ಕರಾವಳಿ ತೀರದಲ್ಲಿ ಗಾಂಜಾ ದಂಧೆ: ಕ್ರಮಕ್ಕೆ ಬಿಜೆಪಿ ಆಗ್ರಹ
Team Udayavani, May 30, 2019, 6:10 AM IST
ಕುಂಬಳೆ: ಕುಂಬಳೆ ಕೊಯಿಪ್ಪಾಡಿ ಕರಾವಳಿ ತೀರಪ್ರದೇಶದಲ್ಲಿ ವ್ಯಾಪಕ ಗಾಂಜಾ ಮುಂತಾದ ಮಾದಕ ವಸ್ತುಗಳ ಮಾರಾಟ ದಂಧೆ ನಡೆಯುತ್ತಿದೆ ಈ ಅಕ್ರಮ ಮಾರಾಟ ದಂಧೆಯನ್ನು ತಡೆಯಬೇಕೆಂಬುದಾಗಿ ಬಿಜೆಪಿ ಪಂಚಾಯತ್ ಸಮಿತಿ ಒತ್ತಾಯಿಸಿದೆ.
ವಿದ್ಯಾರ್ಥಿಗಳಿಗೆ ಮತ್ತು ಬೆಸ್ತರಿಗೆ ಗುಪ್ತವಾಗಿ ಇದನ್ನು ಮಾರಾಟ ಮಾಡಲಾಗುವುದು.ಇದರಿಂದ ಹಲವು ಕುಟುಂಬಗಳು ಅನಾಥವಾಗಿದೆ.ತಂದೆ ತಾಯಂದಿರ ಮಾತನ್ನು ಕೆಳದೆ ಮಕ್ಕಳು ದುಶ್ಚಟಕ್ಕೆ ಬಲಿಯಾಗಬೇಕಾಗಿದೆ.
ಶಾಲೆಗೆ ಚಕ್ಕರ್ ಹೊಡೆಯುವಂತಾಗಿದೆ.ಇದನ್ನು ತಡೆಯಲು ಸಂಭಂದಪಟ್ಟ ಅಧಿಕಾರಿಗಳು ಮುಂದಾಗುತ್ತಿಲ್ಲವೆಂಬ ಆರೋಪ ಬಲವಾಗಿದೆ.ಈ ನಿಟ್ಟಿನಲ್ಲಿ ಸಂಮಂದಪಟ್ಟವರು ದಂದೆಯ ವಿರುದ್ಧ ಕ್ಮಕೆಗೊಳ್ಳಬೇಕು ಎಂದು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಆಗ್ರಹಿದೆ. ಎಂ.ಶಂಕರ ಆಳ Ìಅಧ್ಯಕ್ಷತೆ ವಹಿಸಿದ ಸಭೆಯಲ್ಲಿ ಪಕ್ಷದ ನಾಯಕರಾದ ಕೆ.ವಿನೋದನ್, ಎಚ್.ಸತ್ಯಶಂಕರ ಭಟ್,ಕೆ.ರಮೇಶ್ ಭಟ್,ಸುಜಿತ್ ರೈ ಮುಂತಾದವರು ಭಾಗವಹಿಸಿ ಮಾತನಾಡಿದರು.ಕೆ.ಸುಧಾಕರ ಕಾಮತ್ ಸ್ವಾಗತಿಸಿದರು. ಮೋಹನ್ ಬಂಬ್ರಾಣ ವಂದಿಸಿದರು.