ಮಂಜೇಶ್ವರ ವಿಧಾನ ಸಭಾ ಕ್ಷೇತ್ರ: ರವೀಶ ತಂತ್ರಿ ಮತಯಾಚನೆ
Team Udayavani, Mar 30, 2019, 6:30 AM IST
ಕುಂಬಳೆ: ಕಾಸರಗೋಡು ಲೋಕಸಭಾ ಎನ್.ಡಿ.ಎ.ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರು ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ವಿವಿಧೆೆಡೆಗಳಲ್ಲಿ ಸಂಚರಿಸಿ ಮತದಾರರಲ್ಲಿ ಮತ ಯಾಚಿಸಿದರು.
ಬೆಳಗ್ಗೆ ಪೆರ್ಲದಲ್ಲಿ ಹಿರಿಯ ಬಿ.ಜೆ.ಪಿ. ನಾಯಕ ಟಿ.ಆರ್.ಕೆ. ಭಟ್ ಅವರ ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದರು. ಬಳಿಕ ಪೇಟೆಯಲ್ಲಿ ಮತಯಾಚಿಸಿದರು. ಕಾರ್ಯಕರ್ತರು ಬ್ಯಾಂಡ್ ವಾದ್ಯಘೋಷಗಳೊಂದಿಗೆ ಅಭ್ಯರ್ಥಿಯನ್ನು ಸ್ವಾಗತಿಸಿದರು. ಮಾತೆಯರು ಆರತಿ ಬೆಳಗಿ ತಿಲಕವಿಟ್ಟು ಗೌರವ ಸಲ್ಲಿಸಿದರು.
ಬಳಿಕ ಸೀತಾಂಗೋಳಿ, ಬಾಡೂರು, ಪೆರ್ಮುದೆ, ಪೈವಳಿಕೆ, ಬಾಯಾರು, ಮುಳಿಗದ್ದೆ, ಮೀಂಜ, ಮಜಿರ್ಪಳ್ಳ, ವರ್ಕಾಡಿ, ಉಪ್ಪಳ, ಹೊಸಂಗಡಿ, ಮಂಜೇಶ್ವರ ಮೊದಲಾದೆಡೆಗಳಲ್ಲಿ ಸಂಚರಿಸಿ ಮತಬೇಟೆ ನಡೆಸಿದರು.
ಅಭ್ಯರ್ಥಿಯೊಂದಿಗೆ ಪಕ್ಷದ ಬಿ.ಜೆ.ಪಿ. ನಾಯಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ, ಅರಿಬೈಲು ಗೋಪಾಲ ಶೆಟ್ಟಿ, ಹರಿಶ್ಚಂದ್ರ ಮಂಜೇಶ್ವರ, ಎಚ್. ಸತ್ಯಶಂಕರ ಭಟ್, ಪುಷ್ಪಾ ಅಮೆಕ್ಕಳ, ರೂಪವಾಣಿ ಭಟ್, ಶಂ.ನಾ. ಖಂಡಿಗೆ, ಸುಮಿತ್ರಾಜ್, ಸರೋಜಾ ಆರ್.ಬಲ್ಲಾಳ್, ಸವಿತಾ ಬಾಳಿಕೆ, ಜಯಂತಿ ಶೆಟ್ಟಿ, ಪದ್ಮನಾಭ ಕಡಪ್ಪುರ, ಮುರಳೀಧರ ಯಾದವ್, ಆದರ್ಶ್ ಬಿ.ಎಂ., ಯಾದವ ಬಡಾಜೆ, ಸದಾಶಿವ ಚೇರಾಲ್, ಹರೀಶ್ ಬೊಟ್ಟಾರಿ, ಸುಬ್ರಹ್ಮಣ್ಯ ಭಟ್, ನವೀನ್ ಬಡಾಜೆ, ಬಳ್ಳಂಬೆಟ್ಟು ಸಂಕಪ್ಪ ಭಂಡಾರಿ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ