Education Dept: ತಮ್ಮನ ವರ್ಗಾವಣೆ ಆದೇಶಕ್ಕೆ ರುಜು ಹಾಕಿದ ಅಣ್ಣ
ಅಣ್ಣನ ರುಜುವಿನಡಿ ವರ್ಗಾವಣೆ ಆದೇಶ ಸಿಕ್ಕಿರುವುದಕ್ಕೆ ತಮ್ಮನ ಸಂತಸ
Team Udayavani, Jul 13, 2023, 10:30 PM IST
ಗಂಗಾವತಿ: ಸಹೋದರನ ವರ್ಗಾವಣೆ ಆದೇಶಕ್ಕೆ ಒಡಹುಟ್ಟಿದ ಅಣ್ಣ ರುಜು ಹಾಕಿದ ಸೌಭಾಗ್ಯ ನೆನೆದು ಸ್ನೇಹಿತರು ಮತ್ತು ಕುಟುಂಬದವರ ಜತೆ ತಮ್ಮ ವರ್ಗಾವಣೆ ಆದೇಶ ಪತ್ರ ಹಾಗೂ ಸಹೋದರ ಭಾವಚಿತ್ರವನ್ನು ಹಂಚಿಕೊಂಡು ಭಾವುಕರಾದ ಪ್ರಸಂಗ ಗಂಗಾವತಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ.
ಗಂಗಾವತಿ ಬಿಇಒ ಆಗಿ ವರ್ಗಾವಣೆಗೊಂಡಿರುವ ವೆಂಕಟೇಶ ಅವರ ದೊಡ್ಡ ಅಣ್ಣ ಮಲ್ಲಿಕಾರ್ಜುನ ಶಿಕ್ಷಣ ಇಲಾಖೆಯ ಶಾಲಾ ಮತ್ತು ಸಾರಕ್ಷರತಾ ಇಲಾಖೆಯ ಸರಕಾರದ ಆಧೀನ ಕಾರ್ಯದರ್ಶಿಯಾಗಿದ್ದು ಸರಕಾರದ ಆದೇಶದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕುಡುಗೋಡು ತಾಲೂಕು ಬಿಇಒ ಆಗಿದ್ದ ಸಹೋದರ ವೆಂಕಟೇಶ ಅವರನ್ನು ಗಂಗಾವತಿ ಬಿಇಒ ಆಗಿ ವರ್ಗಾವಣೆ ಆದೇಶಕ್ಕೆ ರುಜು ಮಾಡಿದ್ದಾರೆ. ಆದೇಶ ಪತ್ರದಲ್ಲಿ ಬಿಇಒ ವೆಂಕಟೇಶ ಹಾಗೂ ಸರ್ಕಾರದ ಆಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ಹೆಸರುಗಳ ಮುಂದೆ ರಾಮಚಂದ್ರಪ್ಪ ಎಂಬ ಹೆಸರಿದ್ದು ಇದನ್ನು ಇದು ದೇವರು ನಮಗೆ ನೀಡಿದ ಸೌಭಾಗ್ಯವಾಗಿದ್ದು ಸಹೋದರನ ರುಜುವಿನಡಿ ವರ್ಗಾವಣೆ ಆದೇಶ ಸಿಕ್ಕಿರುವುದು ಖುಷಿಯ ವಿಷಯವಾಗಿದೆ ಎಂದು ಬಿಇಒ ವೆಂಕಟೇಶ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮರಳು ಮಾಫಿಯಾದಿಂದ ಜೀವ ಬೆದರಿಕೆ: ರಕ್ಷಣೆ ಬೇಕು ಎಂದ ಜೆಡಿಎಸ್ ಶಾಸಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
HDK ಹೇಳುತ್ತಿದ್ದದ್ದು ಪ್ರಜ್ವಲ್ ಪೆನ್ಡ್ರೈವ್ ಇರಬೇಕು: ಜಮೀರ್
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
MUST WATCH
ಹೊಸ ಸೇರ್ಪಡೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ