ಗಣಪನ ರೂಪ ತಳೆದ ಎಲೆಕ್ಟ್ರಾನಿಕ್‌ ಬಿಡಿಭಾಗ

ಪುತ್ತೂರು: ವರ್ಣಕುಟೀರ ಕಲಾ ಸಂಸ್ಥೆಯ ವಿನೂತನ ಪ್ರಯತ್ನ

Team Udayavani, Aug 29, 2019, 5:00 AM IST

h-11

ಪುತ್ತೂರು: ಉಪಯೋಗವಿಲ್ಲ ಎಂದು ಮೂಲೆಗೆ ಎಸೆದ ಎಲೆಕ್ಟ್ರಾನಿಕ್‌ ಬಿಡಿಭಾಗಗಳಲ್ಲೇ ಮಿನಿ ಗಣಪತಿ ವಿಗ್ರಹ ಸಿದ್ಧವಾಗಿ ನಿಂತಿದೆ.

15 ವರ್ಷಗಳಿಂದ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿರುವ ನಗರದ ಮೊಟ್ಟೆತ್ತಡ್ಕ ನಿವಾಸಿ ಚಿತ್ರಕಲಾ ಶಿಕ್ಷಕ ಪ್ರವೀಣ್‌ ವರ್ಣಕುಟೀರ ಅವರ ಕಲ್ಪನೆಯಲ್ಲಿ ಈ ಬಾರಿಯ ಚೌತಿ ಸಂಭ್ರಮಕ್ಕೆ ಮೂಡಿ ಬಂದ ವಿಶೇಷ ಗಣಪತಿ ವಿಗ್ರಹವಿದು.

ಎಲೆಕ್ಟ್ರಾನಿಕ್‌ ಬಿಡಿಭಾಗಗಳಲ್ಲಿ 12 ಗಣಪತಿ
ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ ಮೂಲಕ ಈ ಗಣಪತಿ ವಿಗ್ರಹ ರಚಿಸಲಾಗಿದೆ. ಎಲೆಕ್ಟ್ರಾನಿಕ್‌ ಬಿಡಿ ಭಾಗಗಳಾದ ಐಸಿ, ಕಂಡೆನ್ಸರ್‌, ಕೆಪ್ಯಾಸಿಟರ್‌, ಕೂಲಿಂಗ್‌, ಅಲ್ಯುಮಿನಿಯಂ ಪ್ಲೇಟ್ ಬಳಸಿ ತಯಾರಿಸಲಾಗಿದೆ. ಎಲೆಕ್ಟ್ರಾನಿಕ್‌ ಬಿಡಿಭಾಗ ಉಪ ಯೋಗಿಸಿ 1ರಿಂದ 1.5 ಇಂಚಿನ 12 ಗಣಪತಿ ವಿಗ್ರಹ ರಚಿಸಲಾಗಿದೆ.

ಹದಿನೈದು ವರ್ಷಗಳಿಂದ ಜಾಗೃತಿ
ಪ್ರತೀ ವರ್ಷ ಗಣೇಶ ಚತುರ್ಥಿಯಂದು ಪರಿಸರ ಸ್ನೇಹಿ ಗಣಪತಿ ವಿಗ್ರಹ ತಯಾರಿಸುವ ಪುತ್ತೂರಿನ ಪ್ರವೀಣ್‌ ಅವರು ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ನಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದಾರೆ. ಜತೆಗೆ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ ಮೂಲಕ ಆಸಕ್ತರಿಗೆ ಕಲೆಯ ತರಬೇತಿ ನೀಡುತ್ತಿದ್ದಾರೆ. ಪರಿಸರ ಸ್ನೇಹಿ ನೆಲೆಯಲ್ಲಿ ಪ್ರತಿ ಬಾರಿ ವಿಶೇಷ ರೀತಿಯಲ್ಲಿ ಗಣಪತಿ ವಿಗ್ರಹ ತಯಾರಿಸುವ ಇವರು, ಈ ಬಾರಿ ಹಾಳಾದ ಎಲೆಕ್ಟ್ರಾನಿಕ್‌ ಬಿಡಿಭಾಗಗಳನ್ನು ಬಳಸಿ ಮಿನಿ ಗಣಪತಿ ತಯಾರಿ ಮಾಡಲು ಮುಂದಾಗಿದ್ದರು. ಕಡಿಮೆ ಖರ್ಚಿನಲ್ಲಿ, ಪರಿಸರಕ್ಕೆ ಹಾನಿ ಇಲ್ಲದೆ, ಉಪಯೋಗ ರಹಿತ ವಸ್ತುವಿಗೆ ರೂಪ ನೀಡಿ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ.

ಪರಿಸರಕ್ಕೆ ಧಕ್ಕೆ ಆಗದಂತೆ ಗಣಪತಿ ವಿಗ್ರಹ ರಚಿಸಬೇಕು ಎಂಬ ಕನಸು ಮೊಳಕೆಯೊಡೆದದ್ದು 9ನೇ ತರಗತಿಯಲ್ಲಿ. ತರಗತಿಯೊಳಗೆ ಕುಳಿತು ರಚಿಸಿದ ಅಕ್ಕಿ ಕಾಳಿನಲ್ಲಿ ಕೆತ್ತನೆ ಮಾಡಿದ ಗಣಪನೇ ಇವರ ಆಸಕ್ತಿಗೆ ಮುನ್ನುಡಿ ಬರೆಯಿತು. ಸಾಸಿವೆ ಕಾಳಿನ ರೇಖಾಚಿತ್ರ ಗಣಪ, ಬಿದಿರು ಗಣಪ, ಫ್ರೇಮ್‌, ಒಯಸಿಸ್‌ ಬ್ರಿಕ್ಸ್‌, 1 ಪೆನ್ಸಿಲ್ ಮೊನೆಯ ಗಣಪ, ಮಣ್ಣಿನಿಂದ ಮಾಡಿದ ಗಣಪ ಹಾಗೂ ನೂಲಿನಲ್ಲಿ ಗಣಪ, ಪೆನ್ನಿನ ರೀಫಿಲ್, ಐಸ್‌ ಕ್ಯಾಂಡ್‌ ಕಡ್ಡಿ, ಬೆಂಕಿ ಕಡ್ಡಿಯಲ್ಲಿ ಹೀಗೆ ನಾನಾ ಬಗೆಯ ಗಣಪ ಪ್ರಸಿದ್ಧಿ ಪಡೆದಿವೆ. ಆ ಸಾಲಿಗೆ ಎಲೆಕ್ಟ್ರಾನಿಕ್‌ ಬಿಡಿಭಾಗಗಳಲ್ಲಿ ತಯಾರಾದ ಗಣಪತಿ ಹೊಸ ಸೇರ್ಪಡೆ. ಕಲಾ ಪ್ರೀತಿ ಪಕ್ವಗೊಳ್ಳಲು ಶಾಲಾ ದಿನಗಳಲ್ಲಿ ಕಲಾ ಶಿಕ್ಷಕರಾಗಿದ್ದ ಎಂ.ಎಸ್‌. ಪುರುಷೋತ್ತಮ, ಅಲ್ಪಾಡಿ ರಾಮ ನಾಯ್ಕ ಮೊದ ಲಾದವರ ಪ್ರೋತ್ಸಾಹ ಕಾರಣ ಎಂದು ಸ್ಮರಿಸುತ್ತಾರೆ ಪ್ರವೀಣ್‌ ವರ್ಣಕುಟೀರ.

ಜಾಗೃತಿ ಉದ್ದೇಶಸೆ. 1ರಂದು ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯಲ್ಲಿ ನನ್ನ ಗಣಪ ನೋಡ ಬನ್ನಿ ಬಹು ಆಯಾಮದ ಏಕ ವ್ಯಕ್ತಿ ಕರಕುಶಲ ಪ್ರದರ್ಶನಗೊಳ್ಳಲಿದೆ. ಪರಿಸರಸ್ನೇಹಿ ವಿಗ್ರಹ ತಯಾರಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಗಣೇಶ ಚತುರ್ಥಿಯಂದು ಇಂತಹ ಹೊಸ ಪ್ರಯತ್ನದಲ್ಲಿ ನಿರತನಾಗುತ್ತಿದ್ದೇನೆ. ಈ ಬಾರಿ ಎಲೆಕ್ಟ್ರಾನಿಕ್‌ ಬಿಡಿಭಾಗದಲ್ಲೇ ಗಣಪತಿ ವಿಗ್ರಹ ರಚಿಸಿದ್ದೇನೆ.
– ಪ್ರವೀಣ್‌ ವರ್ಣಕುಟೀರ ಪರಿಸರ ಪ್ರೇಮಿ ಕಲಾವಿದ

ಬಹುಮುಖ ಪ್ರತಿಭೆಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಗಣಪನ ಸೃಷ್ಟಿಯಲ್ಲಿ ಪ್ರವೀಣ್‌ ಅವರು ಸಿದ್ಧಹಸ್ತರು. 15 ವರ್ಷಗಳಿಂದ ನಿರಂತರವಾಗಿ ಪ್ರಕೃತಿಪ್ರಿಯ ಗಣಪನ ತಯಾರಿಯಲ್ಲಿ ತೊಡಗಿಸಿಕೊಂಡಿರುವ ಪ್ರವೀಣ್‌ ಬಹುಮುಖ ಪ್ರತಿಭೆ. ಅವರು ತಯಾರಿಸಿರುವ ಗಣಪತಿ ವಿಗ್ರಹಗಳೇ ಅದಕ್ಕೆ ಸಾಕ್ಷಿ..
– ಅಲ್ಬಾಡಿ ರಾಮ ನಾಯ್ಕ ಉಪಾಧ್ಯಕ್ಷ, ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Rahul Gandhi 3

PM Modiಗೆ ನಾಜಿ ಪ್ರಚಾರಕ ಗೋಬೆಲ್ಸ್‌ನೇ ಸ್ಫೂರ್ತಿ: ಕಾಂಗ್ರೆಸ್‌

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.