ಈ ವರ್ಷ ನಡೆಯಲಿದೆ ಸರಣಿ ಶಸ್ತ್ರಾಸ್ತ್ರ ಪರೀಕ್ಷೆ

ಕ್ಷಿಪಣಿಯಿಂದ ಗ್ಲೈಡ್ ಬಾಂಬ್‌ವರೆಗೆ ಅತ್ಯಾಧುನಿಕ ಅಸ್ತ್ರಗಳ ಪ್ರಯೋಗ

Team Udayavani, May 8, 2022, 7:05 AM IST

thumb 5

ಹೊಸದಿಲ್ಲಿ: ಭಾರತೀಯ ಸೇನೆಯು ಪ್ರಸಕ್ತ ವರ್ಷ ಕ್ಷಿಪಣಿಗಳಿಂದ ಹಿಡಿದು ಗ್ಲೈಡ್ ಬಾಂಬ್‌ವರೆಗೆ ಶಸ್ತ್ರಾಸ್ತ್ರ ಪರೀಕ್ಷೆಗಳ ಸರಣಿಯನ್ನು ನಡೆಸಲು ಸಜ್ಜಾಗಿದೆ. ಈ ತಿಂಗಳಿನಲ್ಲೇ ಮೂರು ಪ್ರಮುಖ ಪರೀಕ್ಷೆಗಳು ನಡೆಯಲಿದ್ದು, ವರ್ಷಾಂತ್ಯಕ್ಕೆ ರಕ್ಷಣ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ವತಿಯಿಂದ “ಅಸ್ತ್ರ-3’ರ ಪ್ರಯೋಗವೂ ನಡೆಯಲಿದೆ.

100 ಕಿ.ಮೀ. ದೂರ ಚಿಮ್ಮುವ ಸಾಮರ್ಥ್ಯ ಹೊಂದಿರುವ “ಅಸ್ತ್ರ-1′, 160 ಕಿ.ಮೀ. ದೂರದ ಗುರಿ ತಲುಪುವ ಸಾಮರ್ಥ್ಯದ “ಅಸ್ತ್ರ-2′, ಹೊಸ ತಲೆಮಾರಿನ ವಿಕಿರಣ ನಿಗ್ರಹ ಕ್ಷಿಪಣಿ (ಎನ್‌ಜಿಆರ್‌ಎಎಂ) ರುದ್ರಂ-1ರ ಪರೀಕ್ಷೆಗಳು ಇದೇ ತಿಂಗಳಲ್ಲಿ ನಡೆಯಲಿವೆ. ರುದ್ರಂ-1 ಕ್ಷಿಪಣಿ 150 ಕಿ.ಮೀ. ದೂರದ ಶತ್ರು ನೆಲೆಯನ್ನು ಧ್ವಂಸಗೊಳಿಸುವ ಛಾತಿ ಹೊಂದಿದೆ.

ಮೊದಲ ಪರೀಕ್ಷೆ
ಸುಖೋಯ್‌ ಎಂಕೆಐ 30 ಯುದ್ಧ ವಿಮಾನದ ಮೂಲಕ “ಅಸ್ತ್ರ-2’ರ ಮೊದಲ ಪರೀಕ್ಷೆ ನಡೆಯಲಿದೆ. “ಅಸ್ತ್ರ-1′ ಕ್ಷಿಪಣಿಯ ಪರೀಕ್ಷೆ ಕೂಡ ಸುಖೋಯ್‌ ಮೂಲಕವೇ ನಡೆಯಲಿದೆ. ಐಎಎಫ್ ಈಗಾಗಲೇ 250 “ಅಸ್ತ್ರ-1′ ಕ್ಷಿಪಣಿಯನ್ನು ಖರೀದಿಸುವ ನಿಟ್ಟಿನಲ್ಲಿ ಬೇಡಿಕೆ ಸಲ್ಲಿಸಿದೆ. ಧ್ವನಿಯ ವೇಗಕ್ಕಿಂತ ನಾಲ್ಕು ಪಟ್ಟು ಹೆಚ್ಚು ವೇಗವನ್ನು ಈ ಕ್ಷಿಪಣಿಗಳು ಹೊಂದಿವೆ.

ರಕ್ಷಣ ಅಭಿವೃದ್ಧಿ ಮತ್ತು ಸಂಶೋಧನ ಸಂಸ್ಥೆ (ಡಿಆರ್‌ಡಿಒ)ಯ “ಅಸ್ತ್ರ-3’ರ ಪರೀಕ್ಷೆ ವರ್ಷಾಂತ್ಯಕ್ಕೆ ನಡೆಯಲಿದೆ. ಅದು 350 ಕಿ.ಮೀ. ದೂರದ ಶತ್ರು ನೆಲೆಯನ್ನು ಛೇದಿಸುವ ಸಾಮರ್ಥ್ಯ ಹೊಂದಿರಲಿದೆ. ಈ ವರ್ಷವೇ “ರುದ್ರಂ’ ಸರಣಿಯ 2 ಕ್ಷಿಪಣಿಗಳ ಪರೀಕ್ಷೆ ನಡೆಯುವುದು ಬಹುತೇಕ ಖಚಿತ. ಇವು 350 ಕಿ.ಮೀ. ದೂರದ ಶತ್ರು ನೆಲೆಯನ್ನು ನಾಶಗೊಳಿಸುವ ಸಾಮರ್ಥ್ಯ ಹೊಂದಿದ್ದು, ಗಗನದಿಂದ ನೆಲದಲ್ಲಿರುವ ಶತ್ರು ನೆಲೆಯನ್ನು ಕರಾರುವಾಕ್ಕಾಗಿ ಛೇದಿಸಲು ಬಳಸಲಾಗುತ್ತದೆ.

“ಅಸ್ತ್ರ’ದ ಹೆಗ್ಗಳಿಕೆ ಏನು?
-“ಅಸ್ತ್ರ’ ಸರಣಿಯ ಕ್ಷಿಪಣಿಗಳು ಸರ್ವಋತುಗಳಲ್ಲಿಯೂ ಕೆಲಸ ಮಾಡುವ ಸಾಮರ್ಥ್ಯ ಹೊಂದಿವೆ
-ಸೂಪರ್‌ಸಾನಿಕ್‌ ವೇಗದಲ್ಲಿ ಆಗಮಿಸುವ ಶತ್ರು ದೇಶಗಳ ಕ್ಷಿಪಣಿಗಳನ್ನು ನಾಶಮಾಡಬಲ್ಲವು.
-ಈ ಪ್ರಯೋಗ ಯಶಸ್ವಿಯಾದರೆ ಇಸ್ರೇಲ್‌, ಫ್ರಾನ್ಸ್‌, ರಷ್ಯಾದಿಂದ ಖರೀದಿಸಲಾಗುವ ಹೆಚ್ಚಿನ ವೆಚ್ಚದ ಕಣ್ಣಳತೆ ವ್ಯಾಪ್ತಿ ಮೀರುವ ವೈಮಾನಿಕ ಕ್ಷಿಪಣಿ (ಬಿವಿಆರ್‌ಎಎಎಂ)ಗಳಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಲಿವೆ.

ಸ್ಮಾರ್ಟ್‌ ಬಾಂಬ್‌ ವ್ಯವಸ್ಥೆ
ಸ್ಮಾರ್ಟ್‌ ಆ್ಯಂಟಿ-ವಾರ್‌ಫೀಲ್ಡ್‌ ವೆಪನ್‌ (ಎಸ್‌ಎಎಡಬ್ಲ್ಯು) ಎನ್ನುವ ಬಾಂಬ್‌ ದಾಳಿ ವ್ಯವಸ್ಥೆಯನ್ನು ಕೂಡ ದೇಶದಲ್ಲೇ ಅಭಿವೃದ್ಧಿಪಡಿಸಲಾಗುತ್ತಿದೆ. ಇದು 100 ಕಿ.ಮೀ. ದೂರದಲ್ಲಿರುವ ಶತ್ರುರಾಷ್ಟ್ರಗಳ ರನ್‌ವೇ, ಬಂಕರ್‌, ಏರ್‌ಕ್ರಾಫ್ಟ್ ಹ್ಯಾಂಗರ್‌ಗಳು, ರಾಡಾರ್‌ಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿರಲಿದೆ. ಸುಖೋಯ್‌ ಅಥವಾ ಜಾಗ್ವಾರ್‌ ಯುದ್ಧವಿಮಾನಗಳ ಮೂಲಕ ತಲಾ 125 ಕೆ.ಜಿ.ಯ 32 ಬಾಂಬ್‌ಗಳನ್ನು ಹೊತ್ತೂಯ್ಯಲು ಸಾಧ್ಯವಾಗುವಂತೆ ಇದನ್ನು ನಿರ್ಮಿಸಲಾಗುತ್ತಿದೆ.

 

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.