ಮಂಗಳೂರು: ಸಮಾಜದಲ್ಲಿ ನಿಯತ್ತಾಗಿ ಬದುಕಿ; ಗಾಂಜಾ ಅಪರಾಧಿಗಳಿಗೆ ನೂತನ ಕಮಿಷನರ್ ವಾರ್ನಿಂಗ್
Team Udayavani, Jan 6, 2021, 1:54 PM IST
ಮಂಗಳೂರು: ನಿಯತ್ತಾಗಿ ಕೆಲಸ ಮಾಡಿ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಿ, ಮತ್ತೆ ಏನಾದರೂ ಇಂತಹ ಕೆಲಸ ಪ್ರಾರಂಭಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಮಂಗಳೂರು ನೂತನ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಗಾಂಜಾ ಮಾರಾಟಗಾರರು, ಪೆಡ್ಲರ್, ಗಾಂಜಾ ಸೇವನೆ ಅಪರಾಧಿಗಳಿಗೆ ವಾರ್ನಿಂಗ್ ನೀಡಿದ್ದಾರೆ.
ಸಿಪಿ ಕಚೇರಿಯ ಹಿಂಬದಿಯ ಮೈದಾನದಲ್ಲಿ ನಡೆದ ಕಮಿಷನರೇಟ್ ವ್ಯಾಪ್ತಿಯ ಗಾಂಜಾ ಮಾರಾಟ ಮತ್ತು ಗಾಂಜಾ ಸೇವನೆಯ ಅಪರಾಧಿಗಳ ಮೆರವಣಿಗೆ ನಡೆಸಿ ಅವರಿಗೆ ಎಚ್ಚರಿಕೆ ನೀಡಿದ ಎನ್. ಶಶಿಕುಮಾರ್, ನಿಯತ್ತಾಗಿ ಕೆಲಸ ಮಾಡಿ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮ್ಮಿಂದ ಸಮಾಜ ಕೆಟ್ಟು ಹೋಗಬಾರದು. ನೀವು ಸಮಾಜದಲ್ಲಿ ನಿಯತ್ತಾಗಿ ಬದುಕಬೇಕು. ಕಾಲೇಜುಗಳು ಆರಂಭವಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಟ ಮಾಡುವುದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಅಪರಾಧಿಗಳಿಗೆ ಫುಲ್ ಚಾರ್ಜ್ ತೆಗೆದುಕೊಂಡರು.
ಇದನ್ನೂ ಓದಿ: ಲವ್ ಜಿಹಾದ್ ಅಂತಾರಲ್ಲ… ಯೋಗಿ ಆದಿತ್ಯನಾಥ್ ಮದುವೆ ಆಗಿದ್ದಾನಾ ?: ಸಿ.ಎಂ ಇಬ್ರಾಹಿಂ
ಮುಂದಿನ ದಿನಗಳಲ್ಲಿಯೂ ನಿಮ್ಮ ನಿಮ್ಮ ಊರುಗಳಲ್ಲಿ ಪೋಲಿಸರು ನಿಮ್ಮ ಮೇಲೆ ಒಂದು ಕಣ್ಣನ್ನು ಇಟ್ಟಿರುತ್ತಾರೆ. ಕದ್ದು ಮುಚ್ಚಿ ಏನಾದರು ಇಂತಹ ಕೆಲಸದಲ್ಲಿ ಮತ್ತೆ ತೊಡಗಿಕೊಂಡರೆ ಜೀವನ ಪರ್ಯಾಂತ ಜೈಲಿನಲ್ಲಿ ಕೂರಿಸುತ್ತೇವೆ ಎಂದು ವಾರ್ನಿಗ್ ನೀಡಿದರು.
ತಮ್ಮ ವ್ಯಾಪ್ತಿಯಲ್ಲಿ ಡ್ರಗ್ಸ್ ಮುಕ್ತ ಪ್ರದೇಶ ಆಗುವಂತೆ ಕ್ರಮ ಕೈಗೊಳ್ಳಬೇಕು ಪೊಲೀಸ್ ಅಧಿಕಾರಿಗಳಿಗೆ ಇದೆ ವೇಳೆ ಖಡಕ್ ಆದೇಶ ನೀಡಿದರು.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ 7 ಶಿಕ್ಷಕರು, 11 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಪತ್ತೆ