Flight Ticket: ಮುಂಬೈ ಟು ಗೋವಾ ವಿಮಾನಯಾನದ ಟಿಕೆಟ್ ಬೆಲೆ 85 ರೂ.: 1975ರ ಟಿಕೆಟ್ ವೈರಲ್!
ಬಣ್ಣ ಮಾಸಿದ ಹಳೆಯ ಟಿಕೆಟ್ ಹಾಗೂ ಬೋರ್ಡಿಂಗ್ ಪಾಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
Team Udayavani, Apr 15, 2023, 3:51 PM IST
ಮುಂಬೈ:1932ರಲ್ಲಿ ಮೊದಲ ಬಾರಿಗೆ ವಿಮಾನಯಾನ ಆರಂಭವಾದ ನಂತರ ಭಾರತೀಯ ವಾಯುಯಾನ ಸಂಸ್ಥೆಯೂ ಕೂಡಾ ಬಹಳಷ್ಟು ಬದಲಾವಣೆ ಕಂಡಿದೆ. ಆರ್ಥಿಕ ವ್ಯವಸ್ಥೆ ಬದಲಾವಣೆ, ಹಣದುಬ್ಬರ ಮತ್ತು ಆಧುನಿಕ ತಂತ್ರಜ್ಞಾನದ ಜೊತೆ, ಜೊತೆಗೆ ವಾಯುಯಾನ ಸಂಸ್ಥೆಯೂ ಬದಲಾವಣೆಗೊಂಡಿದೆ. ಅದೇ ರೀತಿ ವಿಮಾನ ಪ್ರಯಾಣದ ಟಿಕೆಟ್ ದರದಲ್ಲಿಯೂ ಸಾಕಷ್ಟು ಹೆಚ್ಚಳವಾಗಿದೆ. ಅದಕ್ಕೆ ಪೂರಕ ಎಂಬಂತೆ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು 1975ರಲ್ಲಿ ಮುಂಬೈನಿಂದ ಗೋವಾಕ್ಕೆ ಪ್ರಯಾಣಿಸಿದ ವಿಮಾನ ಯಾನದ ಟಿಕೆಟ್ ಅನ್ನು ಹಂಚಿಕೊಂಡಿರುವುದು ವೈರಲ್ ಆಗಿದೆ. ಅದಕ್ಕೆ ಕಾರಣ…ಅಂದು ಮುಂಬೈ ಟು ಗೋವಾಕ್ಕೆ ವಿಮಾನ ಪ್ರಯಾಣದ ಟಿಕೆಟ್ ಬೆಲೆ ಕೇವಲ 85ರೂಪಾಯಿಯಾಗಿರುವುದು!
ಇದನ್ನೂ ಓದಿ:Congress ಮೂರನೇ ಪಟ್ಟಿ: ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ Suspense
“1975ರಲ್ಲಿನ ಇಂಡಿಯನ್ ಏರ್ ಲೈನ್ಸ್ ಟಿಕೆಟ್ ಎಂಬ ಕ್ಯಾಪ್ಶನ್ ಮೂಲಕ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬಾಂಬೆ ಟು ಗೋವಾ ವಿಮಾನಯಾನದ ಟಿಕೆಟ್ ಬೆಲೆ 85 ರೂಪಾಯಿ ರೂಪಾಯಿ! ಬಣ್ಣ ಮಾಸಿದ ಹಳೆಯ ಟಿಕೆಟ್ ಹಾಗೂ ಬೋರ್ಡಿಂಗ್ ಪಾಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
Indian Airlines ticket from 1975. Bombay to Goa for ₹85!
cc. @airindiain pic.twitter.com/FwJaLYDAX6— India Wants To Know: India’s First Panel Quiz Show (@IWTKQuiz) April 13, 2023
ಸುಮಾರು 45ವರ್ಷಕ್ಕೂ ಹಿಂದಿನ ವಿಮಾನ ಪ್ರಯಾಣದ ಟಿಕೆಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರಿಂದ ಹಲವಾರು ಮಂದಿ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಹೌದು ನನಗೂ ಕೂಡಾ ನೆನಪಿರುವಂತೆ 1988ರಲ್ಲಿ ಬಾಂಬೆ ಟು ಗೋವಾಕ್ಕೆ ಟಿಕೆಟ್ ಬೆಲೆ 435 ರೂಪಾಯಿ ಇದ್ದಿತ್ತು ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ನೆನಪಿಸಿಕೊಂಡಿದ್ದಾರೆ. 1974ರಲ್ಲಿ ಮೊದಲ ಬಾರಿಗೆ ಮಂಗಳೂರಿನಿಂದ ಬಾಂಬೆಗೆ ವಿಮಾನದಲ್ಲಿ ತೆರಳಿದ್ದ ವೇಳೆ ಟಿಕೆಟ್ ಬೆಲೆ 280 ರೂಪಾಯಿ ಇದ್ದಿತ್ತು. ನನ್ನ 8 ವರ್ಷದ ಮಗನಿಗೆ 140 ರೂಪಾಯಿ ಟಿಕೆಟ್ ಚಾರ್ಜ್ ವಿಧಿಸಿರುವುದಾಗಿ ಮತ್ತೊಬ್ಬ ಬಳಕೆದಾರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ