ಜನತೆ ಎಚ್ಚೆತ್ತುಕೊಂಡಾಗಲಷ್ಟೆ ಸಾಲದ ಆ್ಯಪ್‌ಗಳಿಗೆ ಕಡಿವಾಣ ಸಾಧ್ಯ


Team Udayavani, Jul 14, 2023, 5:17 AM IST

mobile

ದೇಶದೆಲ್ಲೆಡೆ ಸಾರ್ವತ್ರಿಕವಾಗಿ ವ್ಯಾಪಿಸಿರುವ ಸಾಲದ ಆ್ಯಪ್‌ಗ್ಳ ವಂಚನಾ ಜಾಲ ಅಮಾಯಕರನ್ನು ಪ್ರತಿದಿನ ಎಂಬಂತೆ ಬಲಿ ಪಡೆದು ಕೊಳ್ಳುತ್ತಿದೆ. ಬುಧವಾರವಷ್ಟೇ ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಯೋರ್ವ ಇಂತಹುದೇ ಲೋನ್‌ ಆ್ಯಪ್‌ವೊಂದರ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂತಹ ಅದೆಷ್ಟೋ ದುರಂತ ಸಾವುಗಳು ಈಗಾಗಲೇ ಸಂಭವಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ಆ ನೋವಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಇನ್ನು ಈ ವಂಚನಾ ಜಾಲದ ಸುಳಿಯಲ್ಲಿ ಸಿಲುಕಿ ಲಕ್ಷಾಂತರ ಕುಟುಂಬಗಳು ನೆಮ್ಮದಿ ರಹಿತ ಜೀವನವನ್ನು ಕಳೆಯುವಂತಾಗಿದೆ.

ಗಾಲ್ವಾನ್‌ ಘರ್ಷಣೆಯ ಬಳಿಕ ಕೇಂದ್ರ ಸರಕಾರ ಚೀನ ಮೂಲದ ಆ್ಯಪ್‌ಗ್ಳ ಮೇಲೆ ಹದ್ದುಗಣ್ಣಿರಿಸಿದ್ದು ಸಾಲ ನೀಡುವ ನೆಪದಲ್ಲಿ ಜನರನ್ನು ಸೆಳೆದು ಅವರನ್ನು ವಂಚಿಸುವ ಆ್ಯಪ್‌ಗ್ಳನ್ನು ಪತ್ತೆ ಹಚ್ಚಿ ಹಂತಹಂತವಾಗಿ ನಿಷೇಧಿಸುತ್ತಲೇ ಬಂದಿದೆ. ಸರಕಾರ ಈ ಪ್ರಕ್ರಿಯೆಯನ್ನು ನಿರಂತರವಾಗಿ ನಡೆಸುತ್ತ ಬಂದಿದ್ದರೂ ಈ ವಂಚನಾ ಜಾಲಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.

ಈ ವಂಚನಾ ಆ್ಯಪ್‌ಗಳ ಸುಳಿಗೆ ಸಿಲುಕಿ, ತಮ್ಮ ಜೀವನಪೂರ್ತಿ ಈ ಆ್ಯಪ್‌ಗ್ಳ ಸೂತ್ರಧಾರರಿಂದ ನಾನಾ ತೆರನಾದ ಕಿರುಕುಳ, ಬೆದರಿಕೆಗಳನ್ನು ಎದುರಿಸುತ್ತ ಮರ್ಯಾದೆಗೆ ಅಂಜಿ ಸಾಲದ ಕಂತು ಪೂರ್ಣಗೊಂಡಿದ್ದರೂ ಅವರ ಬೆದರಿಕೆಗಳಿಗೆ ಮಣಿದು ಇನ್ನೂ ಸಾಲದ ಕಂತು ಪಾವತಿಸುತ್ತ ಬಂದಿರುವ ಕುಟುಂಬಗಳ ಸಂಖ್ಯೆ ಸಹಸ್ರಾರು. ಇನ್ನು ಈ ವಂಚಕ ಆ್ಯಪ್‌ಗ್ಳ ಸಿಬಂದಿಯ ಕಿರುಕುಳ, ಬೆದರಿಕೆ, ದೌರ್ಜನ್ಯ ತಾಳಲಾರದೆ ಅದೆಷ್ಟೋ ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲವು ಪ್ರಕರಣಗಳಲ್ಲಿ ಸಾಲ ಪಡೆದವರು ತಮ್ಮ ಕುಟುಂಬದವರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ನಿದರ್ಶನಗಳೂ ನಮ್ಮ ಮುಂದಿವೆ. ಇಷ್ಟೆಲ್ಲ ಅನಾಹುತ, ಅವಾಂತರಗಳು ನಡೆಯುತ್ತಿದ್ದರೂ ದೇಶದೆಲ್ಲೆಡೆ ಈ ವಂಚನಾ ಆ್ಯಪ್‌ಗ್ಳು ಎಗ್ಗಿಲ್ಲದೆ ಕಾರ್ಯಾಚರಿಸುತ್ತಿವೆ ಮತ್ತು ಈ ಆ್ಯಪ್‌ಗ್ಳೊಡ್ಡುವ ಆಮಿಷಕ್ಕೆ ಜನರು ಇನ್ನೂ ಮರುಳಾಗುತ್ತಿರುವುದು ವಿಪರ್ಯಾಸವೇ ಸರಿ.

ಕೇಂದ್ರ ಸರಕಾರದಿಂದ ನಿಷೇಧಿಸಲ್ಪಟ್ಟ ಚೀನ ಮೂಲದ ಆ್ಯಪ್‌ಗಳು ಹೊಸ ರೂಪ ಮತ್ತು ಹೆಸರಿನೊಂದಿಗೆ ದೇಶವನ್ನು ಪ್ರವೇಶಿಸಿ ಕಾರ್ಯಾಚರಿ ಸುತ್ತಿದ್ದು ಇವುಗಳಿಗೆ ಲಗಾಮು ಹಾಕುವುದೇ ಸರಕಾರದ ಪಾಲಿಗೆ ಬಲುದೊಡ್ಡ ಸವಾಲಾಗಿ ಪರಿಣಮಿಸಿದೆ. ತಂತ್ರಜ್ಞಾನ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಮುನ್ನಡೆಯುತ್ತಿದ್ದು ಅದೇ ವೇಗದಲ್ಲಿ ವಂಚಕರು ಕೂಡ ತಮ್ಮ ಆ್ಯಪ್‌ಗ್ಳನ್ನು ಅಡ್ಡಹಾದಿಯಲ್ಲಿ ಸಕ್ರಿಯವಾಗಿಸಿಕೊಂಡು ಕಾರ್ಯಾಚರಿಸು ತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಜನರನ್ನು ಸೆಳೆಯಲು ಹೊಸ ಹೊಸ ವರಸೆಗಳನ್ನು ಬಳಸತೊಡಗಿದ್ದಾರೆ. ನಕಲಿ ಆ್ಯಪ್‌ಗ್ಳ ಈ ಕಾರ್ಯತಂತ್ರಕ್ಕೆ ಆಕರ್ಷಿತರಾಗಿ ಜನರು ಸಾಲಕ್ಕಾಗಿ ಈ ಆ್ಯಪ್‌ಗ್ಳ ಮೊರೆ ಹೋಗುತ್ತಿದ್ದಾರೆ.

ಈ ಆ್ಯಪ್‌ಗ್ಳಿಂದಾಗಿ ಸಹಸ್ರಾರು ಕುಟುಂಬಗಳು ಇನ್ನಿಲ್ಲದ ಬವಣೆ ಅನುಭವಿಸುತ್ತಿರುವುದನ್ನು ಕಣ್ಣಾರೆ ಕಂಡರೂ ಜನರು ಮಾತ್ರ ಈ ಆ್ಯಪ್‌ಗ್ಳು ಒಡ್ಡುವ ಆಮಿಷಗಳಿಗೆ ಬಲಿಯಾಗುತ್ತಲೇ ಇದ್ದಾರೆ. ಜನರ ಈ ಅಸಡ್ಡೆಯ ಅಥವಾ ಭಂಡತನದ ಧೋರಣೆಯನ್ನು ತಮ್ಮ ಬಂಡವಾಳ ವಾಗಿಸಿಕೊಂಡಿರುವ ಈ ಆ್ಯಪ್‌ಗ್ಳು ಭಾರೀ ಸಂಖ್ಯೆಯಲ್ಲಿ ಜನರನ್ನು ತಮ್ಮ ಖೆಡ್ಡಾದೊಳಗೆ ಬೀಳಿಸುತ್ತಲೇ ಇವೆ.

ಸಾಲದ ಆ್ಯಪ್‌ ಆದಿಯಾಗಿ ವಂಚನಾ ಆ್ಯಪ್‌ಗ್ಳಿಗೆ ದೇಶದಲ್ಲಿ ಸಂಪೂರ್ಣವಾಗಿ ನಿರ್ಬಂಧ ಹೇರಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ತಂತ್ರಜ್ಞಾನ ಪರಿಣತರ ನೆರವು ಪಡೆದು ಈ ಆ್ಯಪ್‌ಗ್ಳು ದೇಶದಲ್ಲಿ ಕಾರ್ಯಾಚರಿಸದಂತೆ ಮಾಡಲು ಹೊಸ ವಿಧಾನವನ್ನು ಕಂಡುಕೊಳ್ಳಬೇಕು. ಸರಕಾರ ಯಾವುದೇ ಕಾನೂನು, ನಿರ್ಬಂಧಗಳನ್ನು ಜಾರಿಗೊಳಿಸಿದರೂ ಜನರು ಎಚ್ಚೆತ್ತುಕೊ ಳ್ಳದೇ ಹೋದಲ್ಲಿ ಈ ವಂಚನಾ ಆ್ಯಪ್‌ಗ್ಳಿಗೆ ಕಡಿವಾಣ ಹಾಕುವುದು ಕಷ್ಟಸಾಧ್ಯ.

ಟಾಪ್ ನ್ಯೂಸ್

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

6-uv-fusion

UV Fusion: ಮಿತಿಯೊಳಗಿನ ಬದುಕು ನೆನಪಾದಾಗ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.