Desi Swara: ಇಲ್ಲಿಗೆ ಹೋಗುವ ಮುನ್ನ ನೆನಪಿರಲಿ – ಇದು ಸಾವಿನ ಕಣಿವೆ!

ಅಮೆರಿಕದ ಪ್ರವಾಸದಲ್ಲಿ ನೋಡಲೇಬೇಕಾದ ಸ್ಥಳ

Team Udayavani, Mar 16, 2024, 5:52 PM IST

Desi Swara: ಇಲ್ಲಿಗೆ ಹೋಗುವ ಮುನ್ನ ನೆನಪಿರಲಿ – ಇದು ಸಾವಿನ ಕಣಿವೆ!

ಕೆಲವು ಹೆಸರುಗಳನ್ನು ಕೇಳಿದಾಗ ಎಷ್ಟು ಭಯವೆನ್ನಿಸುತ್ತದೆಂದರೆ ಇದೇನಿದು ಹೀಗೆ ಹೆಸರಿಟ್ಟಿದ್ದಾರಲ್ಲ ಎನ್ನಿಸಿ ಆ ಜಾಗದಲ್ಲೇನೋ ಇದ್ದೀತು ಎನ್ನಿಸುತ್ತದೆ. ಇಲ್ಲದೇ ಹೋದರೆ ಇಂತಹ ಹೆಸರನ್ನು ಯಾಕೆ ಇಡುತ್ತಿದ್ದರು? ಉದಾಹರಣೆಗೆ ಇಸ್ರೇಲ್‌ನಲ್ಲಿ ಹಿನ್ನೀರಿನಿಂದ ಆವೃತ್ತವಾದ ಜಾಗವೊಂದಿದೆ. ಅದಕ್ಕೆ “ಡೆಡ್‌ ಸೀ’ ಎಂದು ಹೆಸರು. ಕನ್ನಡದಲ್ಲಿ ಹೇಳಬೇಕೆಂದರೆ ಸತ್ತ ಸಮುದ್ರ. ಯಾಕೆ ಈ ಹೆಸರು ಎಂದು ಹುಡುಕಿದರೆ ಇಲ್ಲಿ ನೀರಿನಲ್ಲಿರುವ ಉಪ್ಪಿನ ಸಾಂದ್ರತೆ ಜಗತ್ತಿನ ಎಲ್ಲ ಸಮುದ್ರಗಳಿಗೆ ಹೋಲಿಸಿದರೆ ಹತ್ತು ಪಟ್ಟು ಹೆಚ್ಚಿದೆ. ಇಷ್ಟು ಉಪ್ಪಾದ ನೀರಿನಲ್ಲಿ ಯಾವ ಪ್ರಾಣಿಯೂ ಬದುಕುವುದಿಲ್ಲವಂತೆ. ಆ ಕಾರಣದಿಂದಲೇ ಇದಕ್ಕೆ ಈ ಹೆಸರು ಬಂದಿದೆ.

ನ್ಯೂಯಾರ್ಕ್‌ ನಗರದಲ್ಲಿ ಹೆಲ್ಲ್ಸ್ ಕಿಚನ್‌ ಎಂಬ ಪ್ರದೇಶವಿದೆ. ಇಲ್ಲಿ ಕಳ್ಳತನ, ದರೋಡೆ, ಸುಲಿಗೆಗಳು ಹೆಚ್ಚಾಗಿ ನಡೆಯುತ್ತಿದ್ದರಿಂದ ಈ ಹೆಸರು ಬಂದಿದೆ. ಹೀಗೆ ಎಂದೂ ಕೇಳಿರದ, ವಿಚಿತ್ರ ಅರ್ಥ ಬರುವಂತಹ ಜಾಗದ ಹೆಸರುಗಳು ಕಿವಿಯ ಮೇಲೆ ಬಿ‌ದ್ದಾಗ ಸಹಜವಾಗಿಯೇ ನೆನಪಿನಲ್ಲಿ ಉಳಿದು ಬಿಡುತ್ತವೆ. ಅಂತಹ ಒಂದು ವಿಶಿಷ್ಟ ಹೆಸರಿರುವ ಜಾಗ ಈ ಡೆತ್‌ ವ್ಯಾಲಿ.

ವ್ಯಾಲಿ ಎಂದರೆ ಉದ್ದಗಲಕ್ಕೂ ವಿಸ್ತರಿಸಿಕೊಂಡಿರುವ ಬಯಲು. ಹಾಗಾಗಿ ಇದು ಕನ್ನಡದಲ್ಲಿ ಸಾವಿನ ಕಣಿವೆ ಎಂದಾಗುತ್ತದೆ. ಕೇಳಿದರೆ ಭಯವಾಗುತ್ತದೆ ಅಲ್ಲವೇ? ಇದು ಅಮೆರಿಕದ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದು. ಅತ್ತ ನೆವಾಡಾ ಇತ್ತ ಕ್ಯಾಲಿಫೋರ್ನಿಯಾ ರಾಜ್ಯಗಳಲ್ಲಿ ಸುಮಾರು ಮೂವತ್ತಮೂರು ಲಕ್ಷ ಎಕ್ರೆಗಳಷ್ಟು ವ್ಯಾಪ್ತಿಯಲ್ಲಿ ಆವರಿಸಿಕೊಂಡಿರುವ ಈ ಮರುಭೂಮಿಯಲ್ಲಿ ಬದುಕುಳಿಯುವುದು ಕಷ್ಟ ಎನ್ನುವಷ್ಟು ವಿಪರೀತವಾದ ಬಿಸಿಲು.

ಬೇಸಗೆಯಲ್ಲಿ ಉಷ್ಣಾಂಶ ನೂರನ್ನು ದಾಟಿ ಧಗಧಗ ಉರಿಯುತ್ತಿರುತ್ತದೆ. 1913ರಲ್ಲಿ ಉಷ್ಣಾಂಶ 134 ಫ್ಯಾರನ್ ಹೀಟ್‌ ತಲುಪಿ ಅಮೆರಿಕದ ಇತಿಹಾಸದಲ್ಲಿಯೇ ಗರಿಷ್ಟಮಟ್ಟದ ಉಷ್ಣಾಂಶ ಎಂದು ದಾಖಲಾಗಿದೆ. ಇಡೀ ಭೂಮಿಯ ಮೇಲೆ ದಾಖಲಾಗಿರುವ ಗರಿಷ್ಟ ಉಷ್ಣಾಂಶದ ಮಟ್ಟ 136 ಫ್ಯಾರನಹೀಟ್‌! ಬೇಸಗೆಯ ಪ್ರತೀ ದಿನವೂ ನೂರಂಕಿ ದಾಟುವುದು ಸರ್ವೇಸಾಮಾನ್ಯ. ಇಲ್ಲಿರುವ ಶುಷ್ಕವಾದ ವಾತಾವರಣ ಎಂತಹವರನ್ನು ಕಂಗೆಡಿಸುತ್ತದೆ. ಬಾಯಾರಿಕೆ, ಸುಸ್ತಿನಿಂದ ಬಳಲುವ ದೇಹಕ್ಕೆ ನೀರು, ಆಹಾರ ಸಿಗುವುದು ಬಹಳ ದುರ್ಲಭ.‌

ಇಲ್ಲಿಗೆ ಹೋಗುವಾಗ ನೀರು, ಆಹಾರ, ಕಾರಿಗೆ ಪೆಟ್ರೋಲ್‌ ಹೀಗೆ ಬಹುಮುಖ್ಯವಾದ ಪರಿಕರಗಳ ಸಿದ್ಧತೆ ಮಾಡಿಕೊಂಡು ಹೋಗಬೇಕು. ಇಲ್ಲದೇ ಹೋದರೆ ಅಲ್ಲಿ ಸಿಕ್ಕಿ ಹಾಕಿಕೊಂಡು ಸಹಾಯಕ್ಕೆ ಯಾರೂ ಸಿಗದೇ ಒದ್ದಾಡಬೇಕಾಗುತ್ತದೆ. ಎಲ್ಲ ಪ್ರವಾಸೀ ತಾಣಗಳಲ್ಲಿ ಇರುವ ಹಾಗೆ ಡೆತ್‌ ವ್ಯಾಲಿಯಲ್ಲಿ ಉಳಿದುಕೊಳ್ಳಲು ಹೊಟೇಲ್‌ ಗಳು, ತಿನ್ನಲು ರೆಸ್ಟೋರೆಂಟ್‌ಗಳಿಲ್ಲ. ಇದೆಲ್ಲ ಸಿಗಬೇಕೆಂದರೆ ವ್ಯಾಲಿಯಿಂದ ಸುಮಾರು ನೂರು ಮೈಲಿ ಹೊರಬರಬೇಕು.

1849ರಲ್ಲಿ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಬಂಗಾರದ ಹುಡುಕಾಟ ಧುತ್ತೆಂದು ಶುರುವಾಗಿತ್ತು. ಕ್ಯಾಲಿಫೋರ್ನಿಯಾ ಗೋಲ್ಡ್‌ ರಶ್‌ ಎಂದು ಇತಿಹಾಸದಲ್ಲಿ ಗುರುತಿಸಿಕೊಳ್ಳುವ ಈ ಘಟನೆಯಲ್ಲಿ ಶುರುವಾಗಿದ್ದು ಜಾನ್‌ ಸಟ್ಟರ್‌ ಎಂಬಾತನಿಂದ. ಕಾರ್ಪೆಂಟರ್‌ ಆಗಿದ್ದ ಈತ ಒಂದು ದಿನ ನೀರಿನ ಕೊಳವೆಯನ್ನು ಕೊರೆಯುತ್ತಿದ್ದಾಗ ಬಂಗಾರದ ತುಣುಕುಗಳು ಭೂಮಿಯಲ್ಲಿ ಸಿಕ್ಕವಂತೆ. ಆಗ ಈತ ಮತ್ತು ಅವನ ಜತೆಗೆ ಇದ್ದ ಸಹಾಯಕ ಜೇಮ್ಸ್‌ ಮಾರ್ಷಲ್‌, ಇಬ್ಬರು ಈ ರಹಸ್ಯವನ್ನು ತಮ್ಮಲ್ಲಿಯೇ ಇಟ್ಟುಕೊಂಡು ಯಾರಿಗೂ ಗೊತ್ತಾಗದಂತೆ ಸುತ್ತಮುತ್ತಲಿನ ಭೂಮಿಯಲ್ಲಿ ಬಂಗಾರವನ್ನು ಹುಡುಕಿ ತೆಗೆಯುವುದಾಗಿ ತೀರ್ಮಾನಿಸಿದರಂತೆ. ಆದರೆ ಅವರು ಅಂದುಕೊಂಡಂತೆ ರಹಸ್ಯ ಗೌಪ್ಯವಾಗಿ ಉಳಿಯಲಿಲ್ಲ. ಸಾವಿರಾರು ಜನ ಬಂಗಾರದ ಆಸೆಗಾಗಿ ಬಂದು ಭೂಮಿಯನ್ನು ಅಗೆಯತೊಡಗಿದರು. ಬಂದವರು ಸಟ್ಟರ್‌ ಮನೆಯಲ್ಲಿದ್ದ ಎಲ್ಲವನ್ನು ಕದ್ದು ಅವನು ನಿರ್ಗತಿಕನಾದನಂತೆ.

ಕ್ಯಾಲಿಫೋರ್ನಿಯಾದಲ್ಲಿಯೇ ಬರುವ ಡೆತ್‌ ವ್ಯಾಲಿಯಲ್ಲಿಯೂ ಜನ ಬಂಗಾರಕ್ಕಾಗಿ ಹುಡುಕಿದರು. ಅಲ್ಲಿರುವ ಮರಳನ್ನು ಹೊತ್ತೊ ಯ್ದು ಏನಾದರೂ ಸಿಕ್ಕಿತೇ ಎಂದು ನೋಡಿದರು. ಅವರಾರಿಗೂ ಬಂಗಾರ ಸಿಗಲಿಲ್ಲ. ಅವರನ್ನು ದಿ ಲಾಸ್ಟ್‌ ಫೊರ್ಟಿ ನೈನರ್ಸ್‌ (49rs) ಎಂದು ಕರೆಯುತ್ತಾರೆ. ಡೆತ್‌ ವ್ಯಾಲಿಗೆ ಈ ಹೆಸರು ಏಕೆ ಬಂತು ಎಂದು ನೋಡಿದರೆ ಕತೆಯೊಂದು ಸಿಗುತ್ತದೆ. ಹೀಗೆ ಈ ಜಾಗಕ್ಕೆ ಬಂದ ಒಂದು ಗುಂಪು ಇಲ್ಲಿ ಕಳೆದು ಹೋದಾಗ ಇನ್ನೇನು ತಾವು ಇಲ್ಲಿಯೇ ಸತ್ತು ಹೂತು ಮಣ್ಣಾಗಿ ಬಿಡುತ್ತೇವೆ ಎಂದು ಭಾವಿಸಿದ್ದರಂತೆ. ಇಬ್ಬರು ಯುವಕರು ಆ ಗುಂಪನ್ನು ಪತ್ತೆ ಮಾಡಿ ರಕ್ಷಿಸಿದರು. ಎಲ್ಲರು ಪಾನಾಮಿಂಟ್‌ ಪರ್ವತಗಳನ್ನೇರಿ ಈ ಕಣಿವೆಯಿಂದ ಹೊರಬಂದಾಗ ಅದರಲ್ಲಿ ಇದ್ದವನೊಬ್ಬ ಪರ್ವತದ ಮೇಲೆ ನಿಂತು ಗುಡ್‌ ಬಾಯ್‌ ಡೆತ್‌ ವ್ಯಾಲೀ ಎಂದು ಕೂಗಿದನಂತೆ. ಸಾವಿನ ಕಣಿವೆಯೇ ನಿನಗೆ ವಿದಾಯ ಎಂದನಂತೆ. ಅದರಿಂದಲೇ ಜಾಗಕ್ಕೆ ಡೆತ್‌ ವ್ಯಾಲಿ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ.

ಅಷ್ಟಕ್ಕೂ ಏನಿದೆ ಈ ಡೆತ್‌ ವ್ಯಾಲಿಯಲ್ಲಿ? ಇಷ್ಟೆಲ್ಲ ಕಷ್ಟ ಅನುಭವಿಸಿ ಇಲ್ಲಿಗೆ ಯಾಕೆ ಹೋಗಬೇಕು ಎನ್ನಿಸುವುದು ಸಹಜ. ಇಲ್ಲಿರುವ ಸಾಲು ಬೆಟ್ಟಗುಡ್ಡಗಳು, ಕಮ್ಮರಿಗಳು (ಕ್ಯಾನ್ಯಾನ್ಸ್‌), ಮರಳುಗಾಡು, ಮೈಲುಗಟ್ಟಲೇ ಹಬ್ಬಿರುವ ಉಪ್ಪು ಹೆಪ್ಪುಗಟ್ಟಿರುವ ಚಪ್ಪಟೆಯಾದ ನೆಲ ಇತ್ಯಾದಿಗಳಿಂದ ಡೆತ್‌ ವ್ಯಾಲೀ ನೋಡಲೇಬೇಕಾದಂತಹ ಪ್ರವಾಸಿ ತಾಣವಾಗಿದೆ. ಉತ್ತರ ಅಮೆರಿಕದಲ್ಲಿ ಸಮುದ್ರ ಮಟ್ಟದಿಂದ ಅತ್ಯಂತ ತಳಭಾಗದ ಜಾಗ ಇದಾಗಿದ್ದು ಬ್ಯಾಡ್‌ ವಾಟರ್‌ ಬೇಸಿನ್‌ ಎಂಬ ಹೆಸರಿನ ಜಾಗ ಸಮುದ್ರ ಮಟ್ಟದಿಂದ 282 ಅಡಿ ಕೆಳಗೆ ಬರುತ್ತದೆ. ಈ ಬೇಸಿನ್‌ನಲ್ಲಿ ಮೈಲುಗಟ್ಟಲೇ ಹಬ್ಬಿರುವ ಚಪ್ಪಟೆಯಾದ ಉಪ್ಪಿನ ಪ್ರದೇಶವಿದೆ. ದೂರದಿಂದ ಬಿಳಿಯ ಸಮುದ್ರದಂತೆ ಕಾಣಿಸುವ ಈ ಜಾಗದಲ್ಲಿ ನಡೆಯುವಾಗ ಕಾಲ ಕೆಳಗೆ ಹೆಪ್ಪುಗಟ್ಟಿರುವ ಉಪ್ಪನ್ನು ಕಾಣಬಹುದು. ಬರಿಗಾಲಿನಲ್ಲಿ ನಡೆದರೆ ಚೂಪಾದ ಉಪ್ಪಿನ ಹರಳುಗಳು ಚುಚ್ಚುತ್ತವೆ. ಇದು ಡೆತ್‌ ವ್ಯಾಲಿಯ ಪ್ರಮುಖವಾದ ಜಾಗ. ಆರ್ಟಿಸ್ಟ್‌ ಕೇವ್‌ ಎಂಬ ಹೆಸರಿನ ಜಾಗವೊಂದಿದೆ. ಕಲಾವಿದ ಬಳಸುವ ಬಣ್ಣಗಳ ತಟ್ಟೆಯ ಹಾಗೆ ಕಾಣುವ ಬಣ್ಣಬಣ್ಣದ ಬೆಟ್ಟಗಳಿಂದ ಆವೃತ್ತವಾಗಿದೆ. ಜಬ್ರಿಸ್ಕಿ ಪಾಯಿಂಟ್‌ ಎಂಬಲ್ಲಿಯೂ ಒಂದೇ ಕಡೆಯಲ್ಲಿ ಭಿನ್ನವಾದ ಬಣ್ಣಗಳ ಪರ್ವತಗಳ ಮೇಳವಿದೆ. ಇಲ್ಲಿ ಸೂರ್ಯಾಸ್ತ ಬಹಳ ರಮಣೀಯವಾಗಿ ಕಾಣಿಸುತ್ತದೆ.

1933ರಲ್ಲಿ ಈ ಜಾಗವನ್ನು ರಾಷ್ಟ್ರೀಯ ಉದ್ಯಾನವನ ಎಂದು ಅಮೆರಿಕದ ಸರಕಾರ ಘೋಷಿಸಿತು. ಪೂರ್ವದಿಂದ ಉತ್ತರಕ್ಕೆ ಉದ್ದಕ್ಕೆ ಚಾಚಿಕೊಂಡಿರುವ ಹೆದ್ದಾರಿ ನೂರಾತೊಂಬತ್ತರ ಮೇಲೆ ಅಕ್ಕ ಪಕ್ಕದಲ್ಲಿ ಏನೂ ಇಲ್ಲದ ಬರಡು ಭೂಮಿಯಲ್ಲಿ ಮೈಲುಗಟ್ಟಲೇ ಸಾಗಿದಾಗ ಡೆತ್‌ ವ್ಯಾಲೀ ಸಿಗುತ್ತದೆ. ಚಿಕ್ಕ ಮಕ್ಕಳಿರುವ ಪೋಷಕರು, ವಯಸ್ಸಾದವರು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ತಮಗೆ ಅಗತ್ಯವಿರುವ ಪರಿಕರಗಳನ್ನು ತೆಗೆದುಕೊಂಡು ಹೋಗಬೇಕು. ಕಾರು ಕೈ ಕೊಟ್ಟರೆ, ಹೈಕ್‌ ಎಂದು ಹೋದವರು ದಾರಿ ತಪ್ಪಿ ಹೊರಬರಲು ಆಗದಿದ್ದರೆ ಅಂತಹವರಿಗೆ ನೆರವಿನ ಕಾರ್ಯಾಚರಣೆಗಳು ನಡೆಯುತ್ತಲೇ ಇರುತ್ತವೆ. ನೆಟವರ್ಕ್‌ ಸಹ ಇರುವುದಿಲ್ಲವಾದ್ದರಿಂದ ಜನ ಸುರಕ್ಷೆಯ ನಿಯಮಗಳನ್ನು ಅನುಸರಿಸಬೇಕೆಂದು ಉದ್ಯಾನವನದ ಪ್ರತಿನಿಧಿಗಳು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುತ್ತಾರೆ. ಡೆತ್‌ ವ್ಯಾಲಿಗೆ ಹೋಗಿ ಬಂದರೆ ಅಮರರಾದಂತೆಯೇ ಲೆಕ್ಕ!

*ಸಂಜೋತಾ ಪುರೋಹಿತ್‌

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಮಸ್ಕತ್‌: ಬಂಟ್ಸ್‌ ಸಮುದಾಯ-ವಿಷು ಆಚರಣೆ

Desi Swara: ಮಸ್ಕತ್‌: ಬಂಟ್ಸ್‌ ಸಮುದಾಯ-ವಿಷು ಆಚರಣೆ

ಕತಾರ್‌: “ಅವಳಿಗೆ ಇಫ್ತಾರ್‌’ ಕಾರ್ಯಕ್ರಮ

ಕತಾರ್‌: “ಅವಳಿಗೆ ಇಫ್ತಾರ್‌’ ಕಾರ್ಯಕ್ರಮ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.