ಐದು ವರ್ಷಗಳಿಂದ ಪ್ರೀತಿಸಿ ಮದುವೆಗೆ ಒಲ್ಲೆ ಎಂದ ಯುವಕನಿಗೆ ಠಾಣೆ ಮುಂದೆಯೇ ಥಳಿಸಿದ ಯುವತಿ
Team Udayavani, Sep 19, 2021, 6:38 PM IST
ಕಲಬುರಗಿ: ಕಳೆದ ಐದಾರು ವರ್ಷಗಳಿಂದ ಪರಸ್ಪರ ಪ್ರೀತಿಸಿ, ಈಗ ಮದುವೆಯಾಗಲು ಯುವಕ ಹಿಂದೇಟು ಹಾಕುತ್ತಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ಆತನಿಗೆ ಪೊಲೀಸ್ ಠಾಣೆಯ ಮುಂದೆಯೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರದಲ್ಲಿ ರವಿವಾರ ನಡೆದಿದೆ.
ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ನಿವಾಸಿ ಇರ್ಫಾನ್ ಶೇಖ್ ಎಂಬಾತನೇ ಥಳಿತಕ್ಕೊಳಾಗದ ಯುವಕ. ಬೆಂಗಳೂರು ಮೂಲದ ರಹೀನಾ ಎಂಬಾಕೆ ಯುವಕನಿಗೆ ಹಲ್ಲೆಗೈದ ಯುವತಿ.
ಬೆಂಗಳೂರಿನಲ್ಲಿ ಪರಿಚಯವಾಗಿದ್ದ ಇರ್ಫಾನ್ ಪ್ರೀತಿಸಿ ನನಗೆ ಮೋಸ ಮಾಡಿದ್ದೇನೆ. ಮದುವೆಯಾಗಲು ನಿರಾಕರಿಸುತ್ತಿದ್ದಾನೆ. ಅಲ್ಲದೇ, ಇಲ್ಲದ ಕಥೆ ಕಟ್ಟುತ್ತಿದ್ದಾನೆ ಎಂದು ಆಕ್ರೋಶಗೊಂಡ ಯುವತಿ ಮನಬಂದಂತೆ ಥಳಿಸಿದ್ದಾಳೆ. ಪ್ರಿಯಕನಿಗೆ ಕಪಾಳಕ್ಕೆ ಬಾರಿಸುತ್ತಾ, ಕಾಲಿನಿಂದ ಒದ್ದು ತನ್ನ ಸಿಟ್ಟು ಹೊರಹಾಕಿದ್ದಾಳೆ.
ಏನಿದರ ಹಿನ್ನೆಲೆ?: ಬೆಂಗಳೂರಿನಲ್ಲಿ ಶೋರೂಮ್ ವೊಂದರಲ್ಲಿ ಕೆಲಸ ಮಾಡಿಕೊಂಡಿರುವ ರಹೀನಾ ಮತ್ತು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಇರ್ಫಾನ್ ನಡುವೆ ಸ್ನೇಹಿತನ ಮೂಲಕ ಪರಿಚಯವಾಗಿತ್ತು. ನಂತರ ಇರ್ಫಾನ್ ಮತ್ತು ರಹೀನಾ ಇಬ್ಬರ ನಡುವೆ ಸಲುಗೆ ಬೆಳೆದು ಅದು ಪ್ರೀತಿಗೆ ತಿರುಗಿತ್ತು. ಅಲ್ಲಿ, ಇಲ್ಲಿ ಅಂತ ಸುತ್ತಾಟ ಕೂಡ ನಡೆದಿತ್ತು. ಅಲ್ಲದೇ, ಮದುವೆಗೆ ಆಗುವುದಾಗಿ ಹೇಳಿ ರಹೀನಾ ಜತೆ ಇರ್ಫಾನ್ ದೈಹಿಕ ಸಂಬಂಧ ಸಹ ಬೆಳೆಸಿದ್ದ ಎನ್ನಲಾಗಿದೆ.
ಇದನ್ನೂ ಓದಿ :ಪರ್ಕಳ ರಾ.ಹೆ.169 ರಸ್ತೆ ಅವ್ಯವಸ್ಥೆ : ಭೂ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ನೀಡಲು ಆಗ್ರಹ
ಇದರಿಂದ ಆಕೆ ಮೂರು ತಿಂಗಳ ಗರ್ಭಿಣಿಯಾದ ವಿಷಯವನ್ನು ಪ್ರಿಯಕನಿಗೆ ತಿಳಿಸಿದ್ದಳು. ಆದರೆ. ಇರ್ಫಾನ್ ಗರ್ಭಪಾತ ಮಾಡಿಸಿದ ಬಳಿಕ ಮದುವೆಯಾಗುವ ಯೋಚನೆ ಮಾಡೋಣ ಎಂದು ಹೇಳಿದ್ದ. ಆದರೆ, ಈ ನಡುವೆ ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕಲಬುರಗಿಗೆ ಇರ್ಫಾನ್ ಬಂದು ಇಲ್ಲೇ ಉಳಿದಿದ್ದಾನೆ ಎಂಬುವುದು ಯುವತಿಯ ಆರೋಪ.
ಇಷ್ಟೇ ಅಲ್ಲ, ಕಲಬುರಗಿಗೆ ಬಂದ ಸೇರಿದ ಬಳಿಕ ಲಾಕ್ ಡೌನ್ ಮುಗಿದ ಬಳಿಕ ಮದುವೆಯಾಗುವುದಾಗಿ ಹೇಳಿದ್ದ. ಆದರೆ, ಈಗ ಬೇರೆಯರವನ್ನು ಮದುವೆಯಾಗು, ನನ್ನ ತಂದೆ-ತಾಯಿ ನನಗೆ ಬೇರೆ ಹುಡುಗಿಯನ್ನು ನೋಡುತ್ತಿದ್ದಾರೆ ಎಂದು ಹೇಳಿದ್ದನಂತೆ. ಹೀಗಾಗಿ ಈ ಹಿಂದೆಯೇ ಒಮ್ಮೆ ಪ್ರಿಯಕರನನ್ನು ಹುಡುಕಿಕೊಂಡು ಆಕೆ ಬಂದಿದ್ದಳು. ಆಗ ಇರ್ಫಾನ್ ಕುಟುಂಬದವರು ಸೇರಿಕೊಂಡು
ಸಬ್ ರಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಗೆಂದು ಅರ್ಜಿ ಮೇಲೆ ಸಹಿ ಮಾಡಿಸಿಕೊಂಡರು. ಆದರೆ, ಬಳಿಕ ಮತ್ತೆ ಇರ್ಫಾನ್ ಮದುವೆ ಆಗುವುದಿಲ್ಲ ಎಂದು ನಿರಾಕರಿಸುತ್ತಿದ್ದಾನೆ ಎಂದು ಅಕೆ ದೂರಿದ್ದಾಳೆ.
ಇತ್ತ ನಾನು ರಹೀನಾಳನ್ನು ಪ್ರೀತಿಸುತ್ತಿರಲಿಲ್ಲ. ಕೇವಲ ಸ್ನೇಹಿತರಾಗಿದ್ದೇವು ಎಂದು ಇರ್ಫಾನ್ ಹೇಳಿದ್ದಾನೆ. ಅಲ್ಲದೇ, ನನ್ನ ಸ್ನೇಹಿತನಾಗಿರುವ ಅಜರ್ ಎಂಬಾತ ಆಕೆಯನ್ನು ಪ್ರೀತಿಸುತ್ತಿದ್ದ. ನಾನು ಯಾವುದೇ ಹೊಂದಿಲ್ಲ. ಈಕೆ ಕೆಲ ಫೋಟೋಗಳನ್ನೇ ಹಿಡಿದುಕೊಂಡು ನನಗೆ ಮದುವೆಯಾಗುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಇರ್ಫಾನ್ ಆರೋಪಿಸಿದ್ದಾನೆ.
ಇನ್ನು, ಪೊಲೀಸ್ ಠಾಣೆ ಮುಂದೆ ಗಲಾಟೆ ನಂತರ ಅಲ್ಲಿನ ಪೊಲೀಸರು, ಇದು ಮಹಿಳಾ ಠಾಣೆಗೆ ಸಂಬಂಧಪಟ್ಟ ವಿಷಯ. ಹೀಗಾಗಿ ಅಲ್ಲಿಗೆ ಹೋಗಿ ಎಂದು ತಿಳಿಸಿದ್ದರು. ಆದರೆ, ಯುವತಿಯಾಗಲಿ, ಯುವಕನಾಗಲಿ ಎಲ್ಲಿಯೂ ಯಾವುದೇ ದೂರು ನೀಡಿಲ್ಲ ಎಂದು ಪೊಲೀಸ್ ಅಧಿಕಾರಿಗಳ ಮಾಹಿತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್