ಅಂತಿಮ ಏಕದಿನ ಪಂದ್ಯ : ಬಾಂಗ್ಲಾ ವಿರುದ್ಧ ಲಂಕೆಗೆ ಸಮಾಧಾನಕರ ಗೆಲುವು
Team Udayavani, May 29, 2021, 12:23 AM IST
ಢಾಕಾ: ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯವನ್ನು 97 ರನ್ನುಗಳಿಂದ ಗೆದ್ದ ಶ್ರೀಲಂಕಾ ವೈಟ್ವಾಶ್ ಅವಮಾನದಿಂದ ಪಾರಾಗಿದೆ. ತನ್ನ ಸರಣಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಂಡು ಸಮಾಧಾನಪಟ್ಟಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ, ನಾಯಕ ಕುಸಲ್ ಪೆರೆರ ಅವರ 6ನೇ ಶತಕ ಸಾಹಸದಿಂದ 6 ವಿಕೆಟಿಗೆ 286 ರನ್ನುಗಳ ದೊಡ್ಡ ಮೊತ್ತ ಪೇರಿಸಿತು. ಜವಾಬಿತ್ತ ಬಾಂಗ್ಲಾದೇಶ 42.3 ಓವರ್ಗಳಲ್ಲಿ 189ಕ್ಕೆ ಆಲೌಟ್ ಆಯಿತು. ದುಷ್ಮಂತ ಚಮೀರ ಕೇವಲ 16 ರನ್ನಿಗೆ 5 ವಿಕೆಟ್ ಹಾರಿಸಿ ಬಾಂಗ್ಲಾಕ್ಕೆ ಕಂಟಕವಾಗಿ ಪರಿಣಮಿಸಿದರು.
ಆರಂಭಕಾರ ಕುಸಲ್ ಪೆರೆರ 122 ಎಸೆತಗಳಿಂದ 120 ರನ್ ಬಾರಿಸಿ ಮೆರೆದರು. ಸಿಡಿಸಿದ್ದು 11 ಫೋರ್ ಹಾಗೂ ಒಂದು ಸಿಕ್ಸರ್. ಧನಂಜಯ ಡಿ ಸಿಲ್ವ ಅಜೇಯ 55 ರನ್ ಹೊಡೆದರು.
ಬಾಂಗ್ಲಾದೇಶ ಬ್ಯಾಟಿಂಗ್ ಸರದಿ ಯಲ್ಲಿ ಮಹಮದುಲ್ಲ (53) ಮತ್ತು ಮೊಸದೆಕ್ ಹೊಸೇನ್ (51) ಅವರಿಂದ ಅರ್ಧ ಶತಕ ದಾಖಲಾಯಿತು.
ಇದನ್ನೂ ಓದಿ :ಜಡೇಜ ಜಬರ್ದಸ್ತ್ ಪ್ರದರ್ಶನದಿಂದ ಅವಕಾಶ ಕಷ್ಟ : ಅಕ್ಷರ್ ಪಟೇಲ್
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ-6 ವಿಕೆಟಿಗೆ 286 (ಕುಸಲ್ ಪೆರೆರ 120, ಧನಂಜಯ ಡಿ ಸಿಲ್ವ ಔಟಾಗದೆ 55, ತಸ್ಕಿನ್ ಅಹ್ಮದ್ 46ಕ್ಕೆ 4). ಬಾಂಗ್ಲಾದೇಶ-42.3 ಓವರ್ಗಳಲ್ಲಿ 189 (ಮಹಮದುಲ್ಲ 53, ಮೊಸದೆಕ್ 51, ಚಮೀರ 16ಕ್ಕೆ 5, ರಮೇಶ್ ಮೆಂಡಿಸ್ 40ಕ್ಕೆ 2, ಹಸರಂಗ 47ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
Athletics: ಕಿರಿಯರ ಏಷ್ಯನ್ ಆ್ಯತ್ಲೆಟಿಕ್ಸ್ ಜಾವೆಲಿನ್ನಲ್ಲಿ ದೀಪಾಂಶುಗೆ ಬಂಗಾರ
MUST WATCH
ಹೊಸ ಸೇರ್ಪಡೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್