ಬನ್ನಿ… ಕೊಳವೆ ಬಾವಿಗೆ ನೀರಿಂಗಿಸೋಣ, ಜಲ ಸಂರಕ್ಷಿಸೋಣ


Team Udayavani, Jun 19, 2019, 5:09 AM IST

male-koilu

ಕಾಸರಗೋಡು: ಈ ವರ್ಷದ ಬೇಸಗೆಯಲ್ಲೇ ಜೀವ ಸಂಕುಲಕ್ಕೆ ನೀರಿನ ಆವಶ್ಯಕತೆ ಎಷ್ಟಿದೆ ಎಂಬ ಬಗ್ಗೆ ನಿಖರವಾದ ಅನುಭವವಾಯಿತು. ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದರೂ ಬರಡಾದ ಯಾವುದೇ ಬಾವಿಗಳೂ ತುಂಬಿಕೊಳ್ಳಲಿಲ್ಲ. ಯಾವುದೇ ತೋಡುಗಳಲ್ಲೂ ನೀರು ಹರಿಯಲಿಲ್ಲ.

ಗುಡ್ಡದಿಂದ ಹರಿದು ಬಂದ ಮಳೆ ನೀರು, ಮಳೆ ಕಡಿಮೆಯಾದಾಗ ಭೂಮಿಯಲ್ಲಿ ಇಂಗಿ ಹೋಯಿತು. ಇದರಿಂದ ಒರತೆ ಹಿಗ್ಗಲಿಲ್ಲ. ಕಾದ ಕಾವಲಿಗೆ ಹಾಕಿದ ಬಿಂದು ನೀರಿನಂತೆ ಬಸಿದು ಹೋಯಿತು. ಈ ವರ್ಷದ ಬೇಸಗೆಯಲ್ಲಿ ಭೂಮಿ ಅಷ್ಟು ಕಠಿನವಾಗಿ ಹೋಗಿತ್ತು. ಅರಳುವ ಹುಲ್ಲು ಕೂಡ ಕರಟುವಷ್ಟು ಕಠಿನವಾದ ಬೇಸಗೆ ನೀರಿನ ಚಿಲುಮೆಗಳನ್ನು ಹೊಸಕಿ ಹಾಕಿತ್ತು. ಇದರ ಪರಿಣಾಮವಾಗಿ ಬರಗಾಲ ತಾಂಡವವಾಡಿತ್ತು.

ಭೂಮಿಯಲ್ಲಿ ಅಂತರ್ಜಲ ಮಟ್ಟ ಬಹಳಷ್ಟು ಕುಸಿದಿದೆ ಎಂಬ ವಾದಕ್ಕೆ ಒಂದೆರಡು ಇಂಚು ನೀರು ನೀಡಿದ ಕೊಳವೆ ಬಾವಿಗಳು ಬರಿದಾಗಿ ಸಾಕ್ಷಿಯಾಗಿವೆ. ಅತಿಯಾದ ಕೊಳವೆ ಬಾವಿ ನಿರ್ಮಾಣದಿಂದ ಭೂಮಿಯ ಆಂತರಿಕ ಪದರಗಳು ಸಡಿಲಗೊಳ್ಳುವ ಆತಂಕವಿದೆ. ಜಲಮೂಲಗಳು ಅತ್ಯಂತ ಅಡಿಯಲ್ಲಿ ಇರುವುದರಿಂದ ನೀರಿನ ಆವಶ್ಯಕತೆಗಾಗಿ ಕೊಳವೆ ಬಾವಿ ಅನಿವಾರ್ಯ. ಇದನ್ನು ಕೊರೆಯುವ ಜತೆಗೆ ಮಳೆಗಾಲದಲ್ಲಿ ಕೊಳವೆ ಬಾವಿಗಳಿಗೆ ಜಲ ಮರುಪೂರಣದ ಮೂಲಕ ನೀರನ್ನು ತುಂಬಿಸುವ ಕೆಲಸವೂ ನಡೆಯಬೇಕು. ಈ ಒತ್ತಾಯ ಕಾನೂನು ರೂಪ ಪಡೆದು ಕಡ್ಡಾಯವಾಗಬೇಕು.

ಕೊಳವೆ ಬಾವಿಗಳು ನೀರಿನ ಟ್ಯಾಂಕ್‌ ಇದ್ದಂತೆ. ಅದಕ್ಕೆ ತುಂಬಿಸುವ ಕೆಲಸ ಮಾಡದೆ ಇದ್ದರೆ ಅದು ಖಾಲಿಯಾಗುವುದು ಖಂಡಿತ. ಆದ್ದರಿಂದ ಕೊಳವೆ ಬಾವಿಗಳಿಗೆ ನೀರಿನ ಮರುಪೂರಣ ಕೆಲಸ ಮಳೆಗಾಲದಲ್ಲಿ ನಡೆಯಲೇಬೇಕು.

ಅದಕ್ಕೆ ಸರಕಾರ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು ನೂತನ ಕಾನೂನು ಸಿದ್ಧಪಡಿಸಿ ಅನುಷ್ಠಾನಗೊಳಿಸಬೇಕು.

ಕಡ್ಡಾಯ ಕಾನೂನು
ಸಾಮಾನ್ಯವಾಗಿ ಕೊಳವೆ ಬಾವಿಗಳನ್ನು ಕೊರೆಯಲು ಭೂಗರ್ಭ ಇಲಾಖೆಯ ಅನುಮತಿ ಬೇಕು. ಇಲಾಖೆಯ ಅ ಧಿಕಾರಿಗಳು ಕೊಳವೆ ಬಾವಿ ಕೊರೆಯುವ ಪ್ರದೇಶಕ್ಕೆ ಆಗಮಿಸಿ, ಪರಿಶೀಲಿಸಿ ಅನುಮತಿ ನೀಡುತ್ತಾರೆ. ಇದೀಗ ಪ್ರಾದೇಶಿಕ ಗ್ರಾಮ ಪಂಚಾಯತ್‌ನಿಂದಲೂ ಅನುಮತಿ ಪಡೆಯಬೇಕು. ಮುಂದಿನ ದಿನಗಳಲ್ಲಿ ಭೂಮಿಯಲ್ಲಿ ಜಲ ಸಂರಕ್ಷಣೆ ಮಾಡುವ ಹಿನ್ನೆಲೆಯಲ್ಲಿ ಕೆಲವೊಂದು ಕಡ್ಡಾಯ ಕಾನೂನುಗಳನ್ನು ರೂಪಿಸಬೇಕಿದೆ. ಕೊರೆದ ಕೊಳವೆ ಬಾವಿಗಳಿಗೆ ಮಳೆಗಾಲದಲ್ಲಿ ಮಳೆ ನೀರನ್ನು ತುಂಬಿಸುವ ಜಲ ಮರುಪೂರಣ ವಿಧಾನವನ್ನು ಕಡ್ಡಾಯವಾಗಿ ಮಾಡಬೇಕು. ಭೂಗರ್ಭ ಇಲಾಖೆ, ಗ್ರಾಮ ಪಂಚಾಯತ್‌ಗಳು ಈ ಬಗ್ಗೆ ಖುದ್ದಾಗಿ ಕೊಳವೆ ಬಾವಿ ಕೊರೆದ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಬೇಕು. ಜಲ ಮರುಪೂರಣ ವಿಧಾನಗನ್ನು ಕೊಳವೆ ಬಾವಿಗಳಿಗೆ ಅಳವಡಿಸಿಕೊಂಡರೆ ಮಾತ್ರ ವಿದ್ಯುತ್‌ ಇಲಾಖೆಗಳು ಈ ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ನೀಡಬೇಕು. ಜಲ ಮರುಪೂರಣ ವಿಧಾನವನ್ನು ಅಳವಡಿಸದ ಕೊಳವೆ ಬಾವಿಗಳನ್ನು ಪ್ರಾದೇಶಿಕ ಗ್ರಾಮ ಪಂಚಾಯತ್‌ಗಳು ನಿರ್ದಾಕ್ಷಿಣ್ಯವಾಗಿ ನಿರ್ಬಂ ಧಿಸಬೇಕು. ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಕೊರೆದ ಕೊಳವೆ ಬಾವಿಗಳಿಗೆ ಮಳೆ ನೀರು ಸಂಗ್ರಹ ನಡೆಸುವ ಕುರಿತು ಸಾರ್ವತ್ರಿಕ ಜಾಗೃತಿಯನ್ನು ಕೂಡ ಈ ಆಡಳಿತ ಸಂಸ್ಥೆಗಳು ಮಾಡಬೇಕು.

ನೀರಿಂಗಿಸುವ ಪ್ರಯತ್ನ
ಮಳೆಗಾಲದಲ್ಲಿ ಮರುಪೂರಣ ನಡೆಸುವ ಬಗ್ಗೆ ಆಡಳಿತ ವಿಭಾಗವು ಕಾನೂನು ರೂಪಿಸಬೇಕು. ಮಳೆಗಾಲದ ನೀರು ತೋಡಿನ ಮೂಲಕ ಹರಿದು ಹೋಗದೆ ಅವುಗಳನ್ನು ತನ್ನ ಬಾವಿ ಹಾಗೂ ಕೆರೆಗಳಲ್ಲಿ ಸೋಸಿ ಶೇಖರಿಸಿ ಇಂಗಿಸುವ ಪ್ರಯತ್ನ ಮಾಡಬೇಕು. ತನ್ನ ಜಮೀನಿನಲ್ಲಿ ಸಾಧ್ಯವಾದಷ್ಟು ಇಂಗುಗುಂಡಿಗಳನ್ನು ನಿರ್ಮಿಸಬೇಕು ಎಂಬ ಕ್ರಿಯಾತ್ಮಕ ಕಾನೂನನ್ನು ರೂಪಿಸಿ ಕಡ್ಡಾಯ ಗೊಳಿಸಬೇಕು ಎಂಬುವುದು ಸಾರ್ವತ್ರಿಕ ಅಭಿಮತ. ಇದೀಗ ಅನೇಕ ಪ್ರದೇಶಗಳಲ್ಲಿ ಕೊರೆದ ಶೇ. 90ರಷ್ಟು ಕೊಳವೆ ಬಾವಿಗಳಿಗೆ ಜಲ ಮರುಪೂರಣ ಕಾರ್ಯ ನಡೆಯುತ್ತಿಲ್ಲ. ಆದ್ದರಿಂದ ಅನೇಕ ಕೊಳವೆ ಬಾವಿಗಳು ಕೆಲವೇ ವರ್ಷದಲ್ಲಿ ಬರಿದಾಗುತ್ತವೆ. ಪ್ರಾದೇಶಿಕವಾದ ಯುವ ಸಂಘಟನೆಗಳು ಯೋಗ್ಯ ಜಲತಜ್ಞರನ್ನು ಕರೆಸಿ ಸಾರ್ವಜನಿಕರಿಗೆ ಜಲ ಮರುಪೂರಣ ವಿಧಾನಗಳು ಹಾಗೂ ಅದರ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು.

ಜಲ ಸಂರಕ್ಷಣೆಯ ಹಿನ್ನೆಲೆಯಲ್ಲಿ ಇಂಗುಗುಂಡಿಗಳು ಬಹಳಷ್ಟು ಭರವಸೆ ಮೂಡಿಸಿದ್ದರೂ ಫಲಪ್ರದವಾಗಿ ಅನುಷ್ಠಾನಗೊಂಡಿಲ್ಲ. ಗುಡ್ಡ ಪ್ರದೇಶಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಡಳಿತ ಸಮಿತಿಗಳು ಕಾನೂನುಬದ್ಧ ಯೋಜನೆಯನ್ನು ರೂಪಿಸಬೇಕಿದೆ. ಒಟ್ಟಿನಲ್ಲಿ ಕೊಳವೆ ಬಾವಿ ಹಾಗೂ ಇಂಗುಗುಂಡಿಗಳ ಮೂಲಕ ಮಳೆಗಾಲದ ನೀರನ್ನು ಹಿಡಿದಿಡುವ ಪ್ರಯತ್ನ ನಡೆಯಬೇಕು.

ಶಾಶ್ವತ ಪರಿಹಾರ : ಜಲ ಮರುಪೂರಣದ ವ್ಯವಸ್ಥೆಗೆ ದುಬಾರಿ ಇಲ್ಲ. ಪ್ರತೀ ವರ್ಷವೂ ಸಾಕಷ್ಟು ಮಳೆ ಬೀಳುವ ಕರಾವಳಿ ಪ್ರದೇಶದಲ್ಲಿ ಜಲ ಮರುಪೂರಣಕ್ಕೆ ಸಾಕಷ್ಟು ಪೂರಕ ವ್ಯವಸ್ಥೆ ಇದೆ. ಆದರೆ ನೀರನ್ನು ಹಿಡಿದಿಡುವ ಬಗೆಗಿನ ಜನತೆಯ ಔದಾಸಿನ್ಯ ಮಾತ್ರ ಮಿತಿ ಮೀರಿದೆ. ಮಳೆ ದೂರವಾದಾಗ ಹಾಹಾಕಾರ ಮಾಡುವ ಬದಲು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸ್ವತ: ಕಂಡುಕೊಳ್ಳಲು ಸಾಧ್ಯವಿದೆ.

ಒಂದು ಕೊಳವೆ ಬಾವಿಯಲ್ಲಿ ಜಲ ಮರುಪೂರಣದ ಮೂಲಕ ನೀರು ಇಂಗಿಸುವುದರಿಂದ ಆ ಪ್ರದೇಶದ ಸುಮಾರು 1 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟದ ಏರಿಕೆಯನ್ನು ದಾಖಲಿಸಬಹುದು ಎಂದು ಸಂಶೋ ಧಿಸಲಾಗಿದೆ. ಕೊಳವೆ ಬಾವಿಯಲ್ಲಿ ಸರಿಯಾದ ರೀತಿಯಲ್ಲಿ ನೀರಿಂಗಿಸಿದರೆ ಸುಮಾರು 25 ವರ್ಷಕ್ಕಿಂತಲೂ ಹೆಚ್ಚು ಕಾಲ ಯಥೇತ್ಛವಾಗಿ ನೀರು ಪಡೆಯಬಹುದು.

ಮಳೆಗಾಲದಲ್ಲಿ ಮನೆಯ ಕಾಂಕ್ರಿಟ್‌ ಛಾವಣಿಯಿಂದ ಹರಿಯುವ ನೀರನ್ನೂ ಕೂಡಾ ಕೊಳವೆ ಬಾವಿಗಳಿಗೆ ನಿಖರ ರೀತಿಯಲ್ಲಿ ಸೋಸಿ ಕಳುಹಿಸುವ ವ್ಯವಸ್ಥೆಯನ್ನು ಮಾಡಬಹುದು. ಕಾಸರಗೋಡು ಸೇರಿದಂತೆ ಕರಾವಳಿ ಜಿಲ್ಲೆ ಬರಡು ನೆಲವಲ್ಲ. ಆದರೆ ಇಲ್ಲಿನ ಪಾರಂಪರಿಕ ನೀರಿನ ಚಿಲುಮೆಗಳನ್ನು ಶಕ್ತವಾಗಿ ರಕ್ಷಿಸಲಾಗಿಲ್ಲ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.