ಹರಿದು ಬರಲಿ ಅಭಿವೃದ್ಧಿಯ ನೀರು: ಮಂಗಳೂರು ನಗರ ಈ ಗ್ರಾಮದ ನೆಂಟ


Team Udayavani, Jun 24, 2022, 5:34 PM IST

23

ಚೇಳ್ಯಾರು: ಮಂಗಳೂರು ಮಹಾನಗರ ಪಾಲಿಕೆ ಗಡಿಭಾಗದಲ್ಲಿರುವ ಚೇಳಾçರು ಕೃಷಿ, ಹೈನುಗಾರಿಕೆಯನ್ನು ನೆಚ್ಚಿ ಕೊಂಡ ಗ್ರಾಮ. ಜನಸಂಖ್ಯೆ ಅಂದಾಜು ಐದು ಸಾವಿರ.

ಪಟ್ಟಣ ಹತ್ತಿರದ ನೆಂಟನಾಗಿರುವುದರಿಂದ ಈ ಗ್ರಾಮದ ಹಲವರು ಪಟ್ಟಣದ ಕೈಗಾರಿಕೆ ಹಾಗೂ ಇತರ ಉದ್ಯೋಗಕ್ಕೆ ತೆರಳುತ್ತಾರೆ. ಮುಡಾ ಬಡಾವಣೆ, ಖಾಸಗಿ ಬಡಾವಣೆ ಇಲ್ಲಿ ನಿರ್ಮಾಣವಾಗುತ್ತಿದ್ದು ನಗರದಂತೆ ಬೆಳೆಯುವ ಮುನ್ಸೂಚನೆ ಗೋಚರಿಸುತ್ತಿದೆ.

ಕೃಷಿಯ ಕೀರ್ತಿ ಈ ಗ್ರಾಮದಲ್ಲಿ ಹಲವಾರು ಕೃಷಿಕರು ಕೃಷಿಗಾಗಿ ಉತ್ತಮ ಕೃಷಿಕ ಪ್ರಶಸ್ತಿ ಪಡೆದವರಿದ್ದಾರೆ. ಪ್ರತೀ ವರ್ಷ ನೂರಾರು ಎಕರೆ ಭೂಮಿಯಲ್ಲಿ ಭತ್ತ ಬೇಸಾಯ ಮಾಡಲಾಗುತ್ತದೆ. ನಗರಕ್ಕೆ ಹೊಂದಿಕೊಂಡ ಗ್ರಾಮದಲ್ಲಿ ಹೆಚ್ಚಿನ ಬೇಸಾಯ ನಡೆಯುತ್ತಿದೆ. ಹಡಿಲು ಭೂಮಿ ಬೇಸಾಯಕ್ಕೂ ಪ್ರೋತ್ಸಾಹ ನೀಡಲಾಗುತ್ತಿದೆ.

ಎಂಆರ್‌ಪಿಎಲ್‌ ನಿರ್ವಸಿತರ ಕಾಲನಿ ಇಲ್ಲಿದೆ. ಇಲ್ಲಿನ ಪ್ರಮುಖ ಮತ್ತು ಕಾಲನಿಯ ಹರಿದು ಬರಲಿ ಅಭಿವೃದಿ œಯ ನೀರು ಮಂಗಳೂರು ನಗರ ಈ ಗ್ರಾಮದ ನೆಂಟ ಚೇಳಾçರು ಗ್ರಾಮ ಪಂಚಾಯತ್‌ ಕಚೇರಿ. ನಂದಿನಿ ನದಿಯಲ್ಲಿ ಹೂಳು ತುಂಬಿರುವ ಪ್ರದೇಶ. ಚೇಳಾçರು ಗ್ರಾಮರಸ್ತೆಗಳು ವಿಸ್ತರಣೆಯಾಗಿವೆ. ಇನ್ನು ಕೆಲವು ರಸ್ತೆಗಳಿಗೆ ಡಾಮರು ಹಾಕಿದ್ದರೂ ದುರಸ್ತಿ ಅಗತ್ಯವಿದೆ.

ಕುಡಿಯುವ ನೀರಿನ ವ್ಯವಸ್ಥೆ ಈಗ ಸ್ವಲ್ಪ ಸುಧಾರಿಸಿದೆ. ಇನ್ನಷ್ಟು ಸುಧಾರಿಸಬೇಕಿದೆ. ಅಗತ್ಯವಿದ್ದಾಗ ಪಂಚಾಯತ್‌ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದೆ. ಜಲಜೀವನ್‌ ಮಿಷನ್‌ ಯೋಜನೆ ಜಾರಿಗೊಂಡರೆ ನೀರಿನ ಸಮಸ್ಯೆ ಪರಿಹಾರವಾಗಬಹುದು ಎಂಬುದು ಗ್ರಾಮಸ್ಥರ ಲೆಕ್ಕಾಚಾರ. ಯೋಜನೆಯ ಅನುಷ್ಠಾನ ಪ್ರಗತಿಯಲ್ಲಿದೆ.

ಮಾಲಿನ್ಯ ತಡೆ ಇಲ್ಲಿಯೂ ನಂದಿನಿ ನದಿಯೇ ಜೀವಾಳ. ಆದರೆ ಅದರಲ್ಲಿ ಹೂಳು ತುಂಬಿದ ಪರಿಣಾಮ ಕೃಷಿಗೆ ಸಮಸ್ಯೆಯಾಗುತ್ತಿದೆ. ಹೂಳು ತೆಗೆದು ಕೃಷಿಗೆ ಅನುಕೂಲ ಮಾಡಿಕೊಟ್ಟರೆ ಗ್ರಾಮದ ಆರ್ಥಿಕತೆಯೂ ಬೆಳೆಯಬಹುದು. ಕೃಷಿಗೆ ಪೂರಕವಾಗಿ ನಂದಿನಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಿಸಿದಲ್ಲಿ ಗ್ರಾಮದ ನೀರಿನ ಬೇಡಿಕೆಯೂ ಈಡೇರಲಿದೆ. ಕೃಷಿಗೂ ಉತ್ತೇಜನ ದೊರಕಲಿದೆ. ಇದರೊಂದಿಗೆ ನದಿ ಮಾಲಿನ್ಯ ವಾಗದಂತೆ ತಡೆದರೆ ಮೀನುಗಾರಿಕೆ ವೃತ್ತಿಗೂ ಅನುಕೂಲವಾಗಲಿದೆ. ಅಕ್ರಮವಾಗಿ ಒಳಚರಂಡಿ ನೀರು ನಂದಿನಿ ನದಿಗೆ ಸೇರದಂತೆ ತಡೆಗೆ ಕ್ರಮ ಕೈಗೊಳ್ಳಬೇಕಿದೆ. ನದಿಯ ಹೂಳು ತೆಗೆಯಲು ಅಂದಾಜು 5 ಕೋ. ರೂ ಅಗತ್ಯವಿದ್ದು, ಸರಕಾರ ಅನು ಮೋದಿಸಬೇಕಿದೆ. ಹಾಗಾಗಿ ಮಾಲಿನ್ಯ ಮುಕ್ತ ಮಾಡುವ ಕೆಲಸ ಆಗ ಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹ.

ಘನ ತ್ಯಾಜ್ಯ ವಿಲೇವಾರಿಗೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕ್ರಮ ಕೈಗೊಂಡಿದ್ದರೂ ಹಸಿ,ಒಣ ಕಸ ವಿಂಗಡನೆ ವ್ಯವಸ್ಥೆ ಆರಂಭವಾಗಿಲ್ಲ. ಹೀಗಾಗಿ ಕಸವನ್ನು ರಸ್ತೆ ಬದಿ ಬಿಸಾಡುವ ಪ್ರವೃತ್ತಿ ಇದೆ. ಇದಕ್ಕೂ ಪರಿಹಾರ ಹುಡುಕಬೇಕಿದೆ. ದಾರಿ ದೀಪದ ವ್ಯವಸ್ಥೆ ಸುಧಾರಿಸಬೇಕಿದೆ.

ಸೀಮಿತ ಸಂಖ್ಯೆಯಲ್ಲಿ ಖಾಸಗಿ ಬಸ್‌ ಗಳ ಸಂಚಾರವಿದೆ. ಒಂದು ನರ್ಮ್ ಬಸ್‌ ಮದ್ಯ ಗ್ರಾಮದಲ್ಲಿ ಸಂಚರಿಸುತ್ತಿದ್ದು, ಚೇಳಾçರಿಗೂ ಸೇರಿ ಎರಡಾದರೂ ನರ್ಮ್ ಬಸ್‌ ಅಗತ್ಯವಿದೆ ಎಂಬುದು ಜನರ ಬೇಡಿಕೆ.

ಅಗೋಳಿ ಮಂಜಣ್ಣ ನೆನಪು ತುಳುನಾಡಿನ ವೀರ ಪುರುಷ ಅಗೋಳಿ ಮಂಜಣ್ಣ ಸುರತ್ಕಲ್‌ ಕಟ್ಲದಲ್ಲಿ ಜನಿಸಿದರೂ, ಚೇಳಾçರುಗುತ್ತು ಅವರ ಅಜ್ಜಿ ಮನೆ ಚೇಳಾçರಿನಲ್ಲಿದ್ದು 300-400 ವರ್ಷಗಳ ಇತಿಹಾಸವಿದೆ. ವಿವಿಧ ಕಾರ್ಯಕ್ರಮ ಇವರ ಹೆಸರಿನಲ್ಲಿ ಜರಗುತ್ತದೆ.

ಮೂಲ ಸೌಕರ್ಯ ಒದಗಿಸಿ ಚೇಳ್ಯಾರುವಿನಲ್ಲಿ ಶಾಲೆ, ಪದವಿಪೂರ್ವ ಕಾಲೇಜಿದೆ. ಬೇರೆ ಆರಂಭಿಸುವ ಬದಲು ಇದನ್ನೇ ಸುಸಜ್ಜಿತಗೊಳಿಸಿದರೆ ಉತ್ತಮ. ನಗರ ಸಮೀಪ ಇದ್ದು, ಇನ್ನಷ್ಟು ಮೂಲ ಸೌಕರ್ಯ ಒದಗಿಸಬೇಕು. –ವೇಣುವಿನೋದ್‌ ಶೆಟ್ಟಿ, ಚೇಳ್ಯಾರು

„ಲಕ್ಷ್ಮೀ ನಾರಾಯಣ ರಾವ್‌

ಟಾಪ್ ನ್ಯೂಸ್

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, 3 ಮಂದಿ ಖುಲಾಸೆ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ

Colin Munro Announced International Retirement

Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್

pralhad joshi

Hubli; ಕಾಂಗ್ರೆಸ್ ಅಧಿಕಾರಕ್ಕಾಗಿ ದೇಶವನ್ನು ಒಡೆಯಲೂ ಹೇಸುವುದಿಲ್ಲ: ಪ್ರಹ್ಲಾದ ಜೋಶಿ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Dandeli: ಮದುವೆಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ… 8 ಮಂದಿಗೆ ಗಾಯ

Dandeli: ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ.. ಮಕ್ಕಳು ಸೇರಿ 8 ಮಂದಿಗೆ ಗಾಯ

Praveen Nettar Case; Arrest of main accused Mustafa Paychar of Sulya

Praveen Nettar Case; ಪ್ರಮುಖ ಆರೋಪಿ ಸುಳ್ಯದ ಮುಸ್ತಫಾ ಪೈಚಾರ್ ಬಂಧನ

ಪಾಕ್‌ಗೆ ಗೌರವ ಕೊಡಿ… ಇಲ್ಲವಾದಲ್ಲಿ ಅಣುಬಾಂಬ್ ಹಾಕುತ್ತಾರೆ: ಮಣಿಶಂಕರ್ ಅಯ್ಯರ್ ಹೇಳಿಕೆ

Pak ಬಳಿ ಅಣುಬಾಂಬ್ ಇದೆ ಅವರಿಗೆ ಗೌರವ ಕೊಡಿ… ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

Fraud: ಕ್ರೈಂ ಬ್ರಾಂಚ್‌ ಹೆಸರಲ್ಲಿ 1.60 ಕೋ.ರೂ. ಪಡೆದು ವಂಚನೆ   

Fraud: ಕ್ರೈಂ ಬ್ರಾಂಚ್‌ ಹೆಸರಲ್ಲಿ 1.60 ಕೋ.ರೂ. ಪಡೆದು ವಂಚನೆ   

Mangaluru: ಅಪಹರಿಸಲು ಸುಪಾರಿ; ಇಬ್ಬರ ಬಂಧನ

Mangaluru: ಅಪಹರಿಸಲು ಸುಪಾರಿ; ಇಬ್ಬರ ಬಂಧನ

Mangaluru: ಟಿಪ್ಪರ್‌ ಲಾರಿ ಹರಿದು ಸ್ಕೂಟರ್‌ ಸವಾರ ಸಾವು

Mangaluru: ಟಿಪ್ಪರ್‌ ಲಾರಿ ಹರಿದು ಸ್ಕೂಟರ್‌ ಸವಾರ ಸಾವು

Mangaluru: ರೈಲು ನಿಲ್ದಾಣದ ಬಳಿ ಗಲಾಟೆ; ಪ್ರಕರಣ ದಾಖಲು

Mangaluru: ರೈಲು ನಿಲ್ದಾಣದ ಬಳಿ ಗಲಾಟೆ; ಪ್ರಕರಣ ದಾಖಲು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, 3 ಮಂದಿ ಖುಲಾಸೆ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ

Colin Munro Announced International Retirement

Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್

6-sslc

Rank: ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದ ಪ್ರತ್ವಿತಾ ಪಿ.ಶೆಟ್ಟಿ; ಐ.ಎ.ಎಸ್ ಅಧಿಕಾರಿಯಾಗುವ ಆಸೆ

pralhad joshi

Hubli; ಕಾಂಗ್ರೆಸ್ ಅಧಿಕಾರಕ್ಕಾಗಿ ದೇಶವನ್ನು ಒಡೆಯಲೂ ಹೇಸುವುದಿಲ್ಲ: ಪ್ರಹ್ಲಾದ ಜೋಶಿ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.