Manipur: ಮಣಿಪುರ ಸಂಘರ್ಷದ ಇತಿಹಾಸ- ಇನ್ನೂ ಆರದ ಗಲಭೆಯ ಬೆಂಕಿ


Team Udayavani, Jun 3, 2023, 7:52 AM IST

manipur fire

ಮೈತೇಯಿ ಮತ್ತು ಬುಡಕಟ್ಟು ಸಮುದಾಯದ ನಡುವೆ ಎದ್ದ “ಪರಿಶಿಷ್ಟ ಪಂಗಡ ಸ್ಥಾನಮಾ”‘ದ ಕಿಡಿ ಇಡೀ ಮಣಿಪುರವನ್ನು ಹೊತ್ತಿ ಉರಿಯುವಂತೆ ಮಾಡಿದ್ದು, ಗಲಭೆಯ ಬೆಂಕಿ ಇನ್ನೂ ಆರಿಲ್ಲ. ಹಾಗೆ ನೋಡಿದರೆ ಮಣಿಪುರವೆಂಬ ಪುಟ್ಟ ರಾಜ್ಯಕ್ಕೆ ಹಿಂಸಾಚಾರ, ಪ್ರತ್ಯೇಕತಾವಾದದ ಕೂಗು ಹೊಸ ತೇನಲ್ಲ. 50ರ ದಶಕದಿಂದಲೇ ಇಲ್ಲಿ ಬಂಡುಕೋರರ ಹೆಜ್ಜೆಗುರುತು ಕಾಣಿಸಿಕೊಂಡಿತ್ತು. ತದನಂತರ ಬೇರೆ ಬೇರೆ ಉದ್ದೇಶ, ಕಾರಣಗಳೊಂದಿಗೆ ಹತ್ತು ಹಲವು ಗುಂಪುಗಳು, ಸಂಘಟನೆಗಳು ಹುಟ್ಟಿಕೊಂಡವು. ಮಣಿಪುರದ ಈ ಸಂಘರ್ಷದ ಇತಿಹಾಸದ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಸಂಘರ್ಷ ಹೊಸತಲ್ಲ

ಭಾರತದ ಅತೀ ಪುರಾತನ ಬಂಡುಕೋರ ಚಳವಳಿಗಳ ಇತಿಹಾಸ ಕೆದಕಿದರೆ ನೆನಪಿಗೆಬರುವ ರಾಜ್ಯಗಳಲ್ಲಿ ಮಣಿಪುರವೂ ಒಂದು. 1950ರ ದಶಕದಲ್ಲಿ ನಾಗಾ ರಾಷ್ಟ್ರೀಯ ಚಳವಳಿ ಆರಂಭವಾಗಿ, ಸ್ವತಂತ್ರ ನಾಗಾಲಿಮ್‌ಗಾಗಿ ಹೋರಾಟವು ಮಣಿಪುರದ ಹಲವು ಭಾಗಗಳಲ್ಲಿ ವ್ಯಾಪಿಸಿತ್ತು. ಅನಂತರದಲ್ಲಿ ಎನ್‌ಎಸ್‌ಸಿಎಂ-ಐಎಂ ಭಾರತ ಸರಕಾರದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದು 1997ರಲ್ಲಿ. ಈ ಚಳವಳಿಯು ಉತ್ತುಂಗದಲ್ಲಿದ್ದಾಗಲೇ, ಮಣಿಪುರದ ದೊರೆ ಮಹಾರಾಜ ಬೋಧಚಂದ್ರ ಮತ್ತು ಭಾರತ ಸರಕಾರದ ನಡುವಿನ ವಿಲೀನ ಒಪ್ಪಂದವನ್ನು ಮಣಿಪುರದ ಮೈತೇಯಿ ಸಮುದಾಯ ವಿರೋಧಿಸಿತ್ತು.

ಚೀನದಿಂದ ಶಸ್ತ್ರಾಸ್ತ್ರ ತರಬೇತಿ

ಭಾರತದಿಂದ ಪ್ರತ್ಯೇಕಗೊಳ್ಳುವ ಕೂಗಿನೊಂದಿಗೆ 1964ರಲ್ಲಿ ಯುನೈಟೆಡ್‌ ನ್ಯಾಶನಲ್‌ ಲಿಬರೇಶನ್‌ ಫ್ರಂಟ್‌(ಯುಎನ್‌ಎಲ್‌ಎಫ್) ರೂಪುಗೊಂಡಿತು. ಬಳಿಕ ಮೈತೇಯಿ ಬಂಡುಕೋರರ ಸಮೂಹ ಅಥವಾ ಕಣಿವೆ ಬಂಡುಕೋರರ ಗುಂಪು ಪೀಪಲ್ಸ್‌ ರೆವೊಲ್ಯೂಶನರಿ ಪಾರ್ಟಿ ಆಫ್ ಕಾಂಗ್ಲೆಪಾಕ್‌(ಪ್ರೀಪಾಕ್‌) ಮತ್ತು ಪೀಪಲ್ಸ್‌ ಲಿಬರೇಶನ್‌ ಆರ್ಮಿ(ಪಿಎಲ್‌ಎ) ಎಂಬ ಹೆಸರಿನೊಂದಿಗೆ ಅಸ್ತಿತ್ವಕ್ಕೆ ಬಂದವು. ಈ ಬಂಡುಕೋರರು ಚೀನದಿಂದ ಶಸ್ತ್ರಾಸ್ತ್ರಗಳ ತರಬೇತಿ ಪಡೆಯಲಾರಂಭಿಸಿದರು. 2 ಉದ್ದೇಶಗಳೊಂದಿಗೆ ಈ ಗುಂಪುಗಳು ಕಾರ್ಯಾಚರಣೆ ಆರಂಭಿಸಿದವು. ಅವೆಂದರೆ ಭಾರತದಿಂದ ಸ್ವತಂತ್ರಗೊಳ್ಳುವುದು ಮತ್ತು ನಾಗಾ ಬಂಡುಕೋರರನ್ನು ಹಿಮ್ಮೆಟ್ಟಿಸುವುದು.

ಕುಕಿ-ಝೋಮಿ ಗ್ರೂಪ್‌

ಕುಕಿ-ಝೋಮಿ ಬಂಡುಕೋರರ ಗುಂಪು ವಾಸ್ತವದಲ್ಲಿ ಅಸ್ತಿತ್ವಕ್ಕೆ ಬಂದಿದ್ದೇ ನಾಗಾಆಕ್ರಮಣಕ್ಕೆ ಪ್ರತಿಯಾಗಿ. 1993ರಲ್ಲಿ ಎನ್‌ಎಸ್‌ಸಿಎನ್‌-ಐಎಂ ಬಂಡುಕೋರರು ನಡೆಸಿದ ಮಾರಣಹೋಮದಲ್ಲಿ ಸಾವಿರಾರು ಕುಕಿಗಳು ನಿರಾಶ್ರಿತರಾದರು. ಈ ಘಟನೆಯ ಬಳಿಕ ಕುಕಿ-ಝೋಮಿ ಬುಡಕಟ್ಟು ಜನಾಂಗವು ವಿವಿಧ ಸಶಸ್ತ್ರ ಗುಂಪುಗಳನ್ನು ಸೇರಿಸಿಕೊಂಡು ಸಂಘಟಿತಗೊಳ್ಳಲು ಶುರು ಮಾಡಿತು.

ಸರಕಾರ ಮಾಡಿದ್ದೇನು?

ನಾಗಾ ಪ್ರತ್ಯೇಕತಾವಾದಿ ಚಟುವಟಿಕೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ 1958ರಲ್ಲಿ ಭಾರತ ಸರಕಾರವು ಸಶಶŒ ಪಡೆಗಳ ವಿಶೇಷಾಧಿಕಾರ ಕಾಯ್ದೆ ಜಾರಿ ಮಾಡಿತು.ಆರಂಭದಲ್ಲಿ ನಾಗಾಲ್ಯಾಂಡ್‌ ಪೂರ್ತಿ ಮತ್ತು ಮಣಿಪುರದ ಕೆಲ ಭಾಗಗಳಲ್ಲಿ ಕಾಯ್ದೆ ಜಾರಿಯಾಯಿತು. ಕಣಿವೆಯಲ್ಲಿ ಬಂಡುಕೋರರ ಕಿರಿಕ್‌ ಜಾಸ್ತಿಯಾದ ಬಳಿಕ ಮಣಿಪುರದಾದ್ಯಂತ ಕಾಯ್ದೆ ವಿಸ್ತರಿಸಲಾಯಿತು.1980ರಲ್ಲಿ ಮಣಿಪುರವನ್ನು “ಸಂಘರ್ಷಪೀಡಿತ ಪ್ರದೇಶ’ ಎಂದು ಘೋಷಿಸಲಾಯಿತು. ಶಾಂತಿ ಮಾತುಕತೆಗೂ ಹಲವು ಪ್ರಯತ್ನಗಳು ನಡೆದವು.2008ರಲ್ಲಿ ಕೇಂದ್ರ, ರಾಜ್ಯ ಮತ್ತು ಕುಕಿ-ಝೋಮಿ ಗುಂಪುಗಳ ನಡುವೆ “ಕಾರ್ಯಾಚರಣೆ ಸ್ಥಗಿತ'(ಸಸ್ಪೆನ್ಶನ್‌ ಆಫ್ ಆಪರೇಶನ್‌) ಎಂಬ ತ್ರಿಪಕ್ಷೀಯ ಒಪ್ಪಂದ ನಡೆಯಿತು.ಅನಂತರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕ್ರಮೇಣ ಸುಧಾರಣೆಯಾಗಿ, ಹಲವು ಪ್ರದೇಶಗಳಿಂದ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ವಾಪಸ್‌ ಪಡೆಯಲಾಯಿತು.

ರಾಜಕೀಯ, ಸಮಾಜದ ಮೇಲೆ ಪ್ರಭಾವ

ಬಂಡುಕೋರ ಸಂಘಟನೆಗಳು ಮಣಿಪುರ ಜನರ ದೈನಂದಿನ ಬದುಕಿನೊಳಗೆ ಸೂಕ್ಷ್ಮವಾಗಿ ಹೆಣೆಯಲ್ಪಟ್ಟಿವೆ. ಈ ಸಂಘಟನೆಗಳು ದಾಳಿ ನಡೆಸುವುದು, ಹಿಂದಿ ಸಿನೆಮಾ ಹಾಗೂ ಸಂಗೀತದ ಮೇಲೆ ನಿರ್ಬಂಧ ಸಹಿತ ಹಲವು ನೀತಿಸಂಹಿತೆಗಳನ್ನು ಹೇರುತ್ತಿರುತ್ತವೆ. ಸಾರ್ವಜನಿಕರ ಮೇಲೆ ತೆರಿಗೆಯನ್ನೂ ವಿಧಿಸುತ್ತವೆ. ರಾಜ್ಯದ ರಾಜಕೀಯ ಜೀವನದ ಮೇಲೂ ಉಗ್ರರ ಪ್ರಭಾವ ಇದೆ. ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳೂ ಬಂಡುಕೋರರ ಬೆಂಬಲದೊಂದಿಗೆ ಕಣಕ್ಕಿಳಿಯುವುದು, ಯಾರು ಗೆಲ್ಲಬೇಕು ಎಂದು ಜನರ ಮೇಲೆ ಈ ಸಂಘಟನೆಗಳೇ ಒತ್ತಡ ಹೇರುವುದು ಮುಂತಾದ ಘಟನೆಗಳು ಈಗಲೂ ನಡೆಯುತ್ತಿವೆ.

ಪಿಯುಎಲ್‌ಎಫ್ ಹುಟ್ಟು

ಇದೇ ಸಮಯದಲ್ಲಿ ಮೈತೇಯಿಗಳು ಮತ್ತು ಮೈತೇಯಿ ಪಂಗಾಲ್‌(ಮುಸ್ಲಿಮರು)ಗಳ ನಡುವೆ ಘರ್ಷಣೆಗಳು ಆರಂಭಗೊಂಡವು. ಇದರ ಪರಿಣಾಮವೆಂಬಂತೆ ಹುಟ್ಟಿದ್ದೇ ಪೀಪಲ್ಸ್‌ ಯುನೈಟೆಡ್‌ ಲಿಬರೇಶ‌ನ್‌ ಫ್ರಂಟ್‌ ಎಂಬ ಇಸ್ಲಾಮಿಕ್‌ ಬಂಡುಕೋರರ ಸಂಘಟನೆ. ಪ್ರಸ್ತುತ ಈ ಗುಂಪು ಮಣಿಪುರದಲ್ಲಿ ಸಕ್ರಿಯವಾಗಿಲ್ಲ.

ಪ್ರಮುಖ ಬಂಡುಕೋರ ಸಂಘಟನೆಗಳು

ಮಣಿಪುರದಲ್ಲಿ ಹುಟ್ಟಿಕೊಂಡ ಪ್ರಮುಖ ಪ್ರತ್ಯೇಕತಾವಾದಿ ಸಮೂಹಗಳೆಂದರೆ ಕುಕಿ ನ್ಯಾಶನಲ್‌ ಆರ್ಗನೈಸೇಶನ್‌, ಕುಕಿ ರೆವೊಲ್ಯೂಶನರಿ ಆರ್ಮಿ, ಝೋಮಿ ರೀ ಯುನಿಫಿಕೇಶ‌ನ್‌ ಆರ್ಗನೈಸೇಶ‌ನ್‌, ಝೋಮಿ ರೆವೊಲ್ಯೂಶ‌ನರಿ ಆರ್ಮಿ, ಕುಕಿ ನ್ಯಾಶ‌ನಲ್‌ ಫ್ರಂಟ್‌, ಕುಕಿ ನ್ಯಾಶ‌ನಲ್‌ ಲಿಬರೇಶ‌ನ್‌ ಫ್ರಂಟ್‌, ಯುನೈಟೆಡ್‌ ಕುಕಿ ಲಿಬರೇಶನ್‌ ಫ್ರಂಟ್‌ ಮತ್ತು ಕುಕಿ ನ್ಯಾಶನಲ್‌ ಆರ್ಮಿ. ಕಣಿವೆಯ ಬಂಡುಕೋರರ ಸಮೂಹಗಳಲ್ಲಿ ಯುಎನ್‌ಎಲ್‌ಎಫ್ ಅನ್ನು “ಮೈತೇಯಿ ಬಂಡುಕೋರರ ಗುಂಪುಗಳ ತಾಯಿ’ ಎಂದೇ ಕರೆಯಲಾಗುತ್ತದೆ. ಇದು ಇತ್ತೀಚಿನವರೆಗೂ ಅತ್ಯಂತ ಪ್ರಬಲ ಸಮೂಹವಾಗಿ ಉಳಿದಿತ್ತು. ಹಲವು ಬಾರಿ ಸುಧಾರಿತ ಸ್ಫೋಟಕಗಳನ್ನು ಸ್ಫೋಟಿಸಿ ಭದ್ರತಾ ಪಡೆಗಳ ವಿರುದ್ಧ ದಾಳಿಗಳನ್ನೂ ನಡೆಸಿತ್ತು. ಆದರೆ ಕ್ರಮೇಣ ಎಲ್ಲ ಗುಂಪುಗಳೂ ದುರ್ಬಲಗೊಳ್ಳುತ್ತಾ ಸಾಗಿದವು. ಯುಎನ್‌ಎಲ್‌ಎಫ್ ಈಗ ಒಳಜಗಳದಿಂದಾಗಿ ಮೂರು ಗುಂಪುಗಳಾಗಿ ಹೋಳಾಗಿದೆ.

ಮನೋಹರ ಪ್ರಸಾದ್‌

ಟಾಪ್ ನ್ಯೂಸ್

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.