ಐಎಸ್ಡಿಗೆ ಗುಜರಾತ್ ಮಾದರಿ ತರಬೇತಿ! ಕರಾವಳಿ ಕಾವಲುಪಡೆ ಸಾಮರ್ಥ್ಯ ವರ್ಧನೆಯ ಉದ್ದೇಶ
Team Udayavani, Feb 24, 2021, 6:20 AM IST
ಬೆಂಗಳೂರು : ಕರಾವಳಿ ಕಾವಲುಪಡೆ ಸಹಿತ ಆಂತರಿಕ ಭದ್ರತ ದಳ(ಐಎಸ್ಡಿ) ಸಿಬಂದಿಗೆ ಗುಜರಾತ್ ಮಾದರಿಯಲ್ಲಿ ತರಬೇತಿ ನೀಡಿ ಕಾರ್ಯಕ್ಷಮತೆಯನ್ನು ವೃದ್ಧಿಸಲಾಗುತ್ತಿದೆ.
ಗುಜರಾತ್ ಕರಾವಳಿ ಪಾಕಿಸ್ಥಾನಕ್ಕೆ ಹತ್ತಿರದಲ್ಲಿದ್ದು, ಸಮುದ್ರದ ಮೂಲಕ ಉಗ್ರರ ಒಳನುಸುಳುವಿಕೆಯನ್ನು ತಡೆಯುವಲ್ಲಿ ಗುಜರಾತ್ ಕರಾವಳಿಯ ಗಡಿ ಭದ್ರತಾ ಯೋಧರು ನೈಪುಣ್ಯ ಹೊಂದಿದ್ದಾರೆ. ನಮ್ಮ ಕರಾವಳಿಯಲ್ಲೂ ಇಂಥ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಐಎಸ್ಡಿಯ ಕರಾವಳಿ ಕಾವಲು ಪಡೆಯ ಸಿಬಂದಿಗೂ ತರಬೇತಿ ನೀಡಲಾಗುತ್ತಿದೆ. ಗುಜರಾತ್ನ ಒಖಾರಾದಲ್ಲಿ ಇರುವ ಬಿಎಸ್ಎಫ್ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಕರ್ನಾಟಕದ ಐಎಸ್ಡಿ ಸಿಬಂದಿಗೆ ತರಬೇತಿ ಆರಂಭವಾಗಿದೆ.
ಜಲಾಶಯಗಳ ರಕ್ಷಣೆಯ ದೃಷ್ಟಿಯಿಂದಲೂ ಈ ತರಬೇತಿ ಮಹತ್ವದ್ದು. ಕರಾವಳಿ ಕಾವಲು ಪಡೆಯ ಕಾನ್ಸ್ಟೇಬಲ್ ಮತ್ತು ಹೆಡ್ಕಾನ್ಸ್ಟೆಬಲ್ ಸ್ತರದ ಸಿಬಂದಿಗೆ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಯಿಂದ ಕಾರ್ಯಾಚರಣೆಗೆ ಅನುಕೂಲವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊದಲ ತಂಡದಲ್ಲಿ ಕರಾವಳಿ ಕಾವಲು ಪಡೆಯ 18 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಈ ತಂಡದ 3 ತಿಂಗಳ ತರಬೇತಿ ಮುಕ್ತಾಯವಾದ ಬಳಿಕ ಮತ್ತೂಂದು ತಂಡ ಕಳುಹಿಸಲಾಗುತ್ತದೆ.
ಐಎಸ್ಡಿ ವ್ಯಾಪ್ತಿಯಲ್ಲಿ ಇರುವ ಕರಾವಳಿ ಭದ್ರತಾ ಪಡೆಯನ್ನು ಬಲಪಡಿಸುವುದಕ್ಕಾಗಿ ಗುಜರಾತ್ನಲ್ಲಿ ತರಬೇತಿ ಕೊಡಿಸಲಾಗುತ್ತಿದೆ. ಈ ಮೂಲಕ ರಾಜ್ಯದ ಆಂತರಿಕ ಭದ್ರತೆಯನ್ನು ಬಲಪಡಿಸಲಾಗುತ್ತದೆ.
– ಭಾಸ್ಕರ ರಾವ್, ಐಡಿಎಸ್ಡಿಯ ನಿಕಟಪೂರ್ವ ಮುಖ್ಯಸ್ಥರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ