ಮಧೂರು ಕಾಳಿಕಾಂಬಾ ಮಠಕ್ಕೆ ಮಾಹಿತಿ ಫಲಕ ಹಸ್ತಾಂತರ
Team Udayavani, May 9, 2019, 6:10 AM IST
ವಿದ್ಯಾನಗರ:ಮಧೂರು ಶ್ರೀ ಕಾಳಿಕಾಂಬ ಮಠದ ಸಭಾಂಗಣಕ್ಕೆ ಮಾಹಿತಿ ಫಲಕವನ್ನು ಕಾಸರಗೋಡು ವಿಶ್ವಕರ್ಮ ಸಾಹಿತ್ಯ ದರ್ಶನ ಇದರ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.ಈ ಬಗ್ಗೆ ನಡೆದ ಪಲಕ ಹಸ್ತಾಂತರ ಕಾರ್ಯದಲ್ಲಿ ವಿಶ್ವಕರ್ಮ ಸಾಹಿತ್ಯ ದರ್ಶನ ಸಮೂಹದ ಸ್ಥಾಪಕ ಜಯ ಮಣಿಯಂಪಾರೆ, ಸಮೂಹದ ಸದಸ್ಯ ಮೌನೇಶ್ ಆಚಾರ್ಯ ಕಡಂಬಾರು, ಮಧೂರು ಶ್ರೀಕಾಳಿಕಾಂಬ ಮಠದ ಅಧ್ಯಕ್ಷ ಪರಮೇಶ್ವರ ಆಚಾರ್ಯ ನೀರ್ಚಾಲು, ಉಪಾಧ್ಯಕ್ಷರಾದ ನ್ಯಾಯವಾದಿ ಪ್ರಭಾಕರ ಆಚಾರ್ ಕೋಟೆಕ್ಕಾರ್, ಜಗದೀಶ್ ಆಚಾರ್ಯ ಹಾಗೂ ಮಠದ ಯುವಕ ಸಂಘದ ಪದಾಕಾರಿಗಳು ಉಪಸ್ಥಿತರಿದ್ದರು..