35 ವರ್ಷಗಳ ಬಳಿಕ ಯುಡಿಎಫ್‌ಗೆ ಮಣೆ


Team Udayavani, May 25, 2019, 6:11 AM IST

udf

ಕಾಸರಗೋಡು: ಸಿಪಿಎಂ ನೇತೃತ್ವದ ಎಡರಂಗದ ಭದ್ರಕೋಟೆಯಾಗಿರುವ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 35 ವರ್ಷಗಳ ಬಳಿಕ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಗೆಲುವು ದಾಖಲಿಸಿದೆ. ಈ ಗೆಲುವನ್ನು ಕಾಂಗ್ರೆಸ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ ಮೂಲಕ ಸಾಧಿಸಿದೆ.

ಕಾಸರಗೋಡು ಲೋಕಸಭೆ ಕೇÒತ್ರದಲ್ಲಿ 1957ರಿಂದ 2014ರ ವರೆಗೆ ನಡೆದಿದ್ದ ಚುನಾವಣೆಗಳಲ್ಲಿ ಒಟ್ಟು 15 ಮಂದಿ ಗೆದ್ದು ಸಂಸದರಾಗಿದ್ದಾರೆ.

1957ರಲ್ಲಿ ಸಿ.ಪಿ.ಐ.ಯ ಎ.ಕೆ. ಗೋಪಾಲನ್‌ ಅವರು 5154 ಬಹುಮತಗಳೊಂದಿಗೆ ಗೆದ್ದಿದ್ದರು. 1962ರಲ್ಲಿ ಅವರು ಮತ್ತೆ ಸಿ.ಪಿ.ಐ.ಯಿಂದ ಸ್ಪ ರ್ಧಿಸಿದ್ದು, 83,363 ಬಹುಮತಗಳೊಂದಿಗೆ ವಿಜಯಿ ಯಾಗಿದ್ದರು.

1967ರಲ್ಲಿ ಮಗದೊಮ್ಮೆ ಸಿ.ಪಿ.ಎಂ.ನ ಅಭ್ಯರ್ಥಿಯಾಗಿ ಸ್ಪರ್ಧಿಸಿ 1,18,510 ಬಹುಮತಗಳೊಂದಿಗೆ ವಿಜೇತರಾಗಿದ್ದರು.

1971ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕಡನ್ನಪಳ್ಳಿ ರಾಮಚಂದ್ರನ್‌ 5,042 ಬಹುಮತಗಳೊಂದಿಗೆ ಗೆದ್ದಿದ್ದರು. 1980ರಲ್ಲಿ ಸಿ.ಪಿ.ಎಂ.ನ ಎಂ. ರಾಮಣ್ಣ ರೈ 73,587 ಬಹುಮತಗಳಿಂದ ವಿಜಯಿಯಾಗಿದ್ದರು. 1984ರಲ್ಲಿ ಕಾಂಗ್ರೆಸ್‌ನ ಐ.ರಾಮ ರೈ ಅವರು 11,369 ಬಹುಮತಗಳಿಗೆ ವಿಜೇತರಾಗಿದ್ದರು.

1989ರಲ್ಲಿ ಸಿ.ಪಿ.ಎಂ.ನಿಂದ ಎಂ.ರಾಮಣ್ಣ ರೈ ಅವರು 1,546 ಬಹುಮತಗಳಿಂದ ಗೆಲುವು ಕಂಡಿದ್ದರು. 1991ರಲ್ಲಿ ಮತ್ತೆ ಅವರು 9,423 ಬಹುಮತಗಳಿಗೆ ವಿಜೇತರಾಗಿದ್ದರು. 1996ರಲ್ಲಿ ಸಿ.ಪಿ.ಎಂ.ನ ಟಿ.ಗೋವಿಂದನ್‌ 74,730 ಬಹುಮತಗಳಿಂದ ಗೆದ್ದಿದ್ದರು. 1998ರಲ್ಲಿ ಅವರು ಮತ್ತೆ ಸ್ಪ ರ್ಧಿಸಿದ್ದು 48,240 ಬಹುಮತ ಪಡೆದು ವಿಜಯಿಯಾಗಿದ್ದರು. 1999ರಲ್ಲಿ ಮಗದೊಮ್ಮೆ ಸ್ಪರ್ಧೆಗಿಳಿದು 31,578 ಬಹುಮತಗಳಿಂದ ವಿಜೇತರಾಗಿದ್ದರು.

2004ರಲ್ಲಿ ಸಿ.ಪಿ.ಎಂ.ನ ಅಭ್ಯರ್ಥಿಯಾಗಿ ಪಿ. ಕರುಣಾಕರನ್‌ ಸ್ಪ ರ್ಧಿಸಿ 1,08,256 ಬಹುಮತಗಳಿಂದ ಗೆದ್ದಿದ್ದರು. 2009ರಲ್ಲಿ ಅವರು ಮತ್ತೆ ಸ್ಪರ್ಧೆಗಿಳಿದು 64,427 ಬಹುಮತಗಳಿಸಿ ಗೆಲವು ಸಾ ಧಿಸಿದ್ದರು. 201ರಲ್ಲಿ ಅವರು ಮಗದೊಮ್ಮೆ ಸ್ಪರ್ಧೆಗೆ ಧುಮುಕಿ 6,921 ಬಹುಮತಗಳೊಂದಿಗೆ ವಿಜೇತರಾಗಿದ್ದರು.

ಈ ನಿಟ್ಟಿನಲ್ಲಿ ಅತ್ಯಧಿಕ ಕಾಲಾವಧಿಗೆ ಸಂಸದರಾಗಿದ್ದ ಹೆಗ್ಗಳಿಕೆ ಸಿ.ಪಿ.ಎಂ.ನ ಅಭ್ಯರ್ಥಿ ಪಿ. ಕರುಣಾಕರನ್‌ ಅವರಿಗೆ ಸಲ್ಲುತ್ತದೆ. ಅವರು ಸತತ ಮೂರು ಬಾರಿ ಗೆದ್ದು ಸಂಸದರಾಗಿದ್ದರು. ಒಟ್ಟು 15 ವರ್ಷ ಅವರು ಸಂಸದರ ಪದವಿಯಲ್ಲಿದ್ದರು.

ಅತಿ ಕಡಿಮೆ ಅವಧಿಗೆ ಸಂಸದರಾಗಿದ್ದವರು ಕಾಂಗ್ರೆಸ್‌ನ ಐ. ರಾಮ ರೈ ಅವರು. ಒಂದೇ ಬಾರಿ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು 5 ವರ್ಷ ಸಂಸದರಾಗಿದ್ದರು.

ಇದೇ ವೇಳೆ ಎ.ಕೆ. ಗೋಪಾಲನ್‌ ಮತ್ತು ಎಂ. ರಾಮಣ್ಣ ರೈ ಅವರೂ, ಟಿ. ಗೋವಿಂದನ್‌ ಅವರೂ ಮೂರು ಬಾರಿ ಗೆದ್ದು ಸಂಸದರಾಗಿದ್ದವರು. ಎ.ಕೆ. ಗೋಪಾಲನ್‌ ಅವರು 14 ವರ್ಷ, ಎಂ.ರಾಮಣ್ಣ ರೈ ಅವರು 11 ವರ್ಷ ಮತ್ತು ಟಿ. ಗೋವಿಂದನ್‌ ಅವರು 8 ವರ್ಷ ಕ್ಷೇತ್ರವನ್ನು ಪ್ರತಿನಿ ಧಿಸಿದ್ದರು. ಉಳಿದಂತೆ 2 ಬಾರಿ ಗೆದ್ದ ಕಡನ್ನಪಳ್ಳಿ ರಾಮಚಂದ್ರನ್‌ 9 ವರ್ಷ ಕ್ಷೇತ್ರದ ಪ್ರತಿನಿಧಿಯಾಗಿದ್ದರು.

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.