ಕೈಕಂಬ : 4ನೇ ಮಹಡಿಯಲ್ಲಿ ಟೆರೇಸ್ ಕೃಷಿ ಮಾಡಿದ ಕಟ್ಟಡ ಮಾಲಕ
Team Udayavani, Mar 3, 2021, 5:40 AM IST
ಬಂಟ್ವಾಳ: ಕೃಷಿ ಮಾಡ ಬೇಕಾದರೆ ಸ್ಥಾಕಷ್ಟು ಸ್ಥಳ ಬೇಕು, ನಗರ ಪ್ರದೇಶದಲ್ಲಿ ಇದು ಅಸಾಧ್ಯವೆಂಬುದು ಸಾಕಷ್ಟು ಮಂದಿಯ ಅಭಿಪ್ರಾಯ. ಆದರೆ ಬಿ.ಸಿ.ರೋಡ್ನ ಕೈಕಂಬದಲ್ಲಿ ವಾಣಿಜ್ಯ ಸಂಕೀರ್ಣವೊಂದರ ಮಾಲಕ 4ನೇ ಮಹಡಿಯ ಮೇಲಿನ ಖಾಲಿ ಸ್ಥಳದಲ್ಲಿ ಹತ್ತಾರು ಬಗೆಯ ತರಕಾರಿ, ಹೂವು, ಹಣ್ಣಿನ ಗಿಡಗಳನ್ನು ನೆಟ್ಟು ಯಶಸ್ವಿಯಾಗಿದ್ದಾರೆ.
ಕೈಕಂಬ ಜಂಕ್ಷನ್ನಲ್ಲಿರುವ ಸೂರ್ಯವಂಶ ವಾಣಿಜ್ಯ ಸಂಕೀರ್ಣದ ಮಾಲಕ ಡಾ| ಗೋವರ್ಧನ್ ರಾವ್ ಅವರೇ ಟೆರೇಸ್ ಕೃಷಿ ಮಾಡಿರುವ ಕೃಷಿಕ. ಇವರ ಟೆರೇಸ್ ಮೇಲಿರುವಷ್ಟು ಗಿಡಗಳು ಎಕರೆಗಟ್ಟಲೇ ಸ್ಥಳವಿರುವ ಕೃಷಿಕರ ಬಳಿಯೂ ಇರಲಾರದು! 4ನೇ ಮಹಡಿಗೆ ಮಣ್ಣು, ಗೊಬ್ಬರವನ್ನು ಹೊತ್ತುಕೊಂಡು ಹೋಗಿಯೇ ಕೃಷಿ ಮಾಡಿರುವುದು ಇವರ ಹೆಗ್ಗಳಿಕೆ.
ಡಾ| ಗೋವರ್ಧನ್ ರಾವ್ ಸೌದಿ ಅರೇಬಿಯಾದ ಸಂಸ್ಥೆಯೊಂದರಲ್ಲಿ ಪ್ರಾಧ್ಯಾಪಕರಾಗಿದ್ದು, 2019ರಲ್ಲಿ ನಿವೃತ್ತಿ ಹೊಂದಿ ಮನೆಗೆ ಆಗಮಿಸಿದ್ದರು. ಕೈಕಂಬದ ವಾಣಿಜ್ಯ ಸಂಕೀರ್ಣದ ಹಿಂಭಾಗದಲ್ಲೇ ಅವರ ಮನೆಯಿದ್ದು, ಪ್ರಾರಂಭದಲ್ಲಿ ಮನೆಯ ಮಹಡಿಯಲ್ಲಿ ಕೃಷಿ ಮಾಡಲು ಆರಂಭಿಸಿದ್ದರು. ಬಳಿಕ ಸಮಯ ಕಳೆಯುವುದಕ್ಕಾಗಿ ವಾಣಿಜ್ಯ ಸಂಕೀರ್ಣದ ಮಹಡಿಯಲ್ಲಿ ಕೃಷಿಯನ್ನು ಆರಂಭಿಸಿದರು.
4 ಸಾವಿರ ಚ.ಅಡಿ ವಿಸ್ತೀರ್ಣ
ವಾಣಿಜ್ಯ ಸಂಕೀರ್ಣದ 4ನೇ ಮಹಡಿಯಲ್ಲಿ ಸುಮಾರು 4 ಸಾವಿರ ಚದರ ಅಡಿ ವಿಸೀರ್ಣದಲ್ಲಿ ಇವರ ಕೃಷಿ ವಿಸ್ತರಿಸಿಕೊಂಡಿದೆ.
ವಿವಿಧ ಬಗೆಯ ತರಕಾರಿ, ಹೂಗಳು
ಟೊಮ್ಯಾಟೊ, ಹಿರೇಕಾಯಿ, ಸೋರೆ ಕಾಯಿ, ಅಲಸಂಡೆ, ಅರಿವೆ, ಬಸಳೆ, ಮೆಣಸು, ಗೆಣಸು, ಬದನೆ, ಈರುಳ್ಳಿ ಮೊದಲಾದ ತರಕಾರಿ ಗಿಡಗಳಿವೆ. ಚೆಂಡು ಹೂವು, ಗುಲಾಬಿ ಸೇರಿದಂತೆ ಹತ್ತಾರು ಬಗೆಯ ಹೂವಿನ ಗಿಡಗಳನ್ನು ನೆಟ್ಟಿದ್ದಾರೆ. ಚಿಕ್ಕು, ಸೀತಾಫಲ, ನೆಲ್ಲಿಕಾಯಿ, ಲಿಂಬೆ, ಜಂಬುನೇರಳೆ, ಪೇರಳೆ, ಬುಗರಿ ಹಣ್ಣು ಹೀಗೆ ಹತ್ತಾರು ಬಗೆಯ ಹಣ್ಣಿನ ಗಿಡಗಳು ಕೂಡ ಇವರ ಬಳಿ ಇದ್ದು, ಈಗಾಗಲೇ ಫಸಲು ಬಿಡುತ್ತಿವೆ.
ಸಾವಯವ ಗೊಬ್ಬರ
ಮಣ್ಣು, ಕೊಳೆತ ತರಕಾರಿ, ಬೆಲ್ಲ, ಸೆಗಣಿ ಮೊದಲಾದ ವಸ್ತುಗಳಿಂದ ಸಾವಯವ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕುತ್ತಿದ್ದಾರೆ. ಉಳಿದಂತೆ ಪ್ರತಿನಿತ್ಯ ಗಿಡಗಳಿಗೆ ನೀರು ಹಾಕುವ ಕಾರ್ಯ ನಿರ್ವಹಿಸುತ್ತಾರೆ. ಪ್ರಾರಂಭದಲ್ಲಿ ಮಣ್ಣು, ಗೊಬ್ಬರವನ್ನು ತಾವೇ ಹೊತ್ತುಕೊಂಡು 86 ಮೆಟ್ಟಿಲು ಹತ್ತಿ ಕೊಂಡು ಹೋಗುತ್ತಿದ್ದು, ಪ್ರಸ್ತುತ ಅದಕ್ಕೆ ರಾಟೆಯ ವ್ಯವಸ್ಥೆ ಮಾಡಿದ್ದಾರೆ. ಗಿಡಗಳಿಗೆ ಬಿಸಿಲು ಬೀಳದಂತೆ ರಕ್ಷಿಸಲು ಹಸಿರು ನೆಟ್ನ ವ್ಯವಸ್ಥೆ ಕೂಡ ಮಾಡಿದ್ದಾರೆ.
– ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ