ಹಣವನ್ನು ದ್ವಿಗುಣ ಮಾಡುವ ಆಮಿಷ : ಜನರಿಗೆ 600 ಕೋಟಿ ರೂ.ವಂಚಿಸಿದ ಕಾಪ್ಟರ್ ಬ್ರದರ್ಸ್
Team Udayavani, Aug 7, 2021, 7:40 AM IST
ಚೆನ್ನೈ: ಹಣವನ್ನು ದ್ವಿಗುಣ ಮಾಡುವ ವಾಗ್ಧಾನ ನೀಡಿ ಹಲವಾರು ಮಂದಿಗೆ 600 ಕೋಟಿ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ತಮಿಳುನಾಡಿನ ಕುಂಭಕೋಣಂನ “ಹೆಲಿಕಾಪ್ಟರ್ ಸಹೋದರರು’ ಎಂದು ಕುಖ್ಯಾತಿ ಪಡೆದಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಅವರನ್ನು ಎಂಆರ್ ಗಣೇಶ್ ಮತ್ತು ಎಂಆರ್ ಸ್ವಾಮಿನಾಥನ್ ಎಂದು ಗುರುತಿಸಲಾಗಿದೆ. ವಿಕ್ಟರಿ ಫೈನಾನ್ಸ್ ಹೆಸರಿನ ಹಣಕಾಸು ಸಂಸ್ಥೆ ಮೂಲಕ ಒಂದು ವರ್ಷದ ಅವಧಿಯಲ್ಲಿ ಹೂಡಿಕೆ ಮಾಡಿದ ಹಣದ ದುಪ್ಪಟ್ಟು ಮೌಲ್ಯ ಕೊಡುವುದಾಗಿ ನಂಬಿಸಿದ್ದರು.
ಅದನ್ನು ನಂಬಿ ನೂರಾರು ಮಂದಿ ಹೂಡಿಕೆ ಮಾಡಿದ್ದರು. ಸೋಂಕು ವ್ಯಾಪಕವಾದ ಬಳಿಕ ಸಂಸ್ಥೆ ಯಲ್ಲಿ ಹೂಡಿಕೆ ಮಾಡಿದವರಿಗೆ ಹಣ ವಾಪಸ್ ಮಾಡುವುದನ್ನು ನಿಲ್ಲಿಸಿದ್ದರು. ಫಿರೋಜ್ ಬಾನು ಮತ್ತು ಝಫರುಲ್ಲಾ ದಂಪತಿ ಸಂಸ್ಥೆ ವಿರುದ್ಧ ದೂರು ನೀಡಿದ್ದರು. ಅವರು 15 ಕೋಟಿ ರೂ. ಹೂಡಿಕೆ ಮಾಡಿದ್ದರು.
2019ರಲ್ಲಿ ಎಂ.ಆರ್.ಗಣೇಶ್ ಪುತ್ರನ ಹುಟ್ಟಿದ ಹಬ್ಬಕ್ಕೆ ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ ಮಾಡಿಸಿ ಕೊಂಡಿದ್ದರು. ಹೀಗಾಗಿ ಸಹೋ ದರರಿಗೆ ಹೆಲಿಕಾಪ್ಟರ್ ಸಹೋ ದರರು ಎಂಬ ಹೆಸರು ಅಂಟಿಕೊಂಡಿತು. 2019ರಲ್ಲಿ ಅರ್ಜುನ್ ಏವಿ ಯೇ ಶನ್ ಪ್ರೈ.ಲಿ. ವೈಮಾನಿಕ ಸಂಸ್ಥೆ ಆರಂಭಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ