ಗೋವಾ ಚಿತ್ರೋತ್ಸವಕ್ಕೆ ಚಾಲನೆ: ಸುವರ್ಣ ಅಧ್ಯಾಯಕ್ಕೆ ಸಂಗೀತ ಮತ್ತು ಸಮ್ಮಾನದ ಮುಕುಟ
ಅಭಿಮಾನಿಗಳ ಋಣ ತೀರಿಸಲು ಸಾಧ್ಯವಿಲ್ಲ : ಸ್ಪೆಷಲ್ ಐಕಾನ್ ಪ್ರಶಸ್ತಿ ವಿಜೇತ ರಜನಿಕಾಂತ್ ವಿನಮ್ರ ನುಡಿ
Team Udayavani, Nov 20, 2019, 6:24 PM IST
ಪಣಜಿ: ಡಾ. ಶ್ಯಾಮಪ್ರಸಾದ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ 50ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬುಧವಾರ ಅದ್ಧೂರಿ ಚಾಲನೆ ನೀಡಲಾಯಿತು. ಸಾಂಪ್ರದಾಯಿಕ ರೀತಿಯಲ್ಲಿ ಮುಖ್ಯ ಅತಿಥಿಗಳು ಜ್ಯೋತಿ ಬೆಳಗುವ ಮೂಲಕ ಉತ್ಸವವನ್ನು ಉದ್ಘಾಟಿಸಿದರು. ಆದರೆ ಇಡೀ ಉತ್ಸವಕ್ಕೆ ಖದರ್ ತುಂಬಿದ್ದು ಶಂಕರ್ ಮಹದೇವನ್ ತಂಡದ ಪ್ಯೂಷನ್ ಸಂಗೀತ.
ಮರಾಠಿ ಚಲನ ಚಿತ್ರ ‘ಕತ್ಯಾರ್ ಕಲ್ಜತ್ ಘುಸ್ಲೀ’ಯ ಗಣಪತಿ ಪ್ರಾರ್ಥನಾ ಗೀತೆ ‘ಸೂರ ನಿರಾಗ ಸಹೋ’ದಿಂದ ಆರಂಭಿಸಿದಾಗ ಕರತಾಡನ. ಬಳಿಕ ತಮ್ಮ ಅಮೋಘ ಸಂಗೀತ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ಖುಷಿ ಪಡಿಸಿದರು.
ಈ ಸಂಗೀತ ರಸಸ್ವಾದದ ಬಳಿಕ ಸಚಿವರಾದಿಯಾಗಿ ಮಾತನಾಡಿದರೂ ಮತ್ತೆ ಅಮೋಘ ಕರತಾಡನ, ಸೀಟಿ ಕೇಳಿ ಬಂದಿದ್ದು ಹಿರಿಯ ನಟ ರಜನೀಕಾಂತ್ ಅವರನ್ನು ಸಮ್ಮಾನಿಸಿದ ಸಂದರ್ಭದಲ್ಲಿ. ಸುವರ್ಣ ಮಹೋತ್ಸವದ ಅಂಗವಾಗಿ ರಜನೀಕಾಂತ್ ಅವರನ್ನು ಸಮ್ಮಾನಿಸಲಾಯಿತು. ಆಗ ಜನರೆಲ್ಲಾ ಎದ್ದು ನಿಂತು ಅಭಿನಂದಿಸಿದರು.
ಈ ಗೌರವ ಸ್ವೀಕರಿಸಿ ಉತ್ತರಿಸಿದ ರಜನೀಕಾಂತ್, ಈ ಗೌರವ ನನ್ನ ಚಿತ್ರಗಳ ನಿರ್ಮಾಪಕರಿಗೆ, ನಿರ್ದೆಶಕರಿಗೆ, ತಂತ್ರಜ್ಞರಿಗೆ ಸಲ್ಲಬೇಕು. ಹಾಗೆಯೇ ನನ್ನ ಅಭಿಮಾನಿಗಳನ್ನು ಮರೆಯಲಾರೆ ಎಂದು ವಂದನೆ ಸಲ್ಲಿಸಿದರು. ಜೀವಮಾನ ಸಾಧನೆಗಾಗಿ ಪ್ರಶಸ್ತಿ ಸ್ವೀಕರಿಸಿ ಧನ್ಯವಾದ ಸಲ್ಲಿಸಿದವರು ನಟಿ ಹೆಸ್ಬುಲ್ಲ, ‘ಸಿನಿಮಾ ನನ್ನ ಬದುಕಿನ ಭಾಗ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ