ಮಣ್ಣು ಸಿಗುತ್ತಿಲ್ಲ, ಮಡಕೆಗೆ ಬೇಡಿಕೆಯೂ ಇಲ್ಲ

ಸಂಕಷ್ಟದಲ್ಲಿ ಕುಂಬಾರಿಕೆ ಉದ್ಯಮ; ಕುಸಿಯುತ್ತಿದೆ ಕುಲಕಸುಬು

Team Udayavani, Jan 17, 2020, 4:44 AM IST

an-32

ಆಲಂಕಾರು: ಜೀವನ ಶೈಲಿಯಲ್ಲಿ ಬದಲಾವಣೆ ಹಾಗೂ ಅನುಕೂಲದ ದೃಷ್ಟಿಯಿಂದ ಮಣ್ಣಿನ ಪಾತ್ರೆಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಮಡಕೆ ತಯಾರಕರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದ್ದು, ಜನತೆಯ ಬೇಡಿಕೆಗೆ ತಕ್ಕಂತೆ ಮಡಕೆ ಪೂರೈಸುವುದೂ ಅವರಿಗೆ ಅಸಾ ಧ್ಯವಾಗಿದೆ. ಬೆಲೆಯೂ ಗಗನಕ್ಕೇರಿದೆ.

ಬೇಸಗೆಯಲ್ಲಿ ಧಗೆ ನಿವಾರಿಸಲು ಜನ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ತಂಪು ನೀರಿಗಾಗಿ ಹಾತೊರೆಯುವ ಜನರು ಫ್ರಿಜ್‌ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ದೃಷ್ಟಿಯಿಂದ ಮಡಕೆಗಳಲ್ಲಿಟ್ಟು ಕುಡಿಯುತ್ತಿದ್ದಾರೆ. ಪ್ರತಿಯೊಂದು ಅಡುಗೆ ಮನೆಗೂ ಗ್ಯಾಸ್‌ ಒಲೆಗಳು ಬಂದ ಮೇಲೆ ಮಣ್ಣಿನ ಮಡಕೆಗಳಿಗೆ ಬೇಡಿಕೆ ಕಡಿಮೆಯಾಯಿತು.

ಸ್ಟೀಲ್‌ ಪಾತ್ರೆಗಳಿಗೆ ಬೇಡಿಕೆ
ಸ್ಟೀಲ್‌ ಹಾಗೂ ಅಲ್ಯೂಮೀನಿಯಂ ಪಾತ್ರೆಗಳಿಗೆ ಹೋಲಿಸಿದರೆ ಮಣ್ಣಿನ ಮಡಕೆಗಳಲ್ಲಿ ಅಡುಗೆ ತಯಾರಿಸಲು ಹೆಚ್ಚು ಸಮಯ ಹಾಗೂ ಇಂಧನ ಬೇಕಾಗುತ್ತದೆ. ಹೀಗಾಗಿ, ಸ್ಟೀಲ್‌ ಪಾತ್ರೆಗಳಿಗೆ ಬೇಡಿಕೆ ಹೆಚ್ಚಿದೆ.

ಮಣ್ಣಿನ ಅಭಾವ
ಮಡಕೆ ಮಾಡಲು ಸೂಕ್ತವಾದ ಜೇಡಿ ಮಣ್ಣು ಪುತ್ತೂರು ತಾಲೂಕಿನ ಎಲ್ಲಿಯೂ ಲಭ್ಯವಿಲ್ಲ. ಈ ಹಿಂದೆ ಆಲಂಕಾರು ಗ್ರಾಮದ ಕೊಂಡಾಡಿ ಕೊಪ್ಪದ ಬಳಿ ಮಣ್ಣು ದೊರೆಯುತ್ತಿತ್ತು. ಆ ಜಾಗದಲ್ಲೀಗ ರಬ್ಬರ್‌ ಬೆಳೆದಿರುವ ಕಾರಣ ಮಣ್ಣು ತೆಗೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಬೆಳ್ತಂಗಡಿ ತಾಲೂಕಿನ ದಿಡುಪೆ ಮತ್ತು ಕಾಜೂರಿನಿಂದ ತರಬೇಕು. ಇದು ವೆಚ್ಚದಾಯಕವಾಗಿದೆ.

4 ಮನೆಗಳಲ್ಲಿ ಮಾತ್ರ ಕೆಲಸ
ಒಂದೊಮ್ಮೆ ಈ ಪ್ರದೇಶದ ಸುಮಾರು 60 ಮನೆಗಳಲ್ಲಿ ಮಡಿಕೆ ತಯಾರಿಯನ್ನು ಕುಲಕಸುಬಾಗಿ ನಿರ್ವಹಿಸಲಾಗಿತ್ತು. ಹಲವರಿಗೆ ಅದೇ ಜೀವನಾಧಾರವೂ ಆಗಿತ್ತು. ಈಗ ಬಹುತೇಕ ಕುಟುಂಬಗಳು ಬದಲಿ ಉದ್ಯೋಗವನ್ನು ನೆಚ್ಚಿಕೊಂಡಿವೆ.
ಈಗ ನಾಲ್ಕು ಮನೆಗಳ ಸದಸ್ಯರು ಮಾತ್ರ ತಮ್ಮ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಅನ್ನಡ ಮಡಕೆ, ಪದಾರ್ಥದ ಪಾತ್ರೆ, ನೀರಿನ ಕೊಡಪಾನ, ಹಂಡೆ, ಭತ್ತ ಬೇಯಿಸುವ ಹಂಡೆ, ಕಾವಲಿ, ಬಾವಡೆ, ದೇವಾಲಯದ ಮುಗುಳಿ, ಹೂಜಿ ಮುಂತಾದ ಪಾತ್ರ ಪರಿಕರಗಳನ್ನು ತಯಾರಿಸುತ್ತಾರೆ.

ಮಾಸಾಶನ ಸಿಗುವಂತಾಗಲಿ
ಜೀವನ ಪರ್ಯಂತ ಮಡಕೆ ತಯಾರಿಯನ್ನೇ ನೆಚ್ಚಿಕೊಂಡು ಇಳಿ ವಯಸ್ಸಿನಲ್ಲಿ ಪುಡಿಗಾಸಿಗೂ ಪರದಾಡಬೇಕಾದ ಅನಿವಾರ್ಯ ಕುಂಬಾರ ಕುಟುಂಬಗಳದ್ದಾಗಿದೆ. ಗುಡಿ ಕೈಗಾರಿಕೆ ಸಂಘದ ಮೂಲಕ ಎಲ್ಲ ಮಡಕೆ ತಯಾರಕ ಕುಟುಂಬಗಳಿಗೂ ಮಾಸಾಶನ ಸಿಗುವಂತಾಗಬೇಕು. ಸರಕಾರ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ, ಕುಂಬಾರರ ಹಿತ ಕಾಯುವಂತಾಗಬೇಕು ಎಂದು ಹಿರಿಯ ಮಡಕೆ ತಯಾರಕ ನಾಡ್ತಿಲ ಕೊಪ್ಪ ಮುತ್ತಪ್ಪ ಕುಂಬಾರ ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.