ಟಿಡಿಎಸ್ ಸಲ್ಲಿಸದವರಿಗೆ “ಡಬಲ್ ತೆರಿಗೆ’ ಬರೆ
Team Udayavani, Jun 23, 2021, 7:07 AM IST
ಹೊಸದಿಲ್ಲಿ: ಎರಡು ವರ್ಷಗಳ ಕಾಲ ಸತತವಾಗಿ ಟಿಡಿಎಸ್ ಪಾವತಿಸಿದೇ ಇದ್ದವರಿಗೆ ದುಪ್ಪಟ್ಟು ಟಿಡಿಎಸ್ ದಂಡ ವಿಧಿಸುವ ಹೊಸ ನಿಯಮವೊಂದು ಜು. 1ರಿಂದ ಜಾರಿಗೆ ಬರಲಿದೆ. ಬ್ಯಾಂಕ್ಗಳಲ್ಲಿ ರುವ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿಯ ದರದ ಮೇಲೆ ವಿಧಿಸಲಾಗುವ ಟಿಡಿಎಸ್ ಬಗ್ಗೆಯೂ ರಿಟರ್ನ್ಸ್ ಸಲ್ಲಿಸದೇ ಇರುವವರ ಬಗ್ಗೆ ಸರಕಾರಕ್ಕೆ ಬ್ಯಾಂಕುಗಳೇ ಮಾಹಿತಿ ನೀಡುವ ಮತ್ತೂಂದು ನಿಯಮ ಕೂಡ ಜು. 1ರಿಂದ ಜಾರಿಗೆ ಬರಲಿದೆ. ಈ ಎರಡೂ ನಿಯಮಗಳನ್ನು 2021ರ ಬಜೆಟ್ ಮಂಡನೆ ವೇಳೆ, ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ವಿವರಿಸಿದ್ದರು.
ವೇತನ ಆಧಾರಿತ ಟಿಡಿಎಸ್:
ಒಬ್ಬ ವೇತನದಾರ ನೌಕರ 2018-19ನೇ ಹಣಕಾಸು ವರ್ಷದ ಟಿಡಿಎಸ್ ಕಟ್ಟಿರುವುದಿಲ್ಲ. ಹಾಗೆಯೇ, 2019-20ರಲ್ಲೂ ಆತ ಟಿಡಿಎಸ್ ಪಾವತಿಯಿಂದ ದೂರ ಉಳಿಯುತ್ತಾನೆ. ಇದರ ಜತೆಗೆ, 2018-19 ಹಾಗೂ 2019-20ರ ವರ್ಷದಲ್ಲಿ ಪ್ರತೀ ವರ್ಷ ಆತನ ಟಿಡಿಎಸ್ 50,000 ರೂ.ಗಳಿಗೂ ಮೀರಿ ರುತ್ತದೆ ಎಂದಿಟ್ಟುಕೊಳ್ಳೋಣ. ಅಂಥವರ ಮೇಲೆ ದಂಡ ಪ್ರಯೋಗ ವಾಗುತ್ತದೆ. ಅವರು, ದುಪ್ಪಟ್ಟು ಟಿಡಿಎಸ್ ಕಟ್ಟಬೇಕಿರುತ್ತದೆ.
ಠೇವಣಿ ಆಧಾರಿತ ಆದಾಯ
ಒಬ್ಬ ವ್ಯಕ್ತಿ ನಿರ್ದಿಷ್ಟ ಬ್ಯಾಂಕ್ನ ಖಾತೆಗೆ ಕಂಪೆನಿಯೊಂದರ ಲಾಭಾಂಶ ಆಧಾರಿತ ಬಡ್ಡಿ, ನಿಶ್ಚಿತ ಠೇವಣಿ, ರೆಕರಿಂಗ್ ಡೆಪಾಸಿಟ್ ಮೇಲೆ ಬಡ್ಡಿ ಮೇಲೆ ಟಿಡಿಎಸ್ ಕಡಿತವಾಗಿದ್ದರೂ, ಅದರ ತೆರಿಗೆಯನ್ನು ಸಲ್ಲಿಸದೇ ಇದ್ದರೂ ದುಪ್ಪಟ್ಟು ಟಿಡಿಎಸ್ ಕಟ್ಟಬೇಕಿರುತ್ತದೆ. ಅಲ್ಲದೆ, ಈ ಮಾದರಿಯ ರಿಟರ್ನ್ಸ್ ಸಲ್ಲಿಸದೇ ಇರುವುದರ ಬಗ್ಗೆ ಆಯಾ ಬ್ಯಾಂಕ್ಗಳೇ ಸರಕಾರಕ್ಕೆ ಮಾಹಿತಿ ನೀಡುವುದು ಇನ್ನು ಕಡ್ಡಾಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ