Crime: ಕುರ್ಚಿ ಕದ್ದ ಯುವಕನನ್ನು ಮರಕ್ಕೆ ನೇತುಹಾಕಿದ ಗ್ರಾಮ ಪ್ರಧಾನ್
Team Udayavani, Apr 7, 2023, 6:30 PM IST
ಆಗ್ರಾ: ಕುರ್ಚಿ ಕದ್ದಿದ್ದಾನೆ ಎಂಬ ಕಾರಣಕ್ಕೆ ಯುವಕನೊಬ್ಬನ ಕೈ-ಕಾಲುಗಳನ್ನು ಕಟ್ಟಿ ಮರವೊಂದಕ್ಕೆ ನೇತು ಹಾಕಿ ನೆಲದಲ್ಲಿ ಬೆಂಕಿ ಹಚ್ಚಿ ಚಿತ್ರಹಿಂಸೆ ನೀಡಿದ ದಾರುಣ ಘಟನೆ ಆಗ್ರಾದಲ್ಲಿ ನಡೆದಿದೆ.
ʻಫಿರೋಝಾಬಾದ್ ಜಿಲ್ಲೆಯ ಆಗ್ರಾದ ದಿಬಯಾಚಿ ಗ್ರಾಮದ ನಿವಾಸಿ ಮುಕೇಶ್ ಕುಮಾರ್ ಎಂಬಾತ ಕುರ್ಚಿಯನ್ನು ಕದ್ದಿದ್ದಾನೆ ಎಂದು ಆರೋಪಿಸಿ ಗುರುವಾರ ರಾತ್ರಿಯ ವೇಳೆ ಆತನ ಮನೆಗೆ ಬಂದ ಊರಿನ ಮುಖ್ಯಸ್ಥ ಮತ್ತು ಅವರ ಬೆಂಬಲಿಗರು ಆತನನ್ನು ಎಳೆದೊಯ್ದು ಮರಕ್ಕೆ ನೇತುಹಾಕಿ ಚಿತ್ರಹಿಂಸೆ ನೀಡಿದ್ದಾರೆ. ನೆಲದಲ್ಲಿ ಬೆಂಕಿಯನ್ನೂ ಹಾಕಿದ್ದರಿಂದ ಆತ ಅದರ ಹೊಗೆಯಿಂದಾಗಿ ಮೂರ್ಛೆ ಹೋಗಿದ್ದಾನೆ. ಅದನ್ನು ಗಮನಿಸಿದ ಗ್ರಾಮಸ್ಥರು ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆʼ ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.
ಇದನ್ನೂ ಓದಿ: PM ಮೋದಿ, CM ಯೋಗಿ ಅವರಿಗೆ ಬೆದರಿಕೆ ಹಾಕಿದ 16 ವರ್ಷದ ಬಾಲಕನ ಬಂಧನ!
ಸದ್ಯಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು, ಗ್ರಾಮ ಪ್ರಧಾನ್ನನ್ನು ಬಂಧಿಸಿದ್ದು, 6 ಮಂದಿಯ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ