ಮೂಲ್ಕಿ: ಶೀಘ್ರ ಸ್ಥಾಪನೆಯಾಗಲಿ ಆರ್ಟಿಒ
Team Udayavani, Nov 8, 2022, 3:25 PM IST
ಮೂಲ್ಕಿ: ಬಹುನಿರೀಕ್ಷೆಯ ಮೂಲ್ಕಿ ತಾಲೂಕು ಈಗಾಗಲೇ ಆರಂಭಗೊಂಡಿದ್ದು, ವಿವಿಧ ಇಲಾಖೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ (ಆರ್ಟಿಒ) ಪ್ರಾದೇಶಕ ಸಾರಿಗೆ ಅಧಿಕಾರಿಗಳ ಕಚೇರಿ ಇನ್ನೂ ಮೂಲ್ಕಿಗೆ ಬಂದಿಲ್ಲ. ಇಲ್ಲಿ ಆರಂಭವಾಗುವ ಲಕ್ಷಣವೂ ಕಾಣುತ್ತಿಲ್ಲ.
ಮಂಗಳೂರು ಆರ್ಟಿಒ ಕಚೇರಿಗೆ ತೆರಳಬೇಕು
ಮಂಗಳೂರಿನ ಆರ್ಟಿಒ ಕಚೇರಿಯ ಮೂಲಕ ಕೆಲವಷ್ಟೆ ಸೇವೆಗಳನ್ನು ವಾರಕ್ಕೊಮ್ಮೆ ಮೂಲ್ಕಿ ಕಾರ್ನಾಡು ಗಾಂಧಿ ಮೈದಾನದಲ್ಲಿ ಕ್ಯಾಂಪ್ ನಡೆಸುವ ಮೂಲಕ ಮೂಲ್ಕಿ ಹೊಬಳಿಯ ಜನರ ಕೆಲವೊಂದು ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಆದರೆ ಇಲ್ಲಿಯ ಜನರಿಗೆ ಬೇಕಾದ ಪೂರ್ಣಕಾಲಿಕಾ ಇಲಾಖಾ ಸೇವೆ ಇಲ್ಲಿ ಸಿಗುವುದು ಅತೀ ಅಗತ್ಯವಾಗಿದೆ. ಮೂಲ್ಕಿಯಿಂದ ಬರೋಬ್ಬರಿ 30ಕ್ಕೂ ಕೀ.ಮೀ. ಮಿಕ್ಕಿದ ದೂರ ಮಂಗಳೂರು ಆರ್ಟಿಒ ಕಚೇರಿಗೆ ತೆರಳಬೇಕಾಗಿದೆ. ಇದು ಸರಕಾರದ ವಿಕೇಂದ್ರಿಕರಣ ನಿಯಮದಂತೆ ಅದರಲ್ಲೂ ತಾಲೂಕು ಕೇಂದ್ರವಾಗಿರುವ ಮೂಲ್ಕಿಗೆ ಆರ್ಟಿಒ ಕಚೇರಿ ನ್ಯಾಯಯುತ ಬೇಡಿಕೆಯಾಗಿದೆ.
ಪ್ರತೀ ಶುಕ್ರವಾರ ಇಲ್ಲಿ ಕೆಲವು ಸೇವೆಗಳನ್ನು ಪಡೆಯಲು ಮೈದಾನದಲ್ಲಿ ಜನ ಸೇರಿ ಉರಿ ಬಿಸಿಲು ಹಾಗೂ ಮಳೆಯ ತೊಂದರೆ ಕೂಡ ಅನುಭ ವಿಸಬೇಕಾಗಿದೆ. ತತ್ಕ್ಷಣ ಮೂಲ್ಕಿಗೆ ಆರ್ಟಿಒ ಕಚೇರಿ ಸ್ಥಾಪನೆಗೆ ಸರಕಾರ ಮುಂದೆ ಬಂದು ಇಲ್ಲಿಯ ಜನರ ಸಮಸ್ಯೆಗೆ ಉತ್ತರಿಸಬೇಕಾಗಿದೆ.
ಸರಕಾರದ ಗಮನ ಸೆಳೆಯಲಾಗುವುದು: ತಾಲೂಕು ಆಗಿ ಮೊದಲ ಹಂತದಲ್ಲಿ ಮಿನಿ ವಿಧಾನ ಸೌಧ ಕಟ್ಟಡಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಈ ಕಟ್ಟಡದಲ್ಲಿ ಸರಕಾರದ ವಿವಿಧ ಇಲಾಖೆಗಳನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಿಸಲಾಗಿದೆ. ಮುಂದೆ ಆರ್ಟಿಒ ಕಚೇರಿಯ ಅಗತ್ಯದ ಬಗ್ಗೆ ಸರಕಾರದ ಗಮನ ಸೆಳೆಯಲಾಗಿದೆ. ಜನರಿಗೆ ಅಗತ್ಯ ಇರುವ ಎಲ್ಲ ಸೌಲಭ್ಯಗಳನ್ನು ತಾಲೂಕು ಕೇಂದ್ರದಲ್ಲಿ ಸ್ಥಾಪಿಸುವಲ್ಲಿ ಸರಕಾರ ಬದ್ಧವಾಗಿದೆ. ಸಾರಿಗೆ ಇಲಾಖೆಯ ಕಚೇರಿಯು ಮೂಲ್ಕಿಗೆ ದೊರೆಯಲಿದೆ. –ಉಮಾನಾಥ ಕೋಟ್ಯಾನ್, ಶಾಸಕರು ಮೂಲ್ಕಿ-ಮೂಡುಬಿದಿರೆ
-ಸರ್ವೋತ್ತಮ ಅಂಚನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!