ಪುಂಜಾಲಕಟ್ಟೆ: ಆಮಂತ್ರಣ ಪತ್ರಿಕೆ ಬಿಡುಗಡೆ
Team Udayavani, Apr 18, 2018, 3:30 PM IST
ಪುಂಜಾಲಕಟ್ಟೆ : ಬಂಟ್ವಾಳ ತಾ| ವಾಮದಪದವು ಸಮೀಪದ ನೀಲಿ ಶ್ರೀ ವಿಷ್ಣುಮೂರ್ತಿ, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ, ಕಲ್ಕುಡ-ಕಲ್ಲುರ್ಟಿ ದೈವಸ್ಥಾನವು ನವೀಕೃತಗೊಂಡಿದ್ದು, ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಹಾಗೂ ದೈವಗಳ ನೇಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೈವಸ್ಥಾನದ ವಠಾರದಲ್ಲಿ ಎ. 14ರಂದು ಜರಗಿತು.
ಶ್ರೀ ಕ್ಷೇತ್ರದ ಅರ್ಚಕ ಗಂಗಾಧರ ಆಸ್ರಣ್ಣ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಮಾವಿನಕಟ್ಟೆ ಶ್ರೀ ಲಕ್ಷ್ಮೀ ವೆಂಕಟರಮಣ ಯಜಮಾನ ಇಂಡಸ್ಟ್ರೀಸ್ ಮಾಲಕ ಟಿ. ರಘುನಾಥ ಪೈ, ಗ್ರಾಮ ಪಂಚಾಯತ್ ಅಧ್ಯಕ್ಷ ಯತೀಶ್ ಶೆಟ್ಟಿ ವಿಜಯನಗರ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ರಾಜೇಂದ್ರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಪ್ರಮುಖರಾದ ಅಮ್ಮು ರೈ ಹರ್ಕಾಡಿ, ಕಾಂತಪ್ಪ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ವೀರಪ್ಪ ಶೆಟ್ಟಿ ಕೆಂಜಾರು, ಯೋಗೇಶ್ ಪ್ರಭು, ಉಷಾ ಇಂದು ಶೇಖರ್ ಚೆನ್ನೈತ್ತೋಡಿ, ಆನಂದ ಮೂಲ್ಯ ಪಚ್ಚೇರು, ಪದ್ಮನಾಭ ಭಂಡಾರಿ, ಸುರೇಶ್ ಶೆಟ್ಟಿ ಪಡ್ಲೊಟ್ಟು, ಆನಂದ ಅಚಾರ್ಯ ಹರ್ಕಾಡಿ, ಸತೀಶ್ ಶೆಟ್ಟಿ ಮಾದರಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.