ವಿಟ್ಲ ಪಾರ್ಥಂಪಾಡಿ (ಜಠಾಧಾರಿ) ದೈವಸ್ಥಾನ: ಬ್ರಹ್ಮಕಲಶ ಸಿದ್ಧತೆ


Team Udayavani, Jan 19, 2019, 9:51 AM IST

19-january-13.jpg

ವಿಟ್ಲ : ಇಲ್ಲಿನ ಶ್ರೀ ಪಾರ್ಥಂಪಾಡಿ (ಜಠಾಧಾರಿ) ದೈವಸ್ಥಾನವು ಪುನರ್‌ನಿರ್ಮಾಣ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಬ್ರಹ್ಮಕಲಶಕ್ಕೆ ಸಿದ್ಧತೆ ನಡೆ ಯುತ್ತಿದೆ. ವಿಟ್ಲ ಸೀಮೆಯ ಡೊಂಬ ಹೆಗ್ಗಡೆ ಅರಸು ಮನೆತನದ ಪಾರ್ಥಂ ಪಾಡಿ ಚಾವಡಿಯ ಪಟ್ಟದ ದೈವ ಶ್ರೀ ಪಾರ್ಥಂಪಾಡಿ (ಜಠಾಧಾರಿ) ದೈವದ ದೈವಸ್ಥಾನ, ಶ್ರೀ ನಾಗ ಸಾನ್ನಿಧ್ಯ ಮತ್ತು ಗುಳಿಗನ (ರಾಜನ್‌ ದೈವ) ಕಟ್ಟೆಯ ಸ್ಥಾನ ಪ್ರದಾನ, ಪುನಃಪ್ರತಿಷ್ಠೆ ಮತ್ತು ಮೈಮೆಯು ಫೆ.6 ಮತ್ತು7ರಂದು ನಡೆಯಲಿದೆ.

ಪ್ರಾಚೀನ ದೈವಸ್ಥಾನ
ಇದು ಪ್ರಾಚೀನ ದೈವಸ್ಥಾನಗಳಲ್ಲೊಂದು. ವಿಟ್ಲ ಸೀಮೆಯೆಂದು ಕರೆಯಲ್ಪಡುವ 19 ಗ್ರಾಮಗಳನ್ನು ಹೆಚ್ಚಿನ ಮಟ್ಟಿಗೆ ಸ್ವತಂತ್ರ ವಾಗಿ ಆಳುತ್ತಿದ್ದ ರಾಜವಂಶ, ವಿಟ್ಲ ಡೊಂಬ ಹೆಗ್ಗಡೆ ಅರಸು ಮನೆತನವು ವಿಟ್ಲ ಸೀಮೆಯಲ್ಲಿ 16 ದೈವ – ದೈವಸ್ಥಾನ ಗಳನ್ನು ನಡೆಸಿಕೊಂಡು ಬಂದಿತ್ತು. ವಿಟ್ಲ ಅರಸು ಮನೆತನದ ಆನುವಂಶಿಕ ಆಡಳಿತ ಕ್ಕೊಳಪಟ್ಟ ವಿಟ್ಲ ಸೀಮೆಯ ದೈವ – ದೈವಸ್ಥಾನಗಳಲ್ಲಿ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ಪ್ರಮುಖವಾದುದು. 2013 ರಲ್ಲಿ ಈ ದೇಗುಲದ ಬ್ರಹ್ಮಕಲಶ ಸಂಪನ್ನ ವಾಗಿರುವುದು ಈಗ ಇತಿಹಾಸ. ಅದೇ ವಿಟ್ಲ ಅರಸು ಮನೆತನದ ಪಾರ್ಥಂಪಾಡಿ ಚಾವಡಿಯ ಪಟ್ಟದ ದೈವ ಶ್ರೀ ಪಾರ್ಥಂ ಪಾಡಿ (ಜಠಾಧಾರಿ) ದೈವದ ದೈವಸ್ಥಾನವೂ ಶಿಥಿಲಗೊಂಡು ಪುನರ್‌ನಿರ್ಮಾಣ ಮಾಡ ಬೇಕೆನ್ನುವ ಆಶಯ ಭಕ್ತರದಾಗಿತ್ತು.

ಪ್ರಶ್ನಾಚಿಂತನೆ
ಶ್ರೀ ಪಾರ್ಥಂಪಾಡಿ (ಜಠಾಧಾರಿ) ದೈವ ಸ್ಥಾನದ ಪುನರ್‌ ನಿರ್ಮಾಣಕ್ಕೆ ದೈವಜ್ಞರಿಂದ ಪ್ರಶ್ನಾ ಚಿಂತನೆ ನಡೆಸಲಾಯಿತು. ಪ್ರಮುಖ ದೈವ ಶ್ರೀ ಜಠಾಧಾರಿ, ನಾಗನ ಸಾನ್ನಿಧ್ಯ ಮತ್ತು ಗುಳಿಗ ದೈವದ ಸಾನ್ನಿಧ್ಯವೂ ಶಿಥಿಲಗೊಂಡಿದೆ. ಅದೆಲ್ಲವನ್ನೂ ಜೀರ್ಣೋ ದ್ಧಾರಗೊಳಿಸಬೇಕೆಂದು ಕಂಡು ಬಂತು. ಅದರಂತೆ ವಿಟ್ಲದ ಅರಸರು, ಒಡಿಯೂರು ಶ್ರೀಗಳು, ಮಾಣಿಲ ಶ್ರೀಗಳು, ಸೀಮೆಯ ತಂತ್ರಿಯವರ ಮಾರ್ಗದರ್ಶನದಲ್ಲಿ ದೈವಸ್ಥಾನದ ಪುನರ್‌ ನಿರ್ಮಾಣ ನಡೆಸಲು ತೀರ್ಮಾನಿಸಲಾಯಿತು.

ಜೀರ್ಣೋದ್ಧಾರ ಸಮಿತಿ
ಜೀರ್ಣೋದ್ಧಾರ ಸಮಿತಿ ರಚಿಸ ಲಾಗಿದ್ದು, ಒಡಿಯೂರು ಶ್ರೀಗಳು, ಮಾಣಿಲ ಶ್ರೀಗಳ ಮಾರ್ಗದರ್ಶನದಲ್ಲಿ ಗೌರವಾಧ್ಯಕ್ಷರಾಗಿ ವಿಟ್ಲ ಅರಮನೆಯ ವಿ.ಜನಾರ್ದನ ವರ್ಮ ಅರಸರು, ಅಧ್ಯಕ್ಷರಾಗಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ.ವಿಟ್ಲ, ಕಾರ್ಯಾಧ್ಯಕ್ಷರಾಗಿ ಬಾಬು ಕೆ.ವಿ., ಉಪಾಧ್ಯಕ್ಷರಾಗಿ ಲಕ್ಷ್ಮಣ ಆರ್‌.ಎಸ್‌., ವಿಟ್ಲ ಅರಮನೆಯ ಶ್ರೀಕಂಠ ವರ್ಮ, ಮಹಾಲಿಂಗ ಶೆಟ್ಟಿ ಕೂಜಪ್ಪಾಡಿ, ಕೋಶಾಧಿಕಾರಿಯಾಗಿ ಪ್ರಭಾಕರ ಶೆಟ್ಟಿ ದಂಬೆಕಾನ, ಕಾರ್ಯದರ್ಶಿಯಾಗಿ ಶೈಲೇಶ್‌ ವಿ., ಜತೆ ಕಾರ್ಯದರ್ಶಿಯಾಗಿ ನಾರಾಯಣ ನಾವಡ ಅವರನ್ನೊಳಗೊಂಡ ಸಮಿತಿ ರಚಿಸಲಾಯಿತು.

ಯೋಜನೆ
ವಾಸ್ತುಶಿಲ್ಪಿ ರಮೇಶ್‌ ಕಾರಂತ ಅವರ ಮಾರ್ಗದರ್ಶನದಲ್ಲಿ ಯೋಜನೆಯನ್ನು ರೂಪಿಸಲಾಯಿತು. ದೈವಸ್ಥಾನದ ಸುತ್ತ ಮುತ್ತಲ ಪ್ರದೇಶವಾದ ನೆಕ್ಕರೆಕಾಡು, ಕಾಶಿಮಠದ ಆಸ್ತಿಕ ಬಂಧುಗಳು, ಸ್ವಯಂ ಸೇವಕರು ಶ್ರಮದಾನದ ಮೂಲಕ ಜೀರ್ಣೋದ್ಧಾರ ಕಾರ್ಯದಲ್ಲಿ ಹಗಲಿ ರುಳು ಶ್ರಮಿಸಿದರು. ಊರ ಪರವೂರ ದಾನಿಗಳು ಕೈಜೋಡಿಸಿದರು. ಸುಮಾರು 50 ಲಕ್ಷ ರೂ. ವೆಚ್ಚದ ದೈವಸ್ಥಾನ, ನಾಗನಕಟ್ಟೆ, ರಾಜನ್‌ ಗುಳಿಗ ದೈವದ ಸಾನ್ನಿಧ್ಯ ಪುನರ್‌ನಿರ್ಮಾಣಗೊಂಡಿತು.

157 ವರ್ಷಗಳ ಹಿಂದೆ ಜಾತ್ರೆ
ದೈವಸ್ಥಾನದ ಸಮೀಪದ ಬಾಕಿಮಾರು ಗದ್ದೆ (ಮೈಮೆದ ಕಂಡ)ಯಲ್ಲಿ ಜಠಾಧಾರಿ ದೈವದ ಜಾತ್ರೆ 157 ನಡೆದಿದೆ. ಅದಕ್ಕೆ ಭಾರೀ ಮಹಿಮೆಯಿತ್ತು. ತುಳುವಿನಲ್ಲಿ ಮೈಮೆದ ಜಾತ್ರೆಯೆಂದೇ ಹೇಳಲಾಗುತ್ತಿತ್ತು. ಇದಕ್ಕೆ ಕೇರಳದ ಕುಡಾಲುಮೇರ್ಕಳದ ಬಾಡೂರು ಎಂಬಲ್ಲಿಂದ ಭಂಡಾರ ಆಗಮಿಸ ಬೇಕಾಗಿತ್ತು. ಇದೀಗ ದೈವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಪೂರ್ತಿ ಯಾಗಿ ಫೆ. 6 ಮತ್ತು 7ರಂದು ಸ್ಥಾನ ಪ್ರದಾನ, ಪುನಃ ಪ್ರತಿಷ್ಠೆ ನಡೆಯಲಿದ್ದು, ಬಳಿಕ ರಾತ್ರಿ ದೈವದ ಮೈಮೆ ಸೇವೆ ಜರಗಲಿದೆ.

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.