ಮತ್ತೆ ಚೀನದ 47 ಆ್ಯಪ್ ನಿಷೇಧಿಸಿದ ಭಾರತ; ಒಟ್ಟು 250 ಆ್ಯಪ್ ನಿಷೇಧವಾಗಲಿದೆಯಾ?
ಸಚಿವಾಲಯ ಶೀಘ್ರದಲ್ಲಿಯೇ ನಿಷೇಧಿಸಲ್ಪಟ್ಟ ಚೀನಾ ಆ್ಯಪ್ಸ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ
Team Udayavani, Jul 27, 2020, 3:02 PM IST
ನವದೆಹಲಿ:ಲಡಾಖ್ ನ ಗಡಿವಿಚಾರದಲ್ಲಿ ಭಾರತದ ಜತೆ ಸಂಘರ್ಷಕ್ಕೆ ಇಳಿದಿದ್ದ ಚೀನಕ್ಕೆ ಭಾರತ ಚೀನದ 59 ಆ್ಯಪ್ ಗಳನ್ನು ಜೂನ್ ತಿಂಗಳಿನಲ್ಲಿ ನಿಷೇಧಿಸಿತ್ತು. ಇದೀಗ ಭಾರತ ಸರ್ಕಾರ ಮತ್ತೆ ಚೀನ ಮೂಲದ 47 ಆ್ಯಪ್ಸ್ ಗಳನ್ನು ನಿಷೇಧಿಸಿದೆ ಎಂದು ತಿಳಿಸಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಇನ್ ಫಾರ್ಮೇಶನ್ ಟೆಕ್ನಾಲಜಿ ಸಚಿವಾಲಯ ಶೀಘ್ರದಲ್ಲಿಯೇ ನಿಷೇಧಿಸಲ್ಪಟ್ಟ ಚೀನ ಆ್ಯಪ್ಸ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ವರದಿ ವಿವರಿಸಿದೆ. ಇದರಲ್ಲಿ ಟಿಕ್ ಟಾಕ್ ಲೈಟ್, ಹಲೋ ಲೈಟ್, ಶೇರ್ ಇಟ್ ಲೈಟ್, ಬಿಗೋ ಲೈವ್ ಲೈಟ್, ವಿಎಫ್ ವೈ ಲೈಟ್ ನಿಷೇಧದ ಪಟ್ಟಿಯಲ್ಲಿ ಸೇರಿರುವುದಾಗಿ ಎಎನ್ ಐ ವರದಿ ಮಾಡಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಜೂನ್ ತಿಂಗಳಲ್ಲಿ 59 ಚೀನ ಆ್ಯಪ್ ಗಳನ್ನು ನಿಷೇಧಿಸಿತ್ತು. ಇದೀಗ ರೂಪಾಂತರ(ಭಿನ್ನ ಹೆಸರಿನೊಂದಿಗೆ)ಗೊಂಡು ಚಾಲ್ತಿಗೆ ಬಂದಿರುವ 47 ಚೀನ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಅಷ್ಟೇ ಅಲ್ಲ ಭಾರತ ಸರ್ಕಾರ 250ಕ್ಕೂ ಅಧಿಕ ಚೀನ ಆ್ಯಪ್ಸ್ ಗಳ ಪಟ್ಟಿಯನ್ನು ಸಿದ್ದಪಡಿಸಿದೆ. ಇದರಲ್ಲಿ ಅಲಿಬಾಬಾ ಆ್ಯಪ್ಸ್ ಕೂಡಾ ಸೇರಿದೆ. ಸರ್ಕಾರ ಈ ಆ್ಯಪ್ಸ್ ಗಳ ಪರಿಶೀಲನೆ ನಡೆಸುತ್ತಿದೆ. ಯಾವುದೇ ಬಳಕೆದಾರನ ಖಾಸಗಿತನ ಅಥವಾ ರಾಷ್ಟ್ರೀಯ ಭದ್ರತೆಯ ಉಲ್ಲಂಘನೆಯಾಗಿದೆಯೇ ಎಂದು ಪರಿಶೀಲನೆ ನಡೆಸುತ್ತಿರುವುದಾಗಿ ಸರ್ಕಾರದ ಮೂಲಗಳು ತಿಳಿಸಿದೆ. ಇದರಲ್ಲಿ ಪಬ್ ಜಿ ಆ್ಯಪ್ ಕೂಡಾ ಸೇರಿದ ಎಂದು ಹೇಳಿದೆ.
ಚೀನದ ಪ್ರಮುಖ ಗೇಮ್ ಆ್ಯಪ್ಲಿಕೇಶನ್ ಗಳನ್ನೂ ಕೂಡಾ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಲಡಾಖ್ ನಲ್ಲಿ ನಡೆದ ಗಡಿ ಸಂಘರ್ಷದಲ್ಲಿ ಚೀನ ಸೈನಿಕರು ನಡೆಸಿದ ದಾಳಿಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಆ ಬಳಿಕ ಭಾರತ ಚೀನ ವಿರುದ್ಧ ಕಠಿನ ನಿರ್ಧಾರ ತಳೆದಿತ್ತು. ಮೊದಲ ಹಂತವಾಗಿ 59 ಚೀನ ಆ್ಯಪ್ಸ್ ಗಳನ್ನು ನಿಷೇಧಿಸಿತ್ತು. ಇದರಲ್ಲಿ ಹಲೋ, ಶೇರ್ ಕೂಡಾ ಸೇರಿದ್ದವು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಾಯು ಸೇನೆಯ ಹೊಸ ಶಕ್ತಿ ‘ರಫೇಲ್’ ಗೆ ಆಗಸದಲ್ಲೇ ಇಂಧನ ಭರ್ತಿ!
ಭಾರತದ ರಫೇಲ್ v/s ಚೀನದ J-11: ಯಾರದ್ದು ಸ್ಟ್ರಾಂಗ್ – ಇಲ್ಲಿದೆ ಡಿಟೇಲ್ಸ್
ಗಡಿ ವಿವಾದ: ಯಥಾಸ್ಥಿತಿಯಲ್ಲಿನ ಯಾವುದೇ ಬದಲಾವಣೆ ನಾವು ಒಪ್ಪಲ್ಲ: ಚೀನಾಕ್ಕೆ ಭಾರತ
ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ 2 ದಿನಗಳ ಲಡಾಕ್-ಕಾಶ್ಮೀರ ಪ್ರವಾಸ ಆರಂಭ, ಮಹತ್ವದ ಮಾತುಕತೆ !
ಪ್ಯಾಂಗಾಂಗ್ ನಿಂದ ಸೇನೆ ಹಿಂಪಡೆಯಲ್ಲ ಎಂದ ಚೀನಾ: ಗಡಿಯಲ್ಲಿ ಮತ್ತೆ ಭಾರತದ ಸೇನೆ ಜಮಾವಣೆ
MUST WATCH
KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani
Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??
ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ
ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು
ಹೊಸ ಸೇರ್ಪಡೆ
ದೇಹದ ಅಂಗಾಂಗಗಳಿಗೆ ಶಕ್ತಿ ತುಂಬುವ ವೀರಭದ್ರಾಸನ
ಮಹಾರಾಷ್ಟ್ರದಲ್ಲಿರುವ ಸಾಂಗ್ಲಿ, ಸೊಲ್ಲಾಪುರವನ್ನು ರಾಜ್ಯಕ್ಕೆ ಸೇರಿಸುತ್ತೇವೆ: ಬೊಮ್ಮಾಯಿ
ಗ್ರಾ.ಪಂ ಅಧ್ಯಕ್ಷ- ಉಪಾಧ್ಯಕ್ಷ ಮೀಸಲಾತಿ ಆಯ್ಕೆ: ಬ್ರಹ್ಮಾವರ ತಾಲೂಕಿನ ವಿವರ
ಹುತಾತ್ಮ ದಿನಾಚರಣೆಗೆ ಆಗಮಿಸುತ್ತಿದ್ದ ಮಹಾರಾಷ್ಟ್ರ ಸಚಿವನ ವಾಪಸ್ ಕಳಿಸಿದ ಪೊಲೀಸರು
ಜ.26ರ ರೈತರ ಟ್ರ್ಯಾಕ್ಟರ್ Rally ಅನುಮತಿ ಬಗ್ಗೆ ದೆಹಲಿ ಪೊಲೀಸರು ನಿರ್ಧರಿಸಲಿ: ಸುಪ್ರೀಂ