ಸಮಸ್ಯೆಗಳ ಆಗರ 105 ವರ್ಷ ಹಳೆಯ ಉಪ್ಪಳ ರೈಲು ನಿಲ್ದಾಣ

ಪ್ರಯಾಣಿಕರ ಸೌಕರ್ಯ, ಸೌಲಭ್ಯಗಳಿಗಾಗಿ ಇಲಾಖೆ ಕ್ರಮ ಕೈಗೊಳ್ಳಬೇಕಿದೆ

Team Udayavani, Apr 27, 2019, 6:00 AM IST

26KSDE5

ಉಪ್ಪಳ ರೃಲು ನಿಲ್ದಾಣ ಹೀಗಿದೆ!

ಕಾಸರಗೋಡು: ದಿನದಿಂದ ದಿನಕ್ಕೆ ಉಪ್ಪಳ ಪೇಟೆ ಬೆಳೆಯುತ್ತಿದೆ. ಆದರೆ ಇದೇ ರೀತಿಯಲ್ಲಿ ಮೂಲ ಸೌಲಭ್ಯವನ್ನು ಒದಗಿಸಲು ಬಹುತೇಕ ಎಲ್ಲಾ ಇಲಾಖೆಗಳು ವಿಫಲವಾಗಿದೆ. ಅದರಲ್ಲೂ ಉಪ್ಪಳಕ್ಕೆ ರೈಲು ಸೌಲಭ್ಯ ಅಷ್ಟಕಷ್ಟೇ. ಈ ರೈಲು ನಿಲ್ದಾಣಕ್ಕೆ ಸುಮಾರು 105 ವರ್ಷಗಳ ಹಳಮೆಯಿದೆ. ಈ ನಿಲ್ದಾಣ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿತ್ತು. ಈ ನಿಲ್ದಾಣವನ್ನು ದಿನ ನಿತ್ಯ ಸಾವಿರಾರು ಪ್ರಯಾಣಿಕರು ಬಳಸುತ್ತಿದ್ದಾರೆ. ಆದರೆ ಹಲವು ಕಾರಣಗಳಿಂದ ಈ ನಿಲ್ದಾಣ ಸಾಕಷ್ಟು ಅಭಿವೃದ್ಧಿ ಕಾಣದೆ ಸಮಸ್ಯೆಗಳ ಆಗರವೇ ಆಗಿದೆ.ನಿಲ್ದಾಣ ಕಟ್ಟಡ ಕುಸಿದು ಬೀಳುವ ಪರಿಸ್ಥಿತಿಯಲ್ಲಿದೆ.

ಗಡಿ ಪ್ರಯಾಣಿಕರೇ ಹೆಚ್ಚು
ಕರ್ನಾಟಕ ಗಡಿ ಪ್ರದೇಶಗಳಾದ ಪೈವಳಿಕೆ, ಬಾಯಾರು, ಕುರುಡಪದವು, ಮೀಂಜ, ವರ್ಕಾಡಿ,ಆನೆಕಲ್ಲು,ಕನಿಯಾಲ ಮೊದಲಾದ ಪ್ರದೇಶಗಳ ನೂರಾರು ಮಂದಿ ಇದೀಗಲೂ ಈ ನಿಲ್ದಾಣ ಬಳಸಿ ಮಂಗಳೂರು ಹಾಗೂ ಕಾಸರಗೋಡು, ಕಣ್ಣೂರು ಸಹಿತ ವಿವಿಧೆಡೆ ಪ್ರಯಾಣಿಸುತ್ತಾರೆ. ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಿಗಳು, ವೈದ್ಯಕೀಯ ಶುಶ್ರೂಷೆ ಸಹಿತ ದಿನನಿತ್ಯದ ಚಟುವಟಿಕೆಗಳಿಗೆ ಮಂಗಲ್ಪಾಡಿ, ಮೀಂಜ, ವರ್ಕಾಡಿ, ಪೈವಳಿಕೆ ಗ್ರಾ. ಪಂ. ವ್ಯಾಪ್ತಿಗಳ ಜನರೂ ಈ ನಿಲ್ದಾಣ ಬಳಸುತ್ತಾರೆ.

ಕಟ್ಟಡ ಕುಸಿದು ಬೀಳುವ ಭೀತಿ
ನೂರು ವರ್ಷಗಳನ್ನು ದಾಟಿರುವ ಈ ನಿಲ್ದಾಣವನ್ನು ರೈಲ್ವೇ ಇಲಾಖೆ ನಿರ್ಲಕ್ಷಿಸಿದೆ. ಪ್ರಯಾಣಿಕರಿಗೆ ಕುಳಿತು ಕೊಳ್ಳಲು ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್‌ ವ್ಯವಸ್ಥೆ ಸಹಿತ ಯಾವುದೇ ಸೌಲಭ್ಯಗಳಿಲ್ಲದೆ ಗತ ನೆನಪುಗಳನ್ನು ಮೆಲುಕು ಹಾಕುತ್ತಿದೆ.

ಶತಮಾನದಷ್ಟು ಹಳತಾದ ಹಂಚಿನ ಮಾಡಿನ ಈ ನಿಲ್ದಾಣದ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿರುವಂತಿದೆ. ಜತೆಗೆ ನಿಲ್ದಾಣದ ಹೊರ ಆವರಣದಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶಗಳಿದ್ದರೂ ಪ್ರಸ್ತುತ ಅಧಿಕಗೊಳ್ಳುತ್ತಿರುವ ವಾಹನ ದಟ್ಟಣೆಗಳ ಕಾರಣ ಸ್ಥಳಾವಕಾಶ ಸಾಕಾಗುತ್ತಿಲ್ಲ.

ಎಲ್ಲ ರೈಲುಗಳಿಗೆ ನಿಲುಗಡೆ ಇಲ್ಲಿಲ್ಲ
ಈ ನಿಲ್ದಾಣ ಶತಮಾನಗಳನ್ನು ದಾಟಿರುವುದು ಹೌದಾದರೂ ಈ ನಿಲ್ದಾಣದಲ್ಲಿ ಎಲ್ಲಾ ರೈಲುಗಳು ನಿಲುಗಡೆಗೊಳ್ಳುತ್ತಿಲ್ಲ. ಲೋಕಲ್‌ ರೈಲುಗಳು ನಿಗದಿತ ವೇಳೆ ಮಾತ್ರ ನಿಲುಗಡೆ ಗೊಳ್ಳುತ್ತಿದ್ದು, ಕಳೆದ ಎರಡು ವರ್ಷಗಳ ಹಿಂದೆ ಈ ನಿಲ್ದಾಣದಲ್ಲಿ ಎಲ್ಲ ರೈಲುಗಳಿಗೂ ನಿಲುಗಡೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆಗಳು ನಡೆದಿದ್ದರೂ ಬೇಡಿಕೆ ಈ ವರೆಗೆ ಈಡೇರಿಲ್ಲ.

ಉಪ್ಪಳ ರೈಲು ನಿಲ್ದಾಣವನ್ನು ಮೇಲ್ದರ್ಜೆ ಗೇರಿಸುವ ನಿಟ್ಟಿನಲ್ಲಿ ಹಲವು ಬಾರಿ ಸಂಬಂಧಿಸಿ ದವರಿಗೆ ಮನವಿ ನೀಡಿದ್ದರೂ ಫಲ ನೀಡಿಲ್ಲ. ಜತೆಗೆ ನಿಲ್ದಾಣ ಕಟ್ಟಡವನ್ನು ದುರಸ್ತಿಗೊಳಿಸಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹೋರಾಟ ಅನಿವಾರ್ಯ
ಉಪ್ಪಳ ರೈಲು ನಿಲ್ದಾಣದಲ್ಲಿ ನೇತ್ರಾವತಿ ರೈಲು ಗಾಡಿಗೆ ನಿಲುಗಡೆ ನೀಡದಿದ್ದಲ್ಲಿ, ಪಿಆರ್‌ಎಸ್‌(ಪ್ಯಾಸೆಂಜರ್‌ ರಿಸರ್ವೇಶನ್‌ ಸಿಸ್ಟಂ) ಆರಂಭಿಸದಿದ್ದರೆ ಹಾಗೂ ರೈಲು ನಿಲ್ದಾಣದ ಅವ್ಯವಸ್ಥೆ ಪರಿಹರಿಸದಿದ್ದಲ್ಲಿ ಹೋರಾಟ ನಡೆಸಲಾಗುವುದು.
– ಪ್ರಕಾಶ್‌ ಚೆನ್ನಿತ್ತಲ
ರಾಷ್ಟ್ರೀಯ ಚೆಯರ್‌ಮನ್‌,
ಹ್ಯೂಮನ್‌ ರೈಟ್ಸ್‌ ಪ್ರೊಟೆಕ್ಷನ್‌ ಮಿಷನ್‌(ಎಚ್‌.ಆರ್‌.ಪಿ.ಎಂ.)

ಚುನಾವಣೆ ಕಾರಣ
ಉಪ್ಪಳ ರೈಲು ನಿಲ್ದಾಣದಲ್ಲಿ ನೇತ್ರಾ ವತಿ ರೈಲು ಗಾಡಿಗೆ ನಿಲುಗಡೆ ಮಂಜೂರು ಮಾಡಲಾಗುವುದು. ಪಿ.ಆರ್‌.ಎಸ್‌. ಕೌಂಟರ್‌ ಸ್ಥಾಪಿಸಲಾಗುವುದು. ರೈಲು ನಿಲ್ದಾಣದ ಅವ್ಯವಸ್ಥೆ ಪರಿಹರಿಸಲಾಗುವುದು. ಚುನಾವಣೆಯ ಹಿನ್ನೆಲೆಯಲ್ಲಿ ಉಪ್ಪಳ ರೈಲು ನಿಲ್ದಾಣ ಅಭಿವೃದ್ಧಿ ಬಗ್ಗೆ ನೀಡಿರುವ ಭರವಸೆ ಈಡೇರಿಸಲು ವಿಳಂಬವಾಗಿದೆ. ರೈಲು ನಿಲ್ದಾಣ ಕಾಲಾವಧಿಯೊಳಗೆ ಅಭಿವೃದ್ಧಿ ಪಡಿಸಲಾಗುವುದು.
– ಪ್ರತಾಪ್‌ಸಿಂಗ್‌ ಶಮಿ
ಪಾಲಾ^ಟ್‌ ಡಿ.ಆರ್‌.ಎಂ.

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.