ಮನೆಯ ಅಂದ ಹೆಚ್ಚಿಸುವ ಸಿಮೆಂಟ್‌ ಕರಕುಶಲ ವಸ್ತುಗಳು


Team Udayavani, Jan 19, 2019, 9:28 AM IST

19-january-11.jpg

ಮನೆಯ ಅಲಂಕಾರಕ್ಕಾಗಿ ನಾವು ಬಹುವೆಚ್ಚದ ಪೀಠೊಪಕರಣ ಹಾಗೂ ಅಲಂಕೃತ ವಸ್ತುಗಳನ್ನು ತಂದು ಶ್ರೀಮಂತಿಕೆಯನ್ನು ಹೆಚ್ಚಿಸುತ್ತೇವೆ. ಮನೆಯ ಸೊಬಗನ್ನು ಹೆಚ್ಚಿಸಲು ಈ ಕ್ರಮ ಒಳ್ಳೆಯದು ಎಂದೇ ನಾವು ಭಾವಿಸಬಹುದು. ಆದರೆ ಇದರ ಬದಲಾಗಿ ನಾವು ನಮ್ಮ ಕೈಯಿಂದ ಅರಳಿಸಬಹುದಾದ ಕಲೆಯಿಂದ ಮನೆಯ ಸೊಬಗನ್ನು ಹೆಚ್ಚಿಸಿದರೆ ಮನೆಯ ಅಂದವೂ ಹೆಚ್ಚಾಗುವುದು ಮಾತ್ರವಲ್ಲದೇ ಎಲ್ಲರ ಮೆಚ್ಚುಗೆಗೂ ನಾವು ಪಾತ್ರರಾಗಲು ಸಾಧ್ಯವಿದೆ.

ಅಂತಹ ಕಲೆಗಳಲ್ಲಿ ಕೇವಲ ಒಂದು ಕೆ.ಜಿ. ಸಿಮೆಂಟ್‌ನಿಂದಲೇ ನಾವು ಹಲವಾರು ರೀತಿಯ ಆಲಂಕಾರಿಕ ವಸ್ತುಗಳನ್ನು ತಯಾರಿಸಬಹುದು. ಇದರಿಂದ ಮನೆಯ ಸೊಬಗು ಹೆಚ್ಚಾಗುವುದಲ್ಲದೇ ತುಂಬಾ ಆಕರ್ಷಿಣೀಯವಾಗುತ್ತದೆ.

ಸಿಮೆಂಟ್‌ ಶೂನಲ್ಲಿ ಹೂ ಕುಂಡ
ನಾವು ಮನೆಯಲ್ಲಿ ಹೂ ಇಡಲು ಹೂ ಕುಂಡಗಳಿಗಾಗಿ ಹೆಚ್ಚಿನ ಹಣ ವ್ಯಯಿಸುತ್ತೇವೆ. ಆದರೆ ಅದನ್ನು ಮನೆಯಲ್ಲಿ ಸಿಮೆಂಟ್‌ನಿಂದ ಮಾಡಬಹುದು. ಹಳೆಯ ಶೂ ಇದ್ದರೆ ಅದಕ್ಕೆ ಸಿಮೆಂಟ್‌ ಅನ್ನು ನೀರಿನಲ್ಲಿ ಕಲಸಿ ಮೆತ್ತಬೇಕು. ಅದು ಗಟ್ಟಿಯಾಗುವವರೆಗೆ ಬಿಟ್ಟು ಬಳಿಕ ಹೂಗಳನ್ನು ಇಟ್ಟು ಮನೆಯ ಹೊರಾಂಗಣದಲ್ಲಿ ಇಡಬಹುದು. ಇದು ನೋಡಲು ಆಕರ್ಷಣೀಯವಾಗಿರುತ್ತದೆ.

ವಸ್ತುಗಳನ್ನು ಇಡಲು
ಸ್ನಾನದ ಕೋಣೆಯಲ್ಲಿ ಸಾಬೂನು, ಟೂಥ್‌ಪೇಸ್ಟ್‌ ಹಾಗೂ ಬ್ರಶ್‌ಗಳನ್ನಿಡಲು ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸುತ್ತೇವೆ. ಇದಕ್ಕೆ ಪರ್ಯಾಯವಾಗಿ ಸಿಮೆಂಟ್‌ ನಿಂದ ನಾವೇ ಅವುಗಳನ್ನು ತಯಾರಿಸಬಹುದು. ಒಂದು ಡಬ್ಬಕ್ಕೆ ಪ್ಲಾಸ್ಟಿಕ್‌ ಹಾಳೆ ಹೊದೆಸಿ, ಅದರ ಮೇಲೆ ನೀರಿನಲ್ಲಿ ಕಲಸಿದ ಸಿಮೆಂಟ್‌ನ್ನು ಪೂರ್ಣವಾಗಿ ಹಾಕಿ. ಅನಂತರ ಅದರ ಮೇಲೆ ಭಾರವಾದ ವಸ್ತು ಇಡಬೇಕು. ಬಳಿಕ ಅದನ್ನು ತೆಗೆದರೆ, ಕೆಳಗಡೆ ಸಿಮೆಂಟ್‌ ಗಟ್ಟಿಯಾಗಿ ಡಬ್ಬ ತರಹವಾಗಿದ್ದು, ಇದನ್ನು ಪೇಸ್ಟ್‌, ಸಾಬೂನು ಇಡಲು ಬಳಸಬಹುದು.

ಶೋಕೇಸ್‌ ಗಳು
ಖಾಸಗಿಯಾಗಿ ತರುವ ಸಿಮೆಂಟ್‌ನ ಶೋಕೇಸ್‌ ಗಳಿಗೆ ಹೆಚ್ಚು ಹಣ ಭರಿಸಬೇಕಾಗುತ್ತದೆ. ಅದಕ್ಕಾಗಿ ನಾವೇ ನಮ್ಮ ಕೈಯಿಂದ ಕಡಿಮೆ ಬೆಲೆಯಲ್ಲಿ ಶೋಕೇಸ್‌ ಗಳನ್ನು ತಯಾರಿಸಬಹುದು. ಅದರಲ್ಲಿ ಒಂದು ಪ್ಲಾಸ್ಟಿಕ್‌ ಕಪ್‌ಗೆ ಸಿಮೆಂಟ್‌ ಬರಿಸಿ, ಅದು ಗಟ್ಟಿಯಾದಾಗ ಪ್ಲಾಸ್ಟಿಕ್‌ ಕಪ್‌ ತೆಗೆದರೆ ಅಲ್ಲಿ ಒಂದು ಶೋಕೇಸ್‌ ಆಗತ್ತದೆ. ಅದರಲ್ಲಿ ಆಲಂಕಾರಿಕ ವಸ್ತುಗಳನ್ನು ಇಡಬಹುದು. ಇಂತಹ ಹತ್ತು ಹಲವು ಉಪಾಯಗಳು ನಮ್ಮ ಕೌಶಲದಿಂದ ಮಾಡಿ, ಮನೆಯ ಸೊಬಗನ್ನು ಹೆಚ್ಚಿಸಬಹುದು. ಕೇವಲ ಸಿಮೆಂಟ್‌ನಿಂದಲೇ ಮನೆಯ ಸೌಂದರ್ಯವನ್ನು ಹೆಚ್ಚಿಸಬಹುದು. ಸಿಮೆಂಟ್‌ ನಿಂದ ತಯಾರಿಸುವ ವಸ್ತುಗಳು ಹೆಚ್ಚು ಸುದೃಢವಾಗಿ ಬಾಳಿಕೆ ಬರುತ್ತದೆ ಮಾತ್ರವಲ್ಲ ನೋಡಲೂ ಆಕರ್ಷಣೀಯವಾಗಿರುತ್ತದೆ.

 ಅಭಿನವ

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.