ಗೋವಾ ಚಿತ್ರೋತ್ಸವ: ಅದು ನಿಮ್ಮ ಪ್ರೀತಿ…ಜನರ ಋಣ ಯಾವತ್ತೂ ತೀರಿಸಲ್ಲ: ಅಮಿತಾಬ್ ಬಚ್ಚನ್
Team Udayavani, Nov 20, 2019, 6:36 PM IST
ಪಣಜಿ:ನನ್ನೆಲ್ಲಾ ಸಹೋದ್ಯೋಗಿಗಳು, ತಂತ್ರಜ್ಞರು, ನಿರ್ದೇಶಕರು, ಅಭಿಮಾನಿಗಳು ನನ್ನನ್ನು ಬೆಳೆಸಿದ್ದೀರಿ. ನಿಮ್ಮ (ಜನರ) ಋಣಭಾರ ನನ್ನ ಮೇಲಿದೆ. ಅದಕ್ಕಾಗಿ ನಾನು ನಿಮಗೆ ಅಭಾರಿಯಾಗಿದ್ದೇನೆ. ಆದರೆ ನಾನು ನಿಮ್ಮ ಋಣವನ್ನು ಯಾವತ್ತೂ ತೀರಿಸಲ್ಲ, ಯಾಕೆಂದರೆ ಅದು ನಿಮ್ಮ ಪ್ರೀತಿ, ಅದನ್ನು ನಾನು ಬಿಟ್ಟುಕೊಡಲಾರೆ ಎಂದು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹೇಳಿದರು.
ಅವರು ಬುಧವಾರ ಗೋವಾದಲ್ಲಿ ಆರಂಭಗೊಂಡ 50ನೇ ವರ್ಷದ ಅಂತಾರಾಷ್ಟ್ರೀಯ ಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅಮಿತಾಬ್ ಬಚ್ಚನ್ ಅವರ ಜೀವಮಾನದ ಸಾಧನೆ ಪರಿಗಣಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು. ಸೂಪರ್ ಸ್ಟಾರ್ ರಜನಿಕಾಂತ್ ಜೀ ನನಗೆ ಪ್ರತಿದಿನವೂ ಸ್ಫೂರ್ತಿಯಾಗಿದ್ದಾರೆ. ಅವರೊಬ್ಬ ನಮ್ಮ ಕುಟುಂಬದ ಸದಸ್ಯರಾಗಿದ್ದಾರೆ. ರಜನಿ ಒಬ್ಬ ಶ್ರೇಷ್ಠ ನಟ ಎಂದು ಶ್ಲಾಘಿಸಿದರು.
ನನ್ನನ್ನು ರೂಪಿಸಿದವರಲ್ಲಿ ನಿರ್ದೆಶಕರು, ತಂತ್ರಜ್ಞರು ಎಲ್ಲರೂ ಇದ್ದಾರೆ..ಅವರಿಗಿಂತ ನೀವು (ಅಭಿಮಾನಿಗಳು, ಪ್ರೇಕ್ಷಕರು) ನನ್ನನ್ನು ಬೆಳೆಸಿದ್ದೀರಿ. ನಾನು ಗೆದ್ದಾಗ, ಸೋತಾಗ ಕ್ಯೆ ಹಿಡಿದು ನಡೆಸಿದ್ದಿರಿ. ಅ ಋನ ನನ್ನ ಮೇಲಿದೆ. ಆದರೆ ಅದನ್ನು ತೀರಿಸಲಾಗದು, ತೀರಿಸಲೂ ಮನಸ್ಸಿಲ್ಲ. ಅದು ಹಾಗೆ ಇರಲಿ. ಯಾಕೆಂದರೆ ಅದು ನಿಮ್ಮ ಪ್ರೀತಿ ಎಂದರು ಅಮಿತಾಬ್.
ರಜನೀಕಾಂತ್ ಮತ್ತು ನಾನು ಒಂದೇ ಕುಟುಂಬದ ಸದಸ್ಯರಂತೆ ಇದ್ದು ಪರಸ್ಪರ ಸಲಹೆಗಳನ್ನು ಕೊಟ್ಟುಕೊಳ್ಳುತ್ತಿರುತ್ತೇವೆ, ನಮ್ಮ ನಡುವಿನ ಸಂಬಂಧ ಅನನ್ಯವಾದುದು. ರಜನಿಕಾಂತ್ ಅವರೊಬ್ಬ ಶ್ರೇಷ್ಠ ನಟ ಎಂಬುದನ್ನು ಹೇಳಲು ಅಮಿತಾಭ್ ಮರೆಯಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sidhu Moosewala: ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೊಸೆವಾಲ ತಾಯಿ
Box office: ಸಿದ್ದಾರ್ಥ್ ʼಯೋಧʼ ಎದುರು ಸದ್ದು ಮಾಡದ ಅದಾ ಶರ್ಮಾ ʼಬಸ್ತಾರ್ʼ
“ದೊಡ್ಡ ಸೌತ್ ಸಿನಿಮಾ ಮಾಡುತ್ತಿದ್ದೇನೆ” ಎಂದ ಕರೀನಾ: ಯಶ್ ಜೊತೆ ಬೇಬೋ ನಟಿಸೋದು ಪಕ್ಕಾ?
ಸಟ್ಟೇರುವ ಮುನ್ನವೇ ಬಹುಕೋಟಿ ʼರಾಮಾಯಣʼಕ್ಕೆ ಸಂಕಷ್ಟ: ನಿರ್ಮಾಣದಿಂದ ಹಿಂದೆ ಸರಿದ ನಿರ್ಮಾಪಕ
ನಿಜಕ್ಕೂ ಅಮಿತಾಬ್ ಬಚ್ಚನ್ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ರಾ? ಬಿಗ್ ಬಿ ಹೇಳಿದ್ದೇನು
MUST WATCH
ಹೊಸ ಸೇರ್ಪಡೆ
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
Pan India: ಯಶ್ ʼಟಾಕ್ಸಿಕ್ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್