ಪಚ್ಲಂಪಾರೆ ಉಮಾ ಭಗವತೀ ಭಜನ ಮಂದಿರಕ್ಕೆ ಧರ್ಮಸ್ಥಳದಿಂದ ಸಹಾಯಧನ ಹಸ್ತಾಂತರ
Team Udayavani, Apr 8, 2019, 6:30 AM IST
ಉಪ್ಪಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಇದರ ವತಿಯಿಂದ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿದ 1ಲಕ್ಷ ರೂ ಸಹಾಯಧನದ ಡಿ.ಡಿ.ಯನ್ನು ಪಚ್ಲಂಪಾರೆ ಶ್ರೀ ಉಮಾಭಗವತೀ ಭಜನಾ ಮಂದಿರದ ಪದಾಧಿಕಾರಿಗಳಿಗೆ ಮೇಲ್ವಿಚಾರಕ ಅರುಣ್ ಕುಮಾರ್ ಹಾಗೂ ತಲಪಾಡಿ ವಲಯದ ಮೇಲ್ವಿಚಾರಕ ಮೋಹನ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಭಜನಾ ಮಂದಿರದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಾಬು ಯು, ಪ್ರಧಾನ ಕಾರ್ಯದರ್ಶಿ ಮುರು ಗೇಶ್, ಜತೆ ಕಾರ್ಯದರ್ಶಿ ವಿಜಯ ಕುಮಾರ್ ಬಿ, ಉಮಾ ಭಗವತೀ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ, ಕಾರ್ಯದರ್ಶಿ ಜಯಂತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.