ಕೋವಿಡ್ 19: ಬಡ ಟ್ಯಾಕ್ಸಿ ಚಾಲಕರಿಗೂ ಸಂಕಷ್ಟ

ಲಾಕ್‌ಡೌನ್‌: ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ ಮಾಲಕರಿಗೆ ಅತೀವ ನಷ್ಟ

Team Udayavani, Apr 17, 2020, 5:24 AM IST

ಕೋವಿಡ್ 19: ಬಡ ಟ್ಯಾಕ್ಸಿ ಚಾಲಕರಿಗೂ ಸಂಕಷ್ಟ

ಉಡುಪಿ/ ಕುಂದಾಪುರ: ಕೋವಿಡ್ 19 ವೈರಸ್‌ ಪರಿಣಾಮ ವಿಧಿಸಿರುವ ಲಾಕ್‌ಡೌನ್‌ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ ಮಾಲಕರಿಗೆ ಅತೀವ ನಷ್ಟ ಉಂಟು ಮಾಡಿದೆ. ಇದರ ನೇರ ಪರಿಣಾಮ ವಾಹನ ಚಾಲಕರ ಮೇಲಾಗಿದೆ.

ಜಿಲ್ಲೆಯಲ್ಲಿ 2,600 ಟ್ಯಾಕ್ಸಿ ಹಾಗೂ 1,600 ಮ್ಯಾಕ್ಸಿಕ್ಯಾಬ್‌ಗಳು ಸೇರಿ 4,200 ವಾಹನಗಳಿವೆ. 4,500ಕ್ಕೂ ಅಧಿಕ ಮಂದಿ ಚಾಲಕರಿದ್ದಾರೆ. ಶಿರೂರಿನಿಂದ ಹೆಜಮಾಡಿ ತನಕ 64 ಘಟಕಗಳಿವೆ.

ಘಟಕಗಳಿಂದ ಕಷ್ಟದಲ್ಲಿದ್ದವರಿಗೆ ನೆರವು
ಸಂಕಷ್ಟದಲ್ಲಿರುವ ಚಾಲಕರ ನೆರವಿಗೆ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್‌ ಮತ್ತು ಮ್ಯಾಕ್ಸಿಕ್ಯಾಬ್‌ ಅಸೋಸಿ ಯೇಶನ್‌ ಘಟಕಗಳು ಮುಂದಾಗಿವೆ. ವಿವಿ ಧೆಡೆಗಳಲ್ಲಿ ಘಟಕಗಳ ಅಧ್ಯಕ್ಷರು, ಸದಸ್ಯರು ತಮ್ಮ ವ್ಯಾಪ್ತಿಯಲ್ಲಿರುವ ಬಡ ಚಾಲಕರಿಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ.

ಸೀಸನ್‌ ಸಮಯದಲ್ಲಿ ಆಘಾತ
ಉಡುಪಿ ಜಿಲ್ಲೆ ಪ್ರವಾಸಿ ಹಾಗೂ ಧಾರ್ಮಿಕ ತಾಣವಾಗಿ ಪ್ರಸಿದ್ಧಿ ಪಡೆದಿದೆ. ಜತೆಗೆ ಇದು ಮದುವೆ ಮತ್ತಿತರ ಸಮಾ ರಂಭಗಳ ಸೀಸನ್‌. ಈ ಸಮಯದಲ್ಲಿ ಟ್ಯಾಕ್ಸಿ ವಾಹನಗಳಿಗೆ ಹೆಚ್ಚು ಡಿಮಾಂಡ್‌ ಇರುತ್ತದೆ. ಅದೆಲ್ಲವನ್ನು ಕೊರೊನಾ ಕಸಿದುಕೊಂಡಿದೆ.

ಹಲವು ಪರದಾಟ
ಟೂರಿಸ್ಟ್‌ ಟ್ಯಾಕ್ಸಿ ಉದ್ದಿಮೆ ಯನ್ನೇ ನೆಚ್ಚಿಕೊಂಡು ಚಾಲಕ- ಮಾಲಕರಿಗೆ ಇಎಂಐ ಕಟ್ಟಲು ಸರಕಾರ ಮೂರು ತಿಂಗಳ ಕಾಲ ಮುಂದೂಡಿ ರಿಯಾಯಿತಿ ನೀಡಿದೆ. ಇವರು ಇತರ ಸಾಲಗಳನ್ನು ಮಾಡಿ ಕೊಂಡಿದ್ದು, ಕಂತು ಕಟ್ಟಲು ಮತ್ತೂಬ್ಬರಿಂದ ಸಾಲ ಮಾಡುವಂತಾಗಿದೆ. ಜತೆಗೆ ವಾಹನ ದುರಸ್ತಿ, ಮನೆ, ವಿದ್ಯಾಭ್ಯಾಸ ಖರ್ಚು ನಿರ್ವಹಣೆಗೆ ಪರದಾಡುತ್ತಿದ್ದಾರೆ.

ಸರಕಾರದ ನೆರವಿನ ನಿರೀಕ್ಷೆ
ಜಿಲ್ಲಾ ಅಸೋಸಿಯೇಶನ್‌ ವತಿಯಿಂದ ಸರಕಾರಕ್ಕೆ ಈಗಾಗಲೆ ಎರಡು ಪ್ರಮುಖ ಬೇಡಿಕೆಗಳನ್ನು ಇರಿಸಲಾಗಿದೆ. ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ಗಳ 6 ತಿಂಗಳ ರಸ್ತೆ ತೆರಿಗೆ ಹಾಗೂ ಇನ್ಶೂರೆನ್ಸ್‌ ರದ್ದು ಮಾಡಬೇಕು. ಕನಿಷ್ಠ 5,000 ರೂ. ತತ್‌ಕ್ಷಣಕ್ಕೆ ಸದಸ್ಯರ ಖಾತೆಗಳಿಗೆ ನೀಡಿ, ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಚಾಲಕರ ಕುಟುಂಬಗಳ ನೆರವಿಗೆ ಬರಬೇಕು ಅನ್ನುವುದಾಗಿದೆ.

ಆರ್‌ಟಿಒ ಬಯಸಿದೆ 60 ಟ್ಯಾಕ್ಸಿ
ನಗರ ಆರ್‌ಟಿಒ ಅಧಿಕಾರಿಗಳು ಈಗಾಗಲೇ ಅಸೋಸಿಯೇಶನ್‌ ಮುಖ್ಯಸ್ಥ ರಲ್ಲಿ ತುರ್ತು ಸೇವೆಗಾಗಿ 60 ಟ್ಯಾಕ್ಸಿ ವಾಹನಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ. ಡೀಸೆಲ್‌ ಖರ್ಚು ಭರಿಸುವು ದಾಗಿಯೂ ಹೇಳಿದ್ದಾರೆ. ಅದರಂತೆ ಅವರು ಕೇಳಿಕೊಂಡಷ್ಟು ವಾಹನಗಳನ್ನು ನೀಡಲು ಸಿದ್ಧರಿದ್ದೇವೆ. ಆರ್‌ಟಿಒ ಅಧಿಕಾರಿಗಳು ಕೇಳಿದಾಗ ಒದಗಿಸುತ್ತೇವೆ ಎಂದು ಜಿಲ್ಲಾ ಟ್ಯಾಕ್ಸಿಮೆನ್‌ ಮತ್ತು ಮ್ಯಾಕ್ಸಿಕ್ಯಾಬ್‌ ಸಂಘಟನೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಸ್ಪಂದನೆಯ ನಿರೀಕ್ಷೆ
ಜಿಲ್ಲಾ ಸಂಘಟನೆ ವತಿಯಿಂದ ಮತ್ತು ಆಯಾ ಪ್ರದೇಶಗಳ ಘಟಕಗಳ ಮೂಲಕ ಸಹೋದ್ಯೋಗಿಗಳಿಗೆ ಅಗತ್ಯ ನೆರವನ್ನು ನೀಡುತ್ತಿದ್ದೇವೆ. ದಿನಸಿ ವಸ್ತುಗಳನ್ನು ವಿತರಿಸುವ ಕೆಲಸ ನಡೆಯುತ್ತಿದೆ. ಆರ್ಥಿಕ ಸಂಕಷ್ಟಕ್ಕೆ ಒಳಗಾದ ಚಾಲಕ-ಮಾಲಕರ ನೆರವಿಗೆ ಸರಕಾರಕ್ಕೂ ಮನವಿ ಮಾಡಿದ್ದೇವೆ. ಸ್ಪಂದನೆಯ ನಿರೀಕ್ಷೆಯಲ್ಲಿದ್ದೇವೆ.
-ರಮೇಶ್‌ ಕೋಟ್ಯಾನ್‌,
ಪ್ರಧಾನ ಕಾರ್ಯದರ್ಶಿ,
ಜಿಲ್ಲಾ ಟ್ಯಾಕ್ಸಿಮೆನ್‌ ಮತ್ತು ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನ್‌, ಉಡುಪಿ.

ಟಾಪ್ ನ್ಯೂಸ್

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

13

Udupi: ಅಪಾಯಕಾರಿಯಾಗಿ ಬಸ್‌ ಚಾಲನೆ: ಪ್ರಕರಣ ದಾಖಲು

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

sand

Malpe: ಮರಳು ಅಕ್ರಮ ಸಂಗ್ರಹ, ಕೇಸು ದಾಖಲು

kurkalu: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

kurkalu: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.