ಮೀನುಗಾರಿಕಾ ಪುನರ್ವಸತಿ ಯೋಜನೆ ಭರದ ಕಾಮಗಾರಿ
Team Udayavani, May 25, 2019, 6:05 AM IST
ವಿದ್ಯಾನಗರ: ರಾಜ್ಯದಲ್ಲಿ ಮೀನುಗಾರರಿಗೆ ಎದುರಾಗುವ ವಾಸ್ತವ್ಯ ಸಮಸ್ಯೆಯನ್ನು ಹೋಗಲಾಡಿಸಿ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮೀನುಗಾರಿಕಾ ಇಲಾಖೆಯು ಪುನರ್ವಸತಿ ಯೋಜನೆ ಕೈಗೊಂಡಿದ್ದು ಜಿಲ್ಲೆಯಲ್ಲಿ ಮನೆಗಳ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ.
ಪಾರೆಕಟ್ಟ್ ಸಮೀಪ ಮೀನುಗಾರರಿಗಾಗಿ 35 ಮನೆಗಳ ನಿರ್ಮಾಣ ಕಾರ್ಯವು ಈಗಾಗಲೇ ಪ್ರಾರಂಭವಾಗಿದ್ದು ಇಲಾಖೆಯು ಪ್ರತಿಯೊಂದು ಮನೆಗೆ 10ಲಕ್ಷ ರೂ.ನಂತೆ 3.50 ಕೋಟಿ ಮೊತ್ತವನ್ನು ಮೀಸಲಿಟ್ಟಿದೆ. ಮೂರು ತಿಂಗಳಿಂದ ಮನೆಗಳ ಕಾಮಗಾರಿಯು ಗುತ್ತಿಗೆದಾರರ ನೇತƒತ್ವದಲ್ಲಿ ನಡೆಯುತ್ತಿದೆ. ಎಲ್ಲಾ 35 ಮನೆಗಳ ಕಾಮಗಾರಿಯು ಒಂದೇ ಹಂತದಲ್ಲಿ ನಡೆಯುತ್ತಿದ್ದು 8 ತಿಂಗಳೊಳಗೆ ಕೆಲಸ ಪೂರ್ತಿ ಗೊಳಿಸಿ ಮನೆಯನ್ನು ಮೀನುಗಾರರಿಗೆ ಬಿಟ್ಟುಕೊಡುವಂತೆ ಇಲಾಖೆ ಆದೇಶಿಸಿದೆ. ಇನ್ನು 5 ತಿಂಗಳಲ್ಲಿ ಮನೆಗಳ ನಿರ್ಮಾಣ ಕಾರ್ಯ ಪೂರ್ತಿಯಾಗಲಿದೆ.
ಕಡಲ್ಕೊರೆತ, ಜಲಪ್ರಳಯದಿಂದ ಉಂಟಾದ ನಾಶದಿಂದಾಗಿ ಹಲವರು ವಸತಿರಹಿತರಾಗಿದ್ದಾರೆ. ಇನ್ನು ಕೆಲವರ ಮನೆಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆೆ. ಮೀನುಗಾರಿಕಾ ಇಲಾಖೆಯು ಪ್ರತಿ ಫಲಾನುಭವಿಗೂ ರೂ. 10 ಲಕ್ಷದಂತೆ ಧನಸಹಾಯ ಒದಗಿಸಲು ಮುಂದಾಗಿದ್ದು ಈಗಾಗಲೇ ಮೊದಲ ಸುತ್ತಿನ ಮೊತ್ತ ಖಾತೆಗೆ ಜಮಾ ಮಾಡಲಾಗಿದೆ. ಇದರಿಂದಾಗಿ ಮನೆಗಳ ನಿರ್ಮಾಣ ಕಾರ್ಯವೂ ವೇಗವಾಗಿ ಸಾಗುತ್ತಿದೆ. ಒಂದೇ ಪ್ರದೇಶದಲ್ಲಿ 35 ಮನೆಗಳ ನಿರ್ಮಾಣವಾಗುತ್ತಿದೆ. ಫಿಶರೀಸ್ ಕಾಲನಿಯಾಗಿ ಅಭಿವೃದ್ದಿ ಹೊಂದುತ್ತಿರುವ ಈ ಪ್ರದೇಶದಲ್ಲಿ ಬೋರ್ವೆಲ್ ಸ್ಥಾಪಿಸಿ ಆ ಮೂಲಕ ಪ್ರತಿಯೊಂದು ಮನೆಗೂ ನೀರಿ ಸರಬರಾಜು ಮಾಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ