆ ಆ ಸಿನಿಮಾದ ಬಗ್ಗೆ ಸ್ವಲ್ಪವಾದ್ರೂ ಗೊತ್ತಾಗಬೇಕು ಅಂದ್ರೆ ಏನಿಲ್ಲವೆಂದರೂ, ಒಂದೂವರೆ – ಎರಡು ತಿಂಗಳು ಸಮಯ ಬೇಕೇ ಬೇಕು. ಆದರೆ ಈ ತಮ್ಮ ಸಿನಿಮಾ ಬಿಡುಗಡೆ¿ ಡೇಟ್‌ ಬಗ್ಗೆಯೇ ಅನೇಕ ಹೊಸ ನಿರ್ಮಾಪಕ, ನಿರ್ದೇಶಕರಿಗೆ ಖಾತ್ರಿಯಿಲ್ಲ. ಹೀಗಿರುವಾಗ, ಈಗಲೇ ಪ್ರಚಾರ ಕೆಲಸಗಳನ್ನು ಶುರು ಮಾಡಿ, ಅದಕ್ಕೊಂದಷ್ಟು ಹಣ ಖರ್ಚು ಮಾಡಿದರೆ, ಮುಂದೆ ಹೇಗೆ ಎಂಬ ಗೊಂದಲವು ಹೊಸ ನಿರ್ಮಾಪಕರನ್ನು ಕಾಡುತ್ತಿದೆ

ಈ ಬಗ್ಗೆ ಮಾತನಾಡುವ ಹಿರಿಯ ನಿರ್ಮಾಪಕರೊಬ್ಬರು, “ಬೇರೆ ಭಾಷೆಗಳಲ್ಲಿ ಇರುವಂತೆ ನಮ್ಮ ಸಿನಿಮಾಗಳ ರಿಲೀಸ್‌ಗೆ ಪಕ್ಕಾ ಪ್ಲಾನಿಂಗ್‌ ಅಂತಿಲ್ಲ. ಹೀಗಾಗಿಯೇ ಪ್ರತಿವರ್ಷ ಇಂಥ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ನಮ್ಮಲ್ಲಿ ಸಿನಿಮಾಗಳನ್ನು ಶುರು ಮಾಡುವ ಮೊದಲೇ ಅದರ ಪ್ರೊಡಕ್ಷನ್‌, ಪೋಸ್ಟ್‌ ಪ್ರೊಡಕ್ಷನ್‌, ರಿಲೀಸ್‌ ಮಾಡುವ ಬಗ್ಗೆ ಪಕ್ಕಾ ಪ್ಲಾನಿಂಗ್‌ ಇಟ್ಟುಕೊಂಡಿರಬೇಕು. ಹಾಗಾದಾಗ ಮಾತ್ರ ಸ್ವಲ್ಪ – ಹೆಚ್ಚು ಕಡಿಮೆಯಾದ್ರೂ, ಅಂದುಕೊಂಡ ರೀತಿಯಲ್ಲಿ ಸಿನಿಮಾ ರಿಲೀಸ್‌ ಮಾಡೋದಕ್ಕೆ ಸಾಧ್ಯ’ ಎನ್ನುತ್ತಾರೆ.

“ಸಿನಿಮಾದ ಪ್ರತಿ ಹಂತದಲ್ಲೂ ಇಂತಿಷ್ಟು ಬಜೆಟ್‌ ಅಂತ ಇಟ್ಟುಕೊಂಡಿರಬೇಕು. ಆದ್ರೆ ನಮ್ಮಲ್ಲಿ ಸಿನಿಮಾದ ರಿಲೀಸ್‌ನಲ್ಲಿ ಹೀಗಾಗುತ್ತಿಲ್ಲ. ಯಾರೋ ಒಬ್ಬರು ಸಿನಿಮಾ ಶುರು ಮಾಡ್ತಾರೆ. ಇನ್ನೊಬ್ಬರು ಅದನ್ನು ಮುಂದುವರೆಸುತ್ತಾರೆ, ಮತ್ತೂಬ್ಬರು ಅದನ್ನು ಮುಗಿಸುತ್ತಾರೆ. ಆಮೇಲೆ ಅದನ್ನು ಇನ್ನಾéರೋ ಒಬ್ಬರು ರಿಲೀಸ್‌ ಮಾಡ್ತಾರೆ. ಹೀಗಾದಾಗ ಒಂದೊಳ್ಳೆ ಸಿನಿಮಾವಾದರೂ ಅದು ಪ್ರೇಕ್ಷಕರನ್ನು ತಲುಪುವುದೇ ಇಲ್ಲ. ಪ್ರಮೋಶನ್‌ ಕೂಡ ಅಷ್ಟೇ ಮುಖ್ಯ’ ಎಂದು ಹೊಸಬರಿಗೆ ಕಿವಿಮಾತು ಹೇಳುತ್ತಾರೆ ಹಿರಿಯ ವಿತರಕರೊಬ್ಬರು.

ಜಿ.ಎಸ್.ಕಾರ್ತಿಕ ಸುಧನ್

ಟಾಪ್ ನ್ಯೂಸ್

1-asaaasas

Dalai Lama ವಿರುದ್ಧ ಅವಹೇಳನ: ಕಂಗನಾ ವಿರುದ್ಧ ಕಪ್ಪು ಬಾವುಟ

kejriwal

AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್‌ ಪಕ್ಷ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sambhavami yuge yuge kannada movie

Kannada Cinema; ರಿಲೀಸ್‌ ಅಖಾಡಕ್ಕೆ ಸಂಭವಾಮಿ ಯುಗೇ ಯುಗೇ..

Rachana Rai is the heroine of Darshan’s film Devil

Devil; ದರ್ಶನ್ ಚಿತ್ರಕ್ಕೆ ನಾಯಕಿಯಾದ ಕರಾವಳಿ ಬೆಡಗಿ

Vikasa parva Kannada movie

Kannada Movie; ಸೆನ್ಸಾರ್ ಪಾಸಾದ ‘ವಿಕಾಸ ಪರ್ವ’

Biography of Mother Teresa in web series

Mother Teresa; ವೆಬ್‌ ಸೀರೀಸ್‌ನಲ್ಲಿ ಮದರ್‌ ತೆರೇಸಾ ಜೀವನ ಚರಿತ್ರೆ

Re Release; ಭರ್ಜರಿ ಓಪನಿಂಗ್‌ ಪಡೆದ ಉಪ್ಪಿ ‘ಎ’

Re Release; ಭರ್ಜರಿ ಓಪನಿಂಗ್‌ ಪಡೆದ ಉಪ್ಪಿ ‘ಎ’

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Rohan Bopanna

Paris Olympics; ಬಾಲಾಜಿ, ಭಾಂಬ್ರಿ: ಜತೆಗಾರನ ಹೆಸರು ಸೂಚಿಸಿದ ಬೋಪಣ್ಣ

1-asaaasas

Dalai Lama ವಿರುದ್ಧ ಅವಹೇಳನ: ಕಂಗನಾ ವಿರುದ್ಧ ಕಪ್ಪು ಬಾವುಟ

kejriwal

AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್‌ ಪಕ್ಷ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.