“ಜಗತ್ತು ಭಾರತದಿಂದ ಪರಿಹಾರ ಬಯಸುತ್ತಿದೆ”: ಮೋಹನ್ ಭಾಗವತ್
Team Udayavani, Jul 7, 2023, 7:01 AM IST
ಪುಣೆ: ಇಡೀ ಜಗತ್ತೇ ಈಗ ಪರಿಹಾರ ಕಾಣದ ಹಲವು ಸವಾಲುಗಳಿಗೆ ಭಾರತದಿಂದ ಉತ್ತರ ಹುಡುಕುತ್ತಿದೆ. ಭಾರತಕ್ಕೆ ಈಗ ಬೌದ್ಧಿಕ ಕ್ಷತ್ರಿಯರು ಬೇಕಾಗಿದ್ದಾರೆ ಆದರೆ ಜಗತ್ತಿಗೆ ಬೆಳಕು ನೀಡಲು ಭಾರತ ಸಿದ್ಧವಾಗಿದೆಯಾ? ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಪ್ರಶ್ನಿಸಿದ್ದಾರೆ.
ಸಂತ ರಾಮದಾಸರು ಬರೆದಿರುವ ಮೂಲ ವಾಲ್ಮೀಕಿ ರಾಮಾಯಣದ 8 ಸಂಪುಟಗಳ ಬಿಡುಗಡೆ ವೇಳೆ ಅವರು ಈ ಮಾತುಗಳನ್ನಾಡಿದ್ದಾರೆ. ಸಮಾಜಕ್ಕೆ ಸರಿಯಾದ ದಾರಿ ತೋರಲು ಒಬ್ಬ ಯೋಗ್ಯ ರಾಜನನ್ನು ಮುಂದಿಡಬೇಕಾಗುತ್ತದೆ. ಸಮರ್ಥ ರಾಮದಾಸರಿಗೆ ಶ್ರೀರಾಮನ ಬಳಿಕ ಶಿವಾಜಿಯೇ ಅಂತಹ ಯೋಗ್ಯ ರಾಜ ಎನಿಸಿತ್ತು. ರಾಮದಾಸರ ಕಾಲದಲ್ಲಿ ದೇಶದ ಮೇಲೆ ವಿಪರೀತ ಆಕ್ರಮಣಗಳು ನಡೆಯುತ್ತಿದ್ದವು. ಶಿವಾಜಿ ಅದನ್ನೆಲ್ಲ ಎದುರಿಸಿ ನಿಂತರು. ಸವಾಲುಗಳ ವಿರುದ್ಧ ತೋಳ್ಬಲದ ಮೂಲಕ ಹೋರಾಡುವುದೊಂದೇ ಹೋರಾಟವಲ್ಲ, ಕ್ರಿಯಾಶೀಲರಾಗುವುದು, ಜ್ಞಾನ ಮೂಡಿಸುವುದು, ಸಂಶೋಧನೆ, ಆಚರಣೆಗಳೂ ಒಂದು ಹೋರಾಟ ಎಂದು ಭಾಗವತ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!