ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ


Team Udayavani, Oct 24, 2021, 10:09 PM IST

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಶಾರ್ಜಾ: ಚರಿತ ಅಸಲಂಕ ಮತ್ತು ಭನುಕ ರಾಜಪಕ್ಷ ಜೋಡಿಯ ಸಿಡಿಲಬ್ಬರದ ಬ್ಯಾಟಿಂಗ್‌ ಸಾಹಸದಿಂದ ಸಿಂಹಳೀಯರ ಪಡೆ ಬಾಂಗ್ಲಾ ಹುಲಿಗಳ ಸದ್ದಡಗಿಸಿದೆ. ರವಿವಾರದ ದೊಡ್ಡ ಮೊತ್ತದ ಮೊದಲಮುಖಾಮುಖಿಯಲ್ಲಿ 5 ವಿಕೆಟ್‌ಗಳಿಂದ ಗೆದ್ದ ಶ್ರೀಲಂಕಾ ಅಮೋಘ ಆರಂಭ ಪಡೆದಿದೆ.

ಶಾರ್ಜಾ ಅಂಗಳದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ 4 ವಿಕೆಟ್‌ ನಷ್ಟಕ್ಕೆ 171 ರನ್‌ ಪೇರಿಸಿದರೆ, ಶ್ರೀಲಂಕಾ 18.5 ಓವರ್‌ಗಳಲ್ಲಿ 5 ವಿಕೆಟಿಗೆ 172 ರನ್‌ ಬಾರಿಸಿತು.

ಅಸಲಂಕ 49 ಎಸೆತಗಳಿಂದ 80 ರನ್‌ ಸಿಡಿಸಿ ಅಜೇಯರಾಗಿ ಉಳಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್‌, 5 ಫೋರ್‌ ಒಳಗೊಂಡಿತ್ತು. ರಾಜಪಕ್ಷೆ 31 ಎಸೆತಗಳಿಂದ 53 ರನ್‌ ಚಚ್ಚಿದರು. ಸಿಡಿಸಿದ್ದು 3 ಬೌಂಡರಿ ಹಾಗೂ 3 ಸಿಕ್ಸರ್‌. ಒಂದಕ್ಕೆ 71 ರನ್‌ ಗಳಿಸಿ ಸುಸ್ಥಿತಿಯಲ್ಲಿದ್ದ ಲಂಕಾ 79ಕ್ಕೆ 4 ವಿಕೆಟ್‌ ಕಳೆದುಕೊಂಡು ಸಂಕಟಕ್ಕೆ ಸಿಲುಕಿದಾಗ ಅಸಲಂಕ-ರಾಜಪಕ್ಷೆ ತಮ್ಮ ಅಸಲಿ ಬ್ಯಾಟಿಂಗ್‌ ಶೌರ್ಯ ತೋರಿದರು. ಈ ಜೋಡಿ 5ನೇ ವಿಕೆಟಿಗೆ 52 ಎಸೆತಗಳಿಂದ 86 ರನ್‌ ಸೂರೆಗೈದು ಲಂಕೆಯ ಪಾರಮ್ಯ ಸಾರಿದರು.

ನೈಮ್‌, ರಹೀಂ ಅರ್ಧ ಶತಕ
ಬಾಂಗ್ಲಾದೇಶದ ಸವಾಲಿನ ಮೊತ್ತಕ್ಕೆ ಕಾರಣರಾದವರು ಓಪನರ್‌ ಮೊಹಮ್ಮದ್‌ ನೈಮ್‌ ಮತ್ತು ಅನುಭವಿ ಆಟಗಾರ ಮುಶ್ಫಿಕರ್‌ ರಹೀಂ. ಇವರಿಬ್ಬರೂ ಅರ್ಧ ಶತಕ ಬಾರಿಸಿ ಮಿಂಚಿದರು. ನೈಮ್‌ 62 ರನ್‌ ಬಾರಿಸುವ ಮೂಲಕ ಈ ಕೂಟದ ಮೊದಲ ಫಿಫ್ಟಿಗೆ ಸಾಕ್ಷಿಯಾದರು. ಬಳಿಕ ರಹೀಂ ಅಜೇಯ 57 ರನ್‌ ಬಾರಿಸಿದರು.

ಇದನ್ನೂ ಓದಿ:ಸೈಯದ್‌ ಮುಷ್ತಾಖ್‌ ಅಲಿ ಟಿ20 ಪಂದ್ಯಾವಳಿ : ಕೇರಳಕ್ಕೆ ಸಂಜು ಸ್ಯಾಮ್ಸನ್‌ ನಾಯಕ

ನೈಮ್‌-ಲಿಟನ್‌ ದಾಸ್‌ ಪವರ್‌ ಪ್ಲೇ ಅವಧಿಯಲ್ಲಿ ಅಮೋಘ ಆಟವಾಡಿ 40 ರನ್‌ ಒಟ್ಟುಗೂಡಿಸಿದರು. 17ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ನೈಮ್‌ 52 ಎಸೆತಗಳಿಂದ ತಮ್ಮ ಸೊಗಸಾದ ಇನ್ನಿಂಗ್ಸ್‌ ಕಟ್ಟಿದರು (6 ಬೌಂಡರಿ). ರಹೀಂ ಆಟ ಹೆಚ್ಚು ಆಕ್ರಮಣಕಾರಿಯಾಗಿತ್ತು. ಅವರ 57 ರನ್‌ 37 ಎಸೆತಗಳಿಂದ ದಾಖಲಾಯಿತು. ಸಿಡಿಸಿದ್ದು 5 ಫೋರ್‌ ಮತ್ತು 2 ಸಿಕ್ಸರ್‌. ನೈಮ್‌-ರಹೀಂ 3ನೇ ವಿಕೆಟಿಗೆ 8.3 ಓವರ್‌ಗಳಿಂದ 73 ರನ್‌ ಪೇರಿಸಿ ಬಾಂಗ್ಲಾ ಇನ್ನಿಂಗ್ಸ್‌ ಬೆಳೆಸಿದರು. ರಹೀಂ ಸಾಹಸದಿಂದ ಅಂತಿಮ 5 ಓವರ್‌ಗಳಲ್ಲಿ 53 ರನ್‌ ಸಂಗ್ರಹಗೊಂಡಿತು. ಇವರಿಬ್ಬರನ್ನು ಹೊರತುಪಡಿಸಿದರೆ 16 ರನ್‌ ಮಾಡಿದ ದಾಸ್‌ ಅವರದೇ ಹೆಚ್ಚಿನ ಗಳಿಕೆ. ಔಟಾಗಿ ಹೋಗುವಾಗ ದಾಸ್‌ ಮತ್ತು ಬೌಲರ್‌ ಲಹಿರು ಕುಮಾರ ನಡುವೆ ಮಾತಿನ ಚಕಮಕಿ ನಡೆಯಿತು. ಅಂಪಾಯರ್‌ಗಳು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಶಕಿಬ್‌ ವಿಶ್ವಕಪ್‌ ದಾಖಲೆ
ಬಾಂಗ್ಲಾದೇಶದ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ತಮ್ಮ ಮೊದಲ ಓವರ್‌ನಲ್ಲೇ ಎರಡು ವಿಕೆಟ್‌ ಕಿತ್ತು ನೂತನ ದಾಖಲೆ ಸ್ಥಾಪಿಸಿದರು. ಟಿ20 ವಿಶ್ವಕಪ್‌ನಲ್ಲಿ ಅತ್ಯಧಿಕ ವಿಕೆಟ್‌ ಉರುಳಿಸಿದ ಶಾಹಿದ್‌ ಅಫ್ರಿದಿ ಅವರ ದಾಖಲೆಯನ್ನು ಮುರಿದರು (39 ವಿಕೆಟ್‌). ಈ ಪಂದ್ಯಕ್ಕೂ ಮುನ್ನ ಅಫ್ರಿದಿ ಮತ್ತು ಶಕಿಬ್‌ 39 ವಿಕೆಟ್‌ಗಳೊಂದಿಗೆ ಜಂಟಿ ಅಗ್ರಸ್ಥಾನ ಅಲಂಕರಿಸಿದ್ದರು. ಶಕಿಬ್‌ ವಿಕೆಟ್‌ 41ಕ್ಕೆ ಏರಿತು.ಲಸಿತ ಮಾಲಿಂಗ 38, ಸಯೀದ್‌ ಅಜ್ಮಲ್‌ 36 ವಿಕೆಟ್‌ ಉರುಳಿಸಿ ಅನಂತರದ ಸ್ಥಾನದಲ್ಲಿದ್ದಾರೆ.

ಸ್ಕೋರ್‌ ಪಟ್ಟಿ
ಬಾಂಗ್ಲಾದೇಶ
ಮೊಹಮ್ಮದ್‌ ನೈಮ್‌ ಸಿ ಮತ್ತು ಬಿ ಫೆರ್ನಾಂಡೊ 62
ಲಿಟನ್‌ ದಾಸ್‌ ಸಿ ಶಣಕ ಬಿ ಕುಮಾರ 16
ಶಕಿಬ್‌ ಅಲ್‌ ಹಸನ್‌ ಬಿ ಕರುಣಾರತ್ನೆ 10
ಮುಶ್ಫಿಕರ್‌ ರಹೀಂ ಔಟಾಗದೆ 57
ಅಫಿಫ್ ಹೊಸೇನ್‌ ರನೌಟ್‌ 7
ಮಹಮದುಲ್ಲ ಔಟಾಗದೆ 10
ಇತರ 9
ಒಟ್ಟು (4 ವಿಕೆಟಿಗೆ) 171
ವಿಕೆಟ್‌ ಪತನ: 1-40, 2-56, 3-129, 4-150.
ಬೌಲಿಂಗ್‌:
ಚಮಿಕ ಕರುಣಾರತ್ನೆ 3-0-12-1
ಬಿನುಕ ಫೆರ್ನಾಂಡೊ 3-0-27-1
ದುಷ್ಮಂತ ಚಮೀರ 4-0-41-0
ಲಹಿರು ಕುಮಾರ 4-0-29-1
ಚರಿತ ಅಸಲಂಕ 1-0-14-0
ವನಿಂದು ಹಸರಂಗ 3-0-29-0
ದಸುನ್‌ ಶಣಕ 2-0-14-0
ಶ್ರೀಲಂಕಾ
ಕುಸಲ್‌ ಪೆರೆರ ಬಿ ಅಹ್ಮದ್‌ 1
ಪಾಥುಮ್‌ ನಿಸ್ಸಂಕ ಬಿ ಶಕಿಬ್‌ 24
ಚರಿತ ಅಸಲಂಕ ಔಟಾಗದೆ 80
ಆವಿಷ್ಕ ಫೆರ್ನಾಂಡೊ ಬಿ ಶಕಿಬ್‌ 0
ವನಿಂದು ಹಸರಂಗ ಸಿ ನೈಮ್‌ ಬಿ ಸೈಫ‌ುದ್ದೀನ್‌ 6
ಭನುಕ ರಾಜಪಕ್ಷ ಬಿ ಅಹ್ಮದ್‌ 53
ದಸುನ್‌ ಶಣಕ ಔಟಾಗದೆ 1
ಇತರ 7
ಒಟ್ಟು (18.5 ಓವರ್‌ಗಳಲ್ಲಿ 5 ವಿಕೆಟಿಗೆ) 172
ವಿಕೆಟ್‌ ಪತನ: 1-2, 2-71, 3-71, 4-79, 5-165.
ಬೌಲಿಂಗ್‌:
ನಾಸುಮ್‌ ಅಹ್ಮದ್‌ 2.5-0-29-2
ಮೆಹೆದಿ ಹಸನ್‌ 4-0-30-0
ಮೊಹಮ್ಮದ್‌ ಸೈಫ‌ುದ್ದೀನ್‌ 3-0-38-1
ಶಕಿಬ್‌ ಅಲ್‌ ಹಸನ್‌ 3-0-17-2
ಮುಸ್ತಫಿಜುರ್‌ ರೆಹಮಾನ್‌ 3-0-22-0
ಮಹಮದುಲ್ಲ 2-0-21-0
ಅಫಿಫ್ ಹೊಸೇನ್‌ 1-0-15-0
ಪಂದ್ಯಶ್ರೇಷ್ಠ: ಚರಿತ ಅಸಲಂಕ

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.