ನವೀಕೃತ ಬೆಥನಿ ಕಾನ್ವೆಂಟ್ ಚಾಪೆಲ್ ಉದ್ಘಾಟನೆ
Team Udayavani, May 9, 2018, 3:15 PM IST
ಮಹಾನಗರ: ನಗರದ ಬೆಂದೂರ್ನಲ್ಲಿರುವ ಬೆಥನಿ ಕಾನ್ವೆಂಟ್ ಚಾಪೆಲ್ ಕಟ್ಟಡವನ್ನು ನವೀಕರಿಸಲಾಗಿದ್ದು, ಅದರ ಉದ್ಘಾಟನೆಯನ್ನು ಮಂಗಳೂರಿನ ಬಿಷಪ್ ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರು ಮೇ 8ರಂದು ನೆರವೇರಿಸಿದರು.
ಬೆಳ್ಳಿ ಹಬ್ಬ
ಇದೇ ಸಂದರ್ಭ ಬೆಥನಿ ಸಂಸ್ಥೆಯ 27 ಮಂದಿ ಧರ್ಮ ಭಗಿನಿಯರು ತಮ್ಮ ಧಾರ್ಮಿಕ ಜೀವನದ ಬೆಳ್ಳಿ ಹಬ್ಬವನ್ನು ಆಚರಿಸಿದರು. ಬೆಥನಿ ಸಂಸ್ಥೆಯ ಸ್ಥಾಪಕ ದೇವರ ಸೇವಕ ಮೊ| ಆರ್.ಎಫ್.ಸಿ. ಮಸ್ಕರೇನ್ಹಸ್ ಅವರು 1934ರಲ್ಲಿ ಈ ಚಾಪೆಲ್ನ್ನು ಕಟ್ಟಿಸಿದ್ದು, ಅದು ಸಂಸ್ಥೆಯ ಪಾರಂಪರಿಕ ಕಟ್ಟಡವಾಗಿದೆ.
ಬಲಿ ಪೂಜೆ
ಬಿಷಪ್ ಅಲೋಶಿಯಸ್ ಡಿ’ಸೋಜಾ ಅವರು ಇತರ 6 ಮಂದಿ ಧರ್ಮ ಗುರುಗಳ ಜತೆ ಸೇರಿ ಬಲಿ ಪೂಜೆಯನ್ನು ಅರ್ಪಿಸಿದರು. ಬೆಂದೂರು ಸೈಂಟ್ ಸೆಬಾಸ್ಟಿಯನ್ ಚರ್ಚ್ನ ವಂ| ಆ್ಯಂಟನಿ ಶೆರಾ ಅವರು ಪ್ರವಚನ ನೀಡಿದರು. ಬೆಥನಿ ಸಂಸ್ಥೆಯ ಸುಪೀರಿಯರ್ ಜನರಲ್ ಸಿ| ರೋಸ್ ಸೆಲಿನ್ ಬೆಳ್ಳಿ ಹಬ್ಬ ಆಚರಣೆಯ ಸಂಭ್ರಮದಲ್ಲಿರುವ ಭಗಿನಿಯರನ್ನು ಅಭಿನಂದಿಸಿದರು. ಬಲಿ ಪೂಜೆಯ ಬಳಿಕ ಅಭಿನಂದನ ಸಮಾರಂಭ ಜರಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
IPL;ಮುಂಬೈ ಇಂಡಿಯನ್ಸ್ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ