ಜನರಲ್ ಆಸ್ಪತ್ರೆಯಲ್ಲಿ ಘರ್ಷಣೆ:ಸೆಕ್ಯೂರಿಟಿ ಗಾರ್ಡ್, ಸಿಬಂದಿಗೆ ಹಲ್ಲೆ-ಆರೋಪಿ ಬಂಧನ
Team Udayavani, Apr 5, 2023, 5:15 AM IST
ಕಾಸರಗೋಡು: ಕಾರು ಪಾರ್ಕಿಂಗ್ ವಿಷಯದಲ್ಲಿ ವಾಗ್ವಾದ ನಡೆಸಿ ಸೆಕ್ಯೂರಿಟಿ ಗಾರ್ಡ್ ಮತ್ತು ಸಿಬಂದಿಗೆ ಹಲ್ಲೆ ಮಾಡಿದ ಘಟನೆ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ. ಈ ಸಂಬಂಧ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಜನರಲ್ ಆಸ್ಪತ್ರೆಯ ನರ್ಸಿಂಗ್ ಅಸಿಸ್ಟೆಂಟ್ ನಾರಾಯಣನ್ (50) ಮತ್ತು ಭದ್ರತ ಸಿಬಂದಿ ರಾಜೇಶ್ (42) ಅವರ ಮೇಲೆ ಹಲ್ಲೆ ಮಾಡಲಾಗಿದ್ದು, ಅವರನ್ನು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ರಾಜೇಶ್ ನೀಡಿದ ದೂರಿನಂತೆ ಚೆಂಗಳ ಸಂತೋಷ್ ನಗರದ ಮಾರಾ ಹೌಸ್ನ ಅಬೀದ್ ಎಂ.ಎ. (28) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಆತನ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.